ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಸೂತಕದ ಮನೆಯಾದ ಹಾಬಾಳ(ಟಿ) ಗ್ರಾಮ

ಗ್ರಾಮಸ್ಥರಲ್ಲಿ ಮಡುಗಟ್ಟಿದ ದುಃಖ–ಕಂಬಿನಿ ಮಿಡಿದ ಸಂಬಂಧಿಕರು
Published : 9 ಮಾರ್ಚ್ 2025, 7:33 IST
Last Updated : 9 ಮಾರ್ಚ್ 2025, 7:33 IST
ಫಾಲೋ ಮಾಡಿ
Comments
‘ಊರಿನ ಇತಿಹಾಸದಲ್ಲಿಯೇ ಶುಕ್ರವಾರವು(ಮಾ.7) ದೊಡ್ಡ ದುರಂತದ ದಿನ. ಎರಡು ದಿನ ಊರಿಗೆ ಊರೇ ದುಃಖದಲ್ಲಿ ಮುಳುಗಿದೆ. ಬೈಕ್ ಅಪಘಾತದಲ್ಲಿ ನಾಲ್ವರು ಸಾಯುವುದು ದುರಂತವಲ್ಲದೇ ಮತ್ತೇನು?
ಸತೀಶ ಪೂಜಾರಿ ಮುಖಂಡ ಹಾಬಾಳ(ಟಿ)
ಮೂರು ಕುಟುಂಬಕ್ಕೆ ಒಬ್ಬರೇ ಗಂಡು ಮಕ್ಕಳು:
ಮೃತ ನಾಲ್ವರ ಕಟುಂಬದಲ್ಲಿ ಪ್ರಕಾಶ ಪೂಜಾರಿ ಎಂಬಾತನಿಗೆ ಒಬ್ಬ ಅಣ್ಣನಿದಿದ್ದು ಬಿಟ್ಟರೆ ಮಲ್ಲಿಕಾರ್ಜುನ ಪೂಜಾರಿ ಸುರೇಶರೆಡ್ಡಿ ಮತ್ತು ಸಿದ್ದಪ್ಪ ಗುಡಿಸಿ ಅವರು ಕುಟುಂಬದಲ್ಲಿ ಒಬ್ಬೋಬ್ಬರೇ ಮಕ್ಕಳು. ಮೃತ ಪ್ರಕಾಶ ಪೂಜಾರಿಯ ತಂದೆ ತಿಪ್ಪಣ್ಣ ಪೂಜಾರಿ ಅವರು ಕುಂಭಮೇಳ ಹಾಗೂ ಪ್ರಯಾಗ್ ರಾಜ್‌ಗೆ ತೆರಳಿದ್ದರು. ಅಲ್ಲಿಂದ ನೇರವಾಗಿ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ಬಂದು ಶನಿವಾರ ರಾತ್ರಿ ಗ್ರಾಮಕ್ಕೆ ಮರಳಿದ ನಂತರ ಪುತ್ರನ ಅಂತ್ಯಕ್ರಿಯೆ ಜರುಗಿತು. ಮೃತರ ನಾಲ್ವರ ಪೈಕಿ ಸಿದ್ದಪ್ಪ ಗುಡಿಸಿ ಅಂತ್ಯಕ್ರಿಯೆ ಶುಕ್ರವಾರ ಜರುಗಿದರೆ ಸುರೇಶ ರೆಡ್ಡಿ ಪ್ರಕಾಶ ಪೂಜಾರಿ ಮತ್ತು ಮಲ್ಲಿಕಾರ್ಜುನ ಪೂಜಾರಿ ಅವರ ಅಂತ್ಯಕ್ರಿಯೆ ಶನಿವಾರ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT