<p><strong>ಚಿತ್ತಾಪುರ: </strong>4 ದಶಕಗಳ ಹಿಂದೆ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿ ಕಾಗಿಣಾ ನದಿಗೆ ಕಟ್ಟಲಾದ ಸೇತುವೆ ಎತ್ತರ ಕಡಿಮೆಯಿದ್ದು, ಮಳೆಗಾಲದಲ್ಲಿ ಉಕ್ಕಿ ಬರುವ ಪ್ರವಾಹದಲ್ಲಿ ಪದೇ ಪದೇ ಮುಳುಗುತ್ತದೆ. ಎಲ್ಲರ ಹಿತದೃಷ್ಟಿಯಿಂದ ಎತ್ತರವಾದ ಹೊಸ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಪ್ರತಿ ವರ್ಷ ಮಳೆಗಾಲದಲ್ಲಿ ಸುರಿಯುವ ಮಳೆ ಮತ್ತು ನದಿಯಲ್ಲಿ ಬರುವ ಪ್ರವಾಹದಿಂದ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ ಅಲ್ಲದೇ ತಾಲ್ಲೂಕಿನ ಹಳ್ಳಿಗಳು ಅಲ್ಲದೇ ಕಾಳಗಿ, ಸೇಡಂ ತಾಲ್ಲೂಕು, ಜಿಲ್ಲಾ ಕೇಂದ್ರ ಕಲಬುರ್ಗಿ ಸಂಪರ್ಕ ಕಡಿದು ಹೋಗುತ್ತದೆ.</p>.<p>‘ಸೇತುವೆ ಮುಳುಗಡೆಯಿಂದ ಸಂಕಷ್ಟಕ್ಕೀಡಾಗುತ್ತೇವೆ. ಚಿತ್ತಾಪುರ ಪಟ್ಟಣಕ್ಕೆ ರೈತರು, ವ್ಯಾಪಾರಿಗಳು, ಸರ್ಕಾರಿ ನೌಕರರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗುತ್ತದೆ. ಬೇರೆ ಮಾರ್ಗ ದಲ್ಲಿ ಓಡಾಟ ಅಷ್ಟು ಸುಲಭವಾಗಿ ಇರುವುದಿಲ್ಲ’ ಎಂದು ಜನ ಹೇಳುತ್ತಾರೆ.</p>.<p>‘ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಹೊಸ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯು ದಶಕದ ಹಿಂದೆಯೇ ₹30 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಇದಕ್ಕೆ ಪೂರಕವಾಗಿ ಸರ್ಕಾರದಿಂದ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಜನರು ಬೇಸರದಿಂದ ಹೇಳುತ್ತಾರೆ.</p>.<p>ತೆಲಂಗಾಣದ ಗಡಿಯಿಂದ ಪುಟಪಾಕ್, ನಾರಾಯಣಪೇಟ, ಗುರುಮಠಕಲ್ ಮೂಲಕ ಬರುವ ರಾಜ್ಯ ಹೆದ್ದಾರಿ (ಎಸ್.ಎಚ್-126) ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಹತ್ತಿರ ರಾಮತೀರ್ಥ, ಭಂಕಲಗಾ, ಹೊಸೂರ, ಸಾತನೂರ, ಚಿತ್ತಾಪುರ, ದಂಡೋತಿ, ಕಲಗುರ್ತಿ, ಹೆಬ್ಬಾಳ ಮಾರ್ಗವಾಗಿ ಕಮಲಾಪುರದ ಹತ್ತಿರ ಕಲಬುರ್ಗಿ- ಹುಮನಾಬಾದ್ ಹೆದ್ದಾರಿಗೆ ಕೂಡುತ್ತದೆ. ದಂಡೋತಿ ಸೇತುವೆ ನಿರ್ಮಿಸಲು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (ಕೆಎಸ್ಎಚ್ಡಿಪಿ) ಸೇತುವೆ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ತಾಪುರ: </strong>4 ದಶಕಗಳ ಹಿಂದೆ ತಾಲ್ಲೂಕಿನ ದಂಡೋತಿ ಗ್ರಾಮದ ಬಳಿ ಕಾಗಿಣಾ ನದಿಗೆ ಕಟ್ಟಲಾದ ಸೇತುವೆ ಎತ್ತರ ಕಡಿಮೆಯಿದ್ದು, ಮಳೆಗಾಲದಲ್ಲಿ ಉಕ್ಕಿ ಬರುವ ಪ್ರವಾಹದಲ್ಲಿ ಪದೇ ಪದೇ ಮುಳುಗುತ್ತದೆ. ಎಲ್ಲರ ಹಿತದೃಷ್ಟಿಯಿಂದ ಎತ್ತರವಾದ ಹೊಸ ಸೇತುವೆ ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<p>ಪ್ರತಿ ವರ್ಷ ಮಳೆಗಾಲದಲ್ಲಿ ಸುರಿಯುವ ಮಳೆ ಮತ್ತು ನದಿಯಲ್ಲಿ ಬರುವ ಪ್ರವಾಹದಿಂದ ಸೇತುವೆ ಮುಳುಗಡೆಯಾಗುತ್ತದೆ. ಇದರಿಂದ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗುತ್ತದೆ ಅಲ್ಲದೇ ತಾಲ್ಲೂಕಿನ ಹಳ್ಳಿಗಳು ಅಲ್ಲದೇ ಕಾಳಗಿ, ಸೇಡಂ ತಾಲ್ಲೂಕು, ಜಿಲ್ಲಾ ಕೇಂದ್ರ ಕಲಬುರ್ಗಿ ಸಂಪರ್ಕ ಕಡಿದು ಹೋಗುತ್ತದೆ.</p>.<p>‘ಸೇತುವೆ ಮುಳುಗಡೆಯಿಂದ ಸಂಕಷ್ಟಕ್ಕೀಡಾಗುತ್ತೇವೆ. ಚಿತ್ತಾಪುರ ಪಟ್ಟಣಕ್ಕೆ ರೈತರು, ವ್ಯಾಪಾರಿಗಳು, ಸರ್ಕಾರಿ ನೌಕರರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗುತ್ತದೆ. ಬೇರೆ ಮಾರ್ಗ ದಲ್ಲಿ ಓಡಾಟ ಅಷ್ಟು ಸುಲಭವಾಗಿ ಇರುವುದಿಲ್ಲ’ ಎಂದು ಜನ ಹೇಳುತ್ತಾರೆ.</p>.<p>‘ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಹೊಸ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯು ದಶಕದ ಹಿಂದೆಯೇ ₹30 ಕೋಟಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಇದಕ್ಕೆ ಪೂರಕವಾಗಿ ಸರ್ಕಾರದಿಂದ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ಜನರು ಬೇಸರದಿಂದ ಹೇಳುತ್ತಾರೆ.</p>.<p>ತೆಲಂಗಾಣದ ಗಡಿಯಿಂದ ಪುಟಪಾಕ್, ನಾರಾಯಣಪೇಟ, ಗುರುಮಠಕಲ್ ಮೂಲಕ ಬರುವ ರಾಜ್ಯ ಹೆದ್ದಾರಿ (ಎಸ್.ಎಚ್-126) ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಹತ್ತಿರ ರಾಮತೀರ್ಥ, ಭಂಕಲಗಾ, ಹೊಸೂರ, ಸಾತನೂರ, ಚಿತ್ತಾಪುರ, ದಂಡೋತಿ, ಕಲಗುರ್ತಿ, ಹೆಬ್ಬಾಳ ಮಾರ್ಗವಾಗಿ ಕಮಲಾಪುರದ ಹತ್ತಿರ ಕಲಬುರ್ಗಿ- ಹುಮನಾಬಾದ್ ಹೆದ್ದಾರಿಗೆ ಕೂಡುತ್ತದೆ. ದಂಡೋತಿ ಸೇತುವೆ ನಿರ್ಮಿಸಲು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ (ಕೆಎಸ್ಎಚ್ಡಿಪಿ) ಸೇತುವೆ ಕಾಮಗಾರಿ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>