<p>ಕಲಬುರ್ಗಿ: ಭಾರಿ ಬೆಲೆಬಾಳುವಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಆಳಂದ ತಾಲ್ಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಅವರಿಂದ ₹ 3.91 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿ ಅವರಿಂದ ₹ 1.27 ಲಕ್ಷ ಮೌಲ್ಯದ ಪ್ಲಾಸ್ಮಾ ಕಟಿಂಗ್ ಮಷಿನ್, ₹ 64 ಸಾವಿರ ಮೌಲ್ಯದ ಗಿಯರ್ ಬಾಕ್ಸ್, 25,984 ಮೌಲ್ಯದ ಎಲ್ಇಡಿ ಲೈಟ್ ಫಿಟ್ಟಿಂಗ್ ಮಟೀರಿಯಲ್ಸ್, ₹ 3,830 ಮೌಲ್ಯದ ಟ್ಯೂಬ್ಲೈಟ್, ₹ 4,400 ಮೌಲ್ಯದ ಎಲ್ಇಡಿ ಬಲ್ಬ್, ₹ 5 ಸಾವಿರ ಮೌಲ್ಯದ ಡೀಸೆಲ್, ₹ 10 ಸಾವಿರ ಮೌಲ್ಯದ ಅಹುಜಾ ಕಂಪನಿಯ ಎಂಪ್ಲಿಫೈರ್, ಎರಡು ಮೋಟರ್ ಸೈಕಲ್ ಸೇರಿದಂತೆ ₹ 3.91 ಲಕ್ಷದ ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.</p>.<p>ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಎಸ್., ನಿಂಬರ್ಗಾ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಸವರಾಜ, ಸುವರ್ಣಾ, ಕಾನ್ಸ್ಟೆಬಲ್ಗಳಾದ ಶಿವಾಜಿ, ಮೆಹಬೂಬ್ ಶೇಖ್, ಚಂದ್ರಶೇಖರ, ಮಲ್ಲಿಕಾರ್ಜುನ ಗೋಟೂರ, ಬಸವರಾಜ ಪೂಜಾರಿ, ಸುಧಾಕರ, ಬದ್ರೊದ್ದೀನ್, ಗುರುಲಿಂಗಯ್ಯ ಸ್ವಾಮಿ, ಶರಣಬಸಪ್ಪ ಕೋಳಶೆಟ್ಟಿ, ಲಕ್ಷ್ಮಿಪುತ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಲಬುರ್ಗಿ: ಭಾರಿ ಬೆಲೆಬಾಳುವಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಆಳಂದ ತಾಲ್ಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಅವರಿಂದ ₹ 3.91 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.</p>.<p>ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿ ಅವರಿಂದ ₹ 1.27 ಲಕ್ಷ ಮೌಲ್ಯದ ಪ್ಲಾಸ್ಮಾ ಕಟಿಂಗ್ ಮಷಿನ್, ₹ 64 ಸಾವಿರ ಮೌಲ್ಯದ ಗಿಯರ್ ಬಾಕ್ಸ್, 25,984 ಮೌಲ್ಯದ ಎಲ್ಇಡಿ ಲೈಟ್ ಫಿಟ್ಟಿಂಗ್ ಮಟೀರಿಯಲ್ಸ್, ₹ 3,830 ಮೌಲ್ಯದ ಟ್ಯೂಬ್ಲೈಟ್, ₹ 4,400 ಮೌಲ್ಯದ ಎಲ್ಇಡಿ ಬಲ್ಬ್, ₹ 5 ಸಾವಿರ ಮೌಲ್ಯದ ಡೀಸೆಲ್, ₹ 10 ಸಾವಿರ ಮೌಲ್ಯದ ಅಹುಜಾ ಕಂಪನಿಯ ಎಂಪ್ಲಿಫೈರ್, ಎರಡು ಮೋಟರ್ ಸೈಕಲ್ ಸೇರಿದಂತೆ ₹ 3.91 ಲಕ್ಷದ ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.</p>.<p>ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಎಸ್., ನಿಂಬರ್ಗಾ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಸವರಾಜ, ಸುವರ್ಣಾ, ಕಾನ್ಸ್ಟೆಬಲ್ಗಳಾದ ಶಿವಾಜಿ, ಮೆಹಬೂಬ್ ಶೇಖ್, ಚಂದ್ರಶೇಖರ, ಮಲ್ಲಿಕಾರ್ಜುನ ಗೋಟೂರ, ಬಸವರಾಜ ಪೂಜಾರಿ, ಸುಧಾಕರ, ಬದ್ರೊದ್ದೀನ್, ಗುರುಲಿಂಗಯ್ಯ ಸ್ವಾಮಿ, ಶರಣಬಸಪ್ಪ ಕೋಳಶೆಟ್ಟಿ, ಲಕ್ಷ್ಮಿಪುತ್ರ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>