<p><strong>ಆಳಂದ</strong>: ತಾಲ್ಲೂಕಿನ ನಿರಗುಡಿ ಗ್ರಾಮದ ಸಿದ್ಧೇಶ್ವರ ದೇವರ ಆರಂಭಗೊಂಡ ಐದು ದಿನಗಳ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಪಲ್ಲಕ್ಕಿ ಹಾಗೂ ಪಂಜಾಗಳ ಮೆರವಣಿಗೆ ಜರುಗಿತು.</p>.<p>ಬೆಳಗಿನ ಜಾವ ಗ್ರಾಮದ ಹೊರವಲಯದಲ್ಲಿನ ಸಿದ್ಧೇಶ್ವರ ದೇವಸ್ಥಾನದಿಂದ ಮುಖ್ಯ ಬೀದಿಯ ಮೂಲಕ ದೇಶಮುಖರವರ ಮನೆಯವರೆಗೆ ಪಲ್ಲಕ್ಕಿ, ಪಂಜಾದ ಉತ್ಸವ ಸಾಗಿತು. ಜನರು ಪಲ್ಲಕ್ಕಿ ಹಾಗೂ ಪಂಜಾ ದೇವರುಗಳಿಗೆ ನೀರು ಹಾಕಿ, ನೈವೇದ್ಯ, ತೆಂಗಿನ ಕಾಯಿ ಕರ್ಪ್ಯೂರ ಬೆಳಗಿ ದರ್ಶನ ಪಡೆದರು.</p>.<p>ದೀವಟಗಿ, ನಂದಿಕೋಲು, ಭಜನೆ ವಾದ್ಯ ವೈಭವದ ಮೂಲಕ ಪಲ್ಲಕ್ಕಿ ಮತ್ತು ಪಂಜಾವನ್ನು ಬರಮಾಡಿಕೊಂಡರು. </p>.<p>ಬಳಿಕ ಗ್ರಾಮದಲ್ಲಿ ಗೀಗೀ ಪದಗಳು ಜರುಗಿದವು. ಮಧ್ಯಾಹ್ನ ಜಂಗಿ ಪೈಲ್ವಾನರ ಕುಸ್ತಿ, ಸಂಜೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಹಾಗೂ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು. </p>.<p>ಉತ್ಸವದಲ್ಲಿ ಗ್ರಾ.ಪಂ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಮತ್ತು ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡು ಜಾತ್ರೆ ಯಶಸ್ಸಿಗೆ ಶ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ತಾಲ್ಲೂಕಿನ ನಿರಗುಡಿ ಗ್ರಾಮದ ಸಿದ್ಧೇಶ್ವರ ದೇವರ ಆರಂಭಗೊಂಡ ಐದು ದಿನಗಳ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಪಲ್ಲಕ್ಕಿ ಹಾಗೂ ಪಂಜಾಗಳ ಮೆರವಣಿಗೆ ಜರುಗಿತು.</p>.<p>ಬೆಳಗಿನ ಜಾವ ಗ್ರಾಮದ ಹೊರವಲಯದಲ್ಲಿನ ಸಿದ್ಧೇಶ್ವರ ದೇವಸ್ಥಾನದಿಂದ ಮುಖ್ಯ ಬೀದಿಯ ಮೂಲಕ ದೇಶಮುಖರವರ ಮನೆಯವರೆಗೆ ಪಲ್ಲಕ್ಕಿ, ಪಂಜಾದ ಉತ್ಸವ ಸಾಗಿತು. ಜನರು ಪಲ್ಲಕ್ಕಿ ಹಾಗೂ ಪಂಜಾ ದೇವರುಗಳಿಗೆ ನೀರು ಹಾಕಿ, ನೈವೇದ್ಯ, ತೆಂಗಿನ ಕಾಯಿ ಕರ್ಪ್ಯೂರ ಬೆಳಗಿ ದರ್ಶನ ಪಡೆದರು.</p>.<p>ದೀವಟಗಿ, ನಂದಿಕೋಲು, ಭಜನೆ ವಾದ್ಯ ವೈಭವದ ಮೂಲಕ ಪಲ್ಲಕ್ಕಿ ಮತ್ತು ಪಂಜಾವನ್ನು ಬರಮಾಡಿಕೊಂಡರು. </p>.<p>ಬಳಿಕ ಗ್ರಾಮದಲ್ಲಿ ಗೀಗೀ ಪದಗಳು ಜರುಗಿದವು. ಮಧ್ಯಾಹ್ನ ಜಂಗಿ ಪೈಲ್ವಾನರ ಕುಸ್ತಿ, ಸಂಜೆ ರಂಗು ರಂಗಿನ ಮದ್ದು ಸುಡುವ ಕಾರ್ಯಕ್ರಮ ಹಾಗೂ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯಿತು. </p>.<p>ಉತ್ಸವದಲ್ಲಿ ಗ್ರಾ.ಪಂ ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರು ಮತ್ತು ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡು ಜಾತ್ರೆ ಯಶಸ್ಸಿಗೆ ಶ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>