‘ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಾಂಸ್ಕೃತಿಕ, ಕೃಷಿ ಹಾಗೂ ಪ್ರಾದೇಶಿಕ ಮಹತ್ವಗಳನ್ನು ಬಿಂಬಿಸುವಂಥ ಕೆಲಸ ಮಾಡಬೇಕಾದ ದೂರದರ್ಶನ ಕೇಂದ್ರವು ಹಲವು ವರ್ಗಳಿಂದಲೇ ನಿಷ್ಕ್ರಿಯವಾಗಿದೆ. ಇದನ್ನು ಪೂರ್ಣ ನಿಲ್ಲಿಸುವ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು. ಈ ಭಾಗದ ಸಾಹಿತಿ, ಕಲಾವಿದರು ಮುಚ್ಚದಂತೆ ಸಾಕಷ್ಟು ಒತ್ತಾಯ ಮಾಡಿದ್ದೇವೆ. ಆದರೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ನಮ್ಮ ಸಂಸದರಾಗಲಿ ಜನರ ಧ್ವನಿಗೆ ಬೆಲೆ ಕೊಡಲಿಲ್ಲ. ಸಾಂಸ್ಕೃತಿಕ ಸಿರಿವಂತಿಕೆ ಬೆಳಗಬೇಕಾದ ಕೇಂದ್ರವನ್ನು ಅಭಿವೃದ್ಧಿಪಡಿಸುವ ಬದಲು ಎತ್ತಂಗಡಿ ಮಾಡಿದ್ದು, ಈ ಭಾಗದ ಬಗ್ಗೆ ಸರ್ಕಾರ ತಳೆದ ಧೋರಣೆ ತೋರಿಸುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ಆಕ್ರೋಶ ಹೊರಹಾಕಿದ್ದಾರೆ.