<p><strong>ಕಲಬುರಗಿ:</strong> ಈ ಭಾಗದ ಆರಾಧ್ಯ ದೈವ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ಭಕ್ತಸಾಗರವೇ ಹರಿದು ಬರುತ್ತಿದೆ.</p>.<p>ಪಾದಯಾತ್ರೆ ಸೇರಿದಂತೆ ವಿವಿಧ ವಾಹನಗಳ ಮೂಲಕ ಬರುತ್ತಿರುವ ಭಕ್ತರು, ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.</p>.<p>ಬಿಲ್ವಪತ್ರೆ, ತೆಂಗಿನಕಾಯಿ, ಕರ್ಪೂರ, ಪುಷ್ಪಗಳನ್ನು ಅರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ.</p>.<h2>ದಾಸೋಹಕ್ಕೆ ಪೈಪೋಟಿ: </h2><p>ಶರಣ ಬಸವೇಶ್ವರರು, ಶರಣ ಬಸವೇಶ್ವರ ಮಹಾ ದಾಸೋಹ ಸಂಸ್ಥಾನ ಈ ಭಾಗದಲ್ಲಿ ದಾಸೋಹಕ್ಕೆ ಹೆಸರುವಾಸಿ. ನಿತ್ಯವೂ ದಾಸೋಹ ವ್ಯವಸ್ಥೆ ಇಲ್ಲಿನ ಪದ್ಧತಿ. ಆದರೆ, ಶ್ರಾವಣ ಮಾಸದ ಮೂರನೇ ಸೋಮವಾರ ಭಕ್ತರಿಂದಲೂ ದಾಸೋಹ ಸೇವೆ ಮಾಡಲು ಪೈಪೋಟಿ ಕಂಡು ಬಂತು.</p> <p>ದೇವಸ್ಥಾನಕ್ಕೆ ಬಂದ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ತಮ್ಮ ಶಕ್ತ್ಯಾನುಸಾರ ಭಕ್ತರನ್ನು ಕರೆದು ಕರೆದು ಊಟ ಉಣಬಡಿಸುತ್ತಿರುವ ದೃಶ್ಯ ಕಂಡು ಬಂತು.</p>. <p>ಬೆಳಿಗ್ಗೆ ಶಿರಾ, ಉಪ್ಪಿಟ್ಟು, ಪುಲಾವ ಉಣಬಡಿಸಿದ ಭಕ್ತರು, ಮಧ್ಯಾಹ್ನ ಶಿರಾ, ಗೋದಿ ಹುಗ್ಗಿ, ಮಸಾಲೆ ಅನ್ನ-ಸಾರು, ಮೊಸರಣ್ಣ ಉಣ ಬಡಿಸಿದರು. </p> <p>ಕಣ್ಣಿ ಮಾರ್ಕೆಟ್ ರೈತ ವ್ಯಾಪಾರಿಗಳ ಸಂಘ, ಶರಣ ಬಸವೇಶ್ವರರ ತರುಣ ಸಂಘ, ನವ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘ, ಶಿವಭಕ್ತ ತಿಪ್ಪಣ್ಣಗೌಡರ ಬೋಧನ, ಶಾಹಬಜಾರನ ಭಾವಗಿ ಪಬ್ಲಿಸಿಟಿಸಿ ಟೆಂಟ್ ಹೌಸ್ ಕಡೆಯಿಂದ ಇಡೀದಿನ ಅನ್ನಸಂತರ್ಪಣೆ ಜರುಗಿತು.</p> <p>ಇದಲ್ಲದೇ ಭಕ್ತರು ತಮ್ಮ ಆರ್ಥಿಕ ಸಾಮರ್ಥ್ಯದ ಅನುಸಾರ ಮೊಬೈಕ್ ವಾಹನಗಳು, ಡಬ್ಬಿಗಳು, ದೊಡ್ಡ ಬೋಗಣಿಗಳಲ್ಲಿ ಸಿದ್ಧಪಡಿಸಿ ತಂದಿದ್ದ ಆಹಾರ ಭಕ್ತರನ್ನು ಕರೆ ಕರೆದು ಉಣಬಡಿಸಿದರು. ಹಲವು ಜನರು ನೀರಿನ ಪ್ಯಾಕೆಟ್ಗಳನ್ನು ಹಂಚಿದ್ದು ಕಂಡು ಬಂತು.</p> <p>ಬಿಲ್ವಪತ್ರೆ, ಹೂವು-ಹಣ್ಣುಗಳ ಮಾರಾಟವೂ ಜೋರಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಈ ಭಾಗದ ಆರಾಧ್ಯ ದೈವ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರದ ಅಂಗವಾಗಿ ಭಕ್ತಸಾಗರವೇ ಹರಿದು ಬರುತ್ತಿದೆ.</p>.<p>ಪಾದಯಾತ್ರೆ ಸೇರಿದಂತೆ ವಿವಿಧ ವಾಹನಗಳ ಮೂಲಕ ಬರುತ್ತಿರುವ ಭಕ್ತರು, ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.</p>.<p>ಬಿಲ್ವಪತ್ರೆ, ತೆಂಗಿನಕಾಯಿ, ಕರ್ಪೂರ, ಪುಷ್ಪಗಳನ್ನು ಅರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ.</p>.<h2>ದಾಸೋಹಕ್ಕೆ ಪೈಪೋಟಿ: </h2><p>ಶರಣ ಬಸವೇಶ್ವರರು, ಶರಣ ಬಸವೇಶ್ವರ ಮಹಾ ದಾಸೋಹ ಸಂಸ್ಥಾನ ಈ ಭಾಗದಲ್ಲಿ ದಾಸೋಹಕ್ಕೆ ಹೆಸರುವಾಸಿ. ನಿತ್ಯವೂ ದಾಸೋಹ ವ್ಯವಸ್ಥೆ ಇಲ್ಲಿನ ಪದ್ಧತಿ. ಆದರೆ, ಶ್ರಾವಣ ಮಾಸದ ಮೂರನೇ ಸೋಮವಾರ ಭಕ್ತರಿಂದಲೂ ದಾಸೋಹ ಸೇವೆ ಮಾಡಲು ಪೈಪೋಟಿ ಕಂಡು ಬಂತು.</p> <p>ದೇವಸ್ಥಾನಕ್ಕೆ ಬಂದ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ತಮ್ಮ ಶಕ್ತ್ಯಾನುಸಾರ ಭಕ್ತರನ್ನು ಕರೆದು ಕರೆದು ಊಟ ಉಣಬಡಿಸುತ್ತಿರುವ ದೃಶ್ಯ ಕಂಡು ಬಂತು.</p>. <p>ಬೆಳಿಗ್ಗೆ ಶಿರಾ, ಉಪ್ಪಿಟ್ಟು, ಪುಲಾವ ಉಣಬಡಿಸಿದ ಭಕ್ತರು, ಮಧ್ಯಾಹ್ನ ಶಿರಾ, ಗೋದಿ ಹುಗ್ಗಿ, ಮಸಾಲೆ ಅನ್ನ-ಸಾರು, ಮೊಸರಣ್ಣ ಉಣ ಬಡಿಸಿದರು. </p> <p>ಕಣ್ಣಿ ಮಾರ್ಕೆಟ್ ರೈತ ವ್ಯಾಪಾರಿಗಳ ಸಂಘ, ಶರಣ ಬಸವೇಶ್ವರರ ತರುಣ ಸಂಘ, ನವ ಕಲ್ಯಾಣ ಕಟ್ಟಡ ಕಾರ್ಮಿಕರ ಸಂಘ, ಶಿವಭಕ್ತ ತಿಪ್ಪಣ್ಣಗೌಡರ ಬೋಧನ, ಶಾಹಬಜಾರನ ಭಾವಗಿ ಪಬ್ಲಿಸಿಟಿಸಿ ಟೆಂಟ್ ಹೌಸ್ ಕಡೆಯಿಂದ ಇಡೀದಿನ ಅನ್ನಸಂತರ್ಪಣೆ ಜರುಗಿತು.</p> <p>ಇದಲ್ಲದೇ ಭಕ್ತರು ತಮ್ಮ ಆರ್ಥಿಕ ಸಾಮರ್ಥ್ಯದ ಅನುಸಾರ ಮೊಬೈಕ್ ವಾಹನಗಳು, ಡಬ್ಬಿಗಳು, ದೊಡ್ಡ ಬೋಗಣಿಗಳಲ್ಲಿ ಸಿದ್ಧಪಡಿಸಿ ತಂದಿದ್ದ ಆಹಾರ ಭಕ್ತರನ್ನು ಕರೆ ಕರೆದು ಉಣಬಡಿಸಿದರು. ಹಲವು ಜನರು ನೀರಿನ ಪ್ಯಾಕೆಟ್ಗಳನ್ನು ಹಂಚಿದ್ದು ಕಂಡು ಬಂತು.</p> <p>ಬಿಲ್ವಪತ್ರೆ, ಹೂವು-ಹಣ್ಣುಗಳ ಮಾರಾಟವೂ ಜೋರಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>