ಕಟ್ಟ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮಳೆ ಬಂದರೆ ಕೆಲವು ಕೊಠಡಿಗಳು ಸೋರುತ್ತವೆ. ಇಂತಹ ಶಿಥಲಾವಸ್ಥೆಯಲ್ಲಿರುವ ಕಚೇರಿಯಲ್ಲಿಯೇ ಸಿಬ್ಬಂದಿ ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಾರೆ. ಇಲ್ಲಿನ ತಹಶೀಲ್ದಾರ್ ಸರ್ಕಾರಕ್ಕೆ ಹೊಸ ಕಟ್ಟಡಕ್ಕೆ ಮಂಜೂರಾತಿಗೆ ಪತ್ರ ಬರೆಯಲಾಗಿದೆ. ಆದರೆ ಈವರೆಗೂ ಮಂಜೂರಾಗಿಲ್ಲ. ಇದು ಸಾರ್ವಜನಿಕರ ಜೀವ ನುಂಗುವ ಕಟ್ಟಡವಾಗಿ ಬದಲಾಗುತ್ತಿದೆ. ಒಂದು ವೇಳೆ ಕಟ್ಟಡ ಶಿಥಲಾವಸ್ಥೆಯಿಂದ ಬಿದ್ದರೆ ಅಮಾಯಕರ ಜೀವ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.