ಸಣ್ಣ ಸುಳಿವೂ ಸಿಗದಂತೆ ಕೊಲೆ ಯೋಜನೆ ರೂಪಿಸಿದ್ದ ಆರೋಪಿಗಳೂ ಪರಾರಿಯಾಗಿದ್ದರು. ತಿಂಗಳುಗಟ್ಟಲೇ ಶ್ರಮವಹಿಸಿ ಕೊನೆಗೂ ಸಣ್ಣ ಸುಳಿವು ಪಡೆದ ಪಂಡಿತ ಸಗರ ಅವರು, 2020ರ ಡಿಸೆಂಬರ್ 10ರಂದು ಬೇಧಿಸಿದ್ದರು. ಬಿದ್ದಾಪುರ ಕಾಲೊನಿಯ ಅಂಬರೀಶ ಸುಭಾಷ ರಾಠೋಡ, ಶರಣಸಿರಸಗಿ ತಾಂಡಾದ ರಾಜಶೇಖರ ಅಲಿಯಾಸ್ ಶೇಖರ ರೇವಣಸಿದ್ಧ ರಾಠೋಡ, ವಿಜಯಪುರ ಜಿಲ್ಲೆಯ ಖತೀಜಾಪುರದ ನಾಮದೇವ ಹೇಮು ಲೋಣಾರಿ ಮತ್ತು ಹಡಗಿಲ್ ಹಾರುತಿ ಗ್ರಾಮದ ಗುಂಡು ಶರಣಪ್ಪ ರಾಠೋಡ ಎಂಬುವರನ್ನು ಬಂಧಿಸಿದ್ದರು.