ಇದೇ 14ರಂದು ಗ್ರಾಮದ ಚಿದಾನಂದ ಸ್ವಾಮಿ, ಲಕ್ಷ್ಮಿಕಾಂತ ಪಾಟೀಲ, ಅನಂತರಾಜ ಜಗತಿ, ನಾಗರಾಜ ಜಗತಿ, ಲಕ್ಷ್ಮೀಪುತ್ರ, ಕಿಟ್ಟು ಗೌಡಪ್ಪಗೋಳ, ವೈಜನಾಥ, ವೀರೇಶ ಪಾಟೀಲ, ಮಹಾದೇವ ಪಟ್ಟಣೆ ಅವರು ಕೇದಾರನಾಥಕ್ಕೆ ತೆರಳಿದ್ದರು. ಕಳೆದ ಮೂರು ದಿನಗಳಿಂದ ಉತ್ತರಾಖಂಡದಲ್ಲಿ ಮೇಘಸ್ಪೋಟದಿಂದಾಗಿ ವ್ಯಾಪಕ ಮಳೆ ಸುರಿಯುತ್ತಿದ್ದುದರಿಂದ ಗೌರಿಕುಂಡದ ಸಣ್ಣ ಕೊಠಡಿಯಲ್ಲಿ ಕಳೆದಿದ್ದರು. ಅಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದ್ದರಿಂದ ಮೊಬೈಲ್ ಸ್ವಿಚ್ ಆಫ್ ಆಗಿ ಸಂಪರ್ಕವೂ ಕಡಿತಗೊಂಡಿತ್ತು. ಪೊಲೀಸರ ನೆರವಿನಿಂದ ಎಲ್ಲ ಯಾತ್ರಾರ್ಥಿಗಳು ಖಾಸಗಿ ವಾಹನದಲ್ಲಿ ಹರಿದ್ವಾರ ತಲುಪಿದ್ದಾರೆ. ರಾತ್ರಿ ಅಲ್ಲಿಂದ ಹೊರಟು ದೆಹಲಿ ತಲುಪಲಿದ್ದಾರೆ. ಇದೀಗ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ ಎಂದು ಅನಂತರಾಜ ಜುಗತಿ ಅವರ ಸಂಬಂಧಿ ರಮೇಶ ಜುಗತಿ ‘ಪ್ರಜಾವಾಣಿ’ಗೆ ತಿಳಿಸಿದರು.