ಕೃಷಿ ತಜ್ಞ ರಾಜು ತೆಗ್ಗಳ್ಳಿ, ಪಶು ವೈದ್ಯಾಧಿಕಾರಿ ಯಲ್ಲಪ್ಪ ಇಂಗಳೆ, ಡಾ.ಮಂಜುನಾಥ ಅವರು ಹೈನುಗಾರಿಕೆ ಹಾಗೂ ಎರೆಹುಳು ತಯಾರಿಕೆ ಕುರಿತು ತರಬೇತಿ ನೀಡಿದರು. ಕೆಎಂಎಫ್ ನಿರ್ದೇಶಕರಾದ ಚಂದ್ರಕಾಂತ ಭೂಸನೂರು, ಈರಣ್ಣಾ ಝಳಕಿ, ತಾಲ್ಲೂಕು ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ಸಂಜಯ ರೆಡ್ಡಿ, ಶಶಿಕಾಂತ ಪಾಟೀಲ, ಗುರುಲಿಂಗಪ್ಪ ಸಕ್ಕರಗಿ, ಶ್ರೀಶೈಲ ಸ್ವಾಮಿ, ಮಲ್ಲಿನಾಥ ಪಾಟೀಲ ಇದ್ದರು. ರಾಮಣ್ಣಾ ಸುತಾರ ನಿರೂಪಿಸಿದರು. ರೇವಣಸಿದ್ದಪ್ಪ ಅಪಚಂದೆ ಸ್ವಾಗತಿಸಿದರು.