‘ಮುಂಗಾರಿಗೂ ಮುನ್ನ ನಗರಗಳಿಗೆ ತೆರಳಿ ದುಡಿದು ಕೂಡಿಟ್ಟ ಹಣವನ್ನು ಬಿತ್ತನೆ, ಕಳೆ ತೆಗೆಯಲು ಬಳಸುತ್ತಿದ್ದೆ. ಲಾಕ್ಡೌನ್ನಿಂದ ಕೆಲಸವೇ ಇರಲಿಲ್ಲ. ಬಿತ್ತನೆಗಾಗಿ ಈಗಾಗಲೇ ₹ 30 ಸಾವಿರ ಖರ್ಚು ಮಾಡಿದ್ದೇವೆ. ಟ್ರ್ಯಾಕ್ಟರ್ ಬಾಡಿಗೆ ಕೊಡಲು ಬಳಿಯಲ್ಲಿ ₹ 2 ಸಾವಿರ ಹಣವಿಲ್ಲ. ಬೇರೆ ದಾರಿ ಇಲ್ಲದೆ ಮಳೆಯಿಂದ ಅಳಿದು ಉಳಿದ ಬೆಳೆಯನ್ನು ಕಾಪಾಡಿಕೊಳ್ಳಲು ಎತ್ತುಗಳಂತೆ ಶ್ರಮಪಡುತ್ತಿದ್ದೇವೆ‘ ಎನ್ನುತ್ತಾರೆ ರೈತ ಚನ್ನಬಸಪ್ಪನಾಟಿಕರ್.