<p><strong>ಕಲಬುರ್ಗಿ</strong>: ಇಲ್ಲಿನ ಜಿಮ್ಸ್ ಆಸ್ಪತ್ರೆಯ ಎರಡನೇ ಮಹಡಿಯ ಕೋವಿಡ್ ವಾರ್ಡ್ನಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟು ಹತ್ತು ಗಂಟೆಗಳಾದರೂ ಯಾವುದೇ ಸಿಬ್ಬಂದಿ ಗಮನಿಸಿಲ್ಲ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.</p>.<p>ನಾಲವಾರ ನಿವಾಸಿ ಹಫೀಜ್ ಬೇಗ್ ಕೋವಿಡ್ನಿಂದ ಮೃತಪಟ್ಟವರು. ತೀವ್ರ ಉಸಿರಾಟದ ತೊಂದರೆಯ ಕಾರಣ ಅವರು ಕೋವಿಡ್ ವಾರ್ಡ್ನ ಐಸಿಯು ವಾರ್ಡ್ನಲ್ಲಿ ದಾಖಲಾಗಿದ್ದರು. ಮೇ 5ರಂದು ತಡರಾತ್ರಿ 2ರ ಸುಮಾರಿಗೆ ಅವರು ಪ್ರಾಣ ಬಿಟ್ಟಿದ್ದಾರೆ. ಆದರೂ ಮಾರನೇ ದಿನ ಮಧ್ಯಾಹ್ನ 12ರವರೆಗೂ ಅವರ ಬಳಿ ಯಾರೂ ಬಂದಿಲ್ಲ. ಹಾಗಾಗಿ, ವ್ಯಕ್ತಿ ಮೃತಪಟ್ಟ ಸುದ್ದಿಯೇ ಸಂಬಂಧಿಕರಿಗೆ 12 ತಾಸುಗಳ ಬಳಿಕ ಸಿಕ್ಕಿದೆ.</p>.<p>ಹಫೀಜ್ ಬೇಗ್ ಅವರು ಮೃತಪಟ್ಟ ಬಗ್ಗೆ ಅವರ ಪಕ್ಕದ ಬೆಡ್ನ ಇನ್ನೊಬ್ಬ ಸೋಂಕಿತ ವ್ಯಕ್ತಿ ಮಾವನ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ರಿಯಾಜ್ ಖತೀಬ್ ಎಂಬುವವರಿಗೆ ಫೋನ್ ಮಾಡಿ ತಿಳಿಸಿದ್ದರು.</p>.<p>ಹಫೀಜ್ ಅವರು ಆಸ್ಪತ್ರೆಗೆ ಬಂದು ಮೃತನ ಕುಟುಂಬದವರು ಹಾಗೂ ವೈದ್ಯರ ಜತೆಗೆ ಮಾತನಾಡಿದ ಶವ ಹಸ್ತಾಂತರಿಸಿದರು.</p>.<p>‘ಜಿಮ್ಸ್ನಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಪ್ರಾಣ ಹೋಗಿ, ದೇಹವು ಬಾತುಕೊಂಡಿದ್ದರೂ ಯಾರೂ ಕಣ್ಣೆತ್ತಿ ನೋಡಿಲ್ಲ’ ಎಂದು ಹಫೀಜ್ ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ</strong>: ಇಲ್ಲಿನ ಜಿಮ್ಸ್ ಆಸ್ಪತ್ರೆಯ ಎರಡನೇ ಮಹಡಿಯ ಕೋವಿಡ್ ವಾರ್ಡ್ನಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟು ಹತ್ತು ಗಂಟೆಗಳಾದರೂ ಯಾವುದೇ ಸಿಬ್ಬಂದಿ ಗಮನಿಸಿಲ್ಲ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.</p>.<p>ನಾಲವಾರ ನಿವಾಸಿ ಹಫೀಜ್ ಬೇಗ್ ಕೋವಿಡ್ನಿಂದ ಮೃತಪಟ್ಟವರು. ತೀವ್ರ ಉಸಿರಾಟದ ತೊಂದರೆಯ ಕಾರಣ ಅವರು ಕೋವಿಡ್ ವಾರ್ಡ್ನ ಐಸಿಯು ವಾರ್ಡ್ನಲ್ಲಿ ದಾಖಲಾಗಿದ್ದರು. ಮೇ 5ರಂದು ತಡರಾತ್ರಿ 2ರ ಸುಮಾರಿಗೆ ಅವರು ಪ್ರಾಣ ಬಿಟ್ಟಿದ್ದಾರೆ. ಆದರೂ ಮಾರನೇ ದಿನ ಮಧ್ಯಾಹ್ನ 12ರವರೆಗೂ ಅವರ ಬಳಿ ಯಾರೂ ಬಂದಿಲ್ಲ. ಹಾಗಾಗಿ, ವ್ಯಕ್ತಿ ಮೃತಪಟ್ಟ ಸುದ್ದಿಯೇ ಸಂಬಂಧಿಕರಿಗೆ 12 ತಾಸುಗಳ ಬಳಿಕ ಸಿಕ್ಕಿದೆ.</p>.<p>ಹಫೀಜ್ ಬೇಗ್ ಅವರು ಮೃತಪಟ್ಟ ಬಗ್ಗೆ ಅವರ ಪಕ್ಕದ ಬೆಡ್ನ ಇನ್ನೊಬ್ಬ ಸೋಂಕಿತ ವ್ಯಕ್ತಿ ಮಾವನ ಹಕ್ಕುಗಳ ಹೋರಾಟ ಸಮಿತಿಯ ಅಧ್ಯಕ್ಷ ರಿಯಾಜ್ ಖತೀಬ್ ಎಂಬುವವರಿಗೆ ಫೋನ್ ಮಾಡಿ ತಿಳಿಸಿದ್ದರು.</p>.<p>ಹಫೀಜ್ ಅವರು ಆಸ್ಪತ್ರೆಗೆ ಬಂದು ಮೃತನ ಕುಟುಂಬದವರು ಹಾಗೂ ವೈದ್ಯರ ಜತೆಗೆ ಮಾತನಾಡಿದ ಶವ ಹಸ್ತಾಂತರಿಸಿದರು.</p>.<p>‘ಜಿಮ್ಸ್ನಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಹೆಚ್ಚಾಗಿದೆ. ಪ್ರಾಣ ಹೋಗಿ, ದೇಹವು ಬಾತುಕೊಂಡಿದ್ದರೂ ಯಾರೂ ಕಣ್ಣೆತ್ತಿ ನೋಡಿಲ್ಲ’ ಎಂದು ಹಫೀಜ್ ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>