<p><strong>ಕಲಬುರ್ಗಿ: </strong>ಎಲ್ಲಾ ಕ್ಷೇತ್ರದಲ್ಲಿ ದುಡಿಯುವವರಿಗೆ ಒಂದು ದಿನ ರಜೆ ಇದೆ. ಆದರೆ ಈ ಭೂಮಿಯ ಮೇಲೆ ನಿರಂತರವಾಗಿ ದುಡಿಯುವ ಮಹಿಳೆಯರಿಗೆ ರಜೆ ಎಂಬುದೇ ಇಲ್ಲ. ಹಾಗಾಗಿ ಮಹಿಳೆಯರು ದಿನನಿತ್ಯದ ಮನೆ ಕೆಲಸದ ಒತ್ತಡದ ಮಧ್ಯೆಯೂ ಸಮಯಕ್ಕೆ ಅನುಗುಣವಾಗಿ ವಿಶ್ರಾಂತಿ ತೆಗೆದುಕೊಳ್ಳಲೇಬೇಕು’ ವೈದ್ಯೆ ಡಾ.ವರಲಕ್ಷ್ಮಿ ಹತ್ತಿ ಅಭಿಪ್ರಾಯಪಟ್ಟರು.</p>.<p>ಕುಸನೂರ ರಸ್ತೆಯ ತಿಲಕ್ ನಗರದಲ್ಲಿ ಪ್ರಿಯಾಂಕ್–ಅಮಿತ್ ನಾಗಶೆಟ್ಟಿ ಮರಪಳ್ಳಿ ಮದುವೆ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ದುಡಿಯುವ ದೇಹಕ್ಕೆ ವಿಶ್ರಾಂತಿ ಅಗತ್ಯ. ಅನಾರೋಗ್ಯ ಆದಾಗ ಚಿಕ್ಸಿತೆ ತೆಗೆದುಕೂಳ್ಳುವುದಕಿಂತ ಮೊದಲೇ ಆರೋಗ್ಯದ ಕಡೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯ’ ಎಂದರು.</p>.<p>ಈ ಸಂದರ್ಭದಲ್ಲಿ ಡಾ.ವರಲಕ್ಷ್ಮಿ ಹತ್ತಿ, ನರ್ಸ್ ಇಂದುಮತಿ ಹಾಗೂ ಪಿಎಸ್ಐ ಭೀಮರಾವ ನಾಶಿ ಅವರನ್ನು ಸನ್ಮಾನಿಸುವ ಮೂಲಕ ‘ವಿಶ್ವ ಮಹಿಳಾ ಆರೋಗ್ಯ ದಿನ’ವನ್ನು ಆಚರಿಸಲಾಯಿತು ಎಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.</p>.<p>ವಿನೇೂದಕುಮಾರ ಜೇನೆವೆರಿ, ರಾಜಶೇಖರ ಮರಪಳ್ಳಿ, ರವೀಂದ್ರ ಮೈಲಾರಿ, ಮಲ್ಲುಗೌಡ, ರವಿ ಮರಪಳ್ಳಿ, ಷಣ್ಮುಖ ಪಾಟೀಲ, ಬಸವರಾಜ ಕೊಳಕೂರ, ಶೇಖರ ಮರಪಳ್ಳಿ, ಶಿವಕುಮಾರ ಮರಪಳ್ಳಿ, ವೀರೇಶ, ಅಪ್ಪೂ, ವಿಕಾಸ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಎಲ್ಲಾ ಕ್ಷೇತ್ರದಲ್ಲಿ ದುಡಿಯುವವರಿಗೆ ಒಂದು ದಿನ ರಜೆ ಇದೆ. ಆದರೆ ಈ ಭೂಮಿಯ ಮೇಲೆ ನಿರಂತರವಾಗಿ ದುಡಿಯುವ ಮಹಿಳೆಯರಿಗೆ ರಜೆ ಎಂಬುದೇ ಇಲ್ಲ. ಹಾಗಾಗಿ ಮಹಿಳೆಯರು ದಿನನಿತ್ಯದ ಮನೆ ಕೆಲಸದ ಒತ್ತಡದ ಮಧ್ಯೆಯೂ ಸಮಯಕ್ಕೆ ಅನುಗುಣವಾಗಿ ವಿಶ್ರಾಂತಿ ತೆಗೆದುಕೊಳ್ಳಲೇಬೇಕು’ ವೈದ್ಯೆ ಡಾ.ವರಲಕ್ಷ್ಮಿ ಹತ್ತಿ ಅಭಿಪ್ರಾಯಪಟ್ಟರು.</p>.<p>ಕುಸನೂರ ರಸ್ತೆಯ ತಿಲಕ್ ನಗರದಲ್ಲಿ ಪ್ರಿಯಾಂಕ್–ಅಮಿತ್ ನಾಗಶೆಟ್ಟಿ ಮರಪಳ್ಳಿ ಮದುವೆ ಸಮಾರಂಭದಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ದುಡಿಯುವ ದೇಹಕ್ಕೆ ವಿಶ್ರಾಂತಿ ಅಗತ್ಯ. ಅನಾರೋಗ್ಯ ಆದಾಗ ಚಿಕ್ಸಿತೆ ತೆಗೆದುಕೂಳ್ಳುವುದಕಿಂತ ಮೊದಲೇ ಆರೋಗ್ಯದ ಕಡೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಅಗತ್ಯ’ ಎಂದರು.</p>.<p>ಈ ಸಂದರ್ಭದಲ್ಲಿ ಡಾ.ವರಲಕ್ಷ್ಮಿ ಹತ್ತಿ, ನರ್ಸ್ ಇಂದುಮತಿ ಹಾಗೂ ಪಿಎಸ್ಐ ಭೀಮರಾವ ನಾಶಿ ಅವರನ್ನು ಸನ್ಮಾನಿಸುವ ಮೂಲಕ ‘ವಿಶ್ವ ಮಹಿಳಾ ಆರೋಗ್ಯ ದಿನ’ವನ್ನು ಆಚರಿಸಲಾಯಿತು ಎಂದು ವಚನೋತ್ಸವ ಪ್ರತಿಷ್ಠಾನದ ಯುವ ಘಟಕದ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.</p>.<p>ವಿನೇೂದಕುಮಾರ ಜೇನೆವೆರಿ, ರಾಜಶೇಖರ ಮರಪಳ್ಳಿ, ರವೀಂದ್ರ ಮೈಲಾರಿ, ಮಲ್ಲುಗೌಡ, ರವಿ ಮರಪಳ್ಳಿ, ಷಣ್ಮುಖ ಪಾಟೀಲ, ಬಸವರಾಜ ಕೊಳಕೂರ, ಶೇಖರ ಮರಪಳ್ಳಿ, ಶಿವಕುಮಾರ ಮರಪಳ್ಳಿ, ವೀರೇಶ, ಅಪ್ಪೂ, ವಿಕಾಸ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>