<p><strong>ಕಲಬುರಗಿ</strong>: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ ಪ್ರಿಯಾಂಕಾ ರಾಠೋಡ ವಂಚನೆಗೆ ಒಳಗಾದವರು.</p>.<p>‘ನಮ್ಮ ತಂದೆಗೆ ವಿಜಯಪುರ ಜಿಲ್ಲೆಯ ಸಿಂದಗಿಯ ಲೋಹಿತ ಮೇತ್ರಿ ಅವರೊಂದಿಗೆ ಸ್ನೇಹವಿತ್ತು. ಆ ಸ್ನೇಹ ಬಳಸಿ ಲೋಹಿತ ನಮ್ಮ ತಂದೆ ಹೊಲ ಮಾರಿ ಇಟ್ಟುಕೊಂಡಿದ್ದ ಹಣದಲ್ಲಿ ₹ 2.50 ಲಕ್ಷ ಸಾಲವಾಗಿ ಪಡೆದಿದ್ದರು. ವರ್ಷದ ಬಳಿಕವೂ ಅದನ್ನು ಮರಳಿಸಿರಲಿಲ್ಲ. ಈ ನಡುವೆ ನಮ್ಮ ತಂದೆ 2021ರ ಮೇ ತಿಂಗಳಲ್ಲಿ ನಮ್ಮ ತಂದೆ ತೀರಿಕೊಂಡರು. ನಂತರವೂ ನನ್ನ ತಂಗಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ನನ್ನ ಹಾಗೂ ತಾಯಿಯಿಂದ ಆಗಾಗ ಹಣ ಪಡೆದಿದ್ದರು. 2020ರಿಂದ 2024ರ ಫೆಬ್ರುವರಿ 15ರ ತನಕ ಹಂತಹಂತವಾಗಿ ₹ 24.25 ಲಕ್ಷ ಪಡೆದಿದ್ದಾರೆ. ಇದರಲ್ಲಿ 2025ರ ಏಪ್ರಿಲ್ 11ರಂದು ₹ 50 ಸಾವಿರ ಕೊಟ್ಟಿದ್ದಾರೆ. ಇನ್ನುಳಿದ ಹಣ ನೀಡದೇ ವಂಚಿಸಿದ್ದಾರೆ’ ಎಂದು ದಾಮು ರಾಠೋಡ ಪುತ್ರಿ ಪ್ರಿಯಾಂಕಾ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p><strong>ಚಿನ್ನಾಭರಣ, ನಗದು ಕಳವು</strong></p>.<p><strong>ಕಲಬುರಗಿ</strong>: ಇಲ್ಲಿನ ಅಯೋಧ್ಯಾ ನಗರದ ರಾಮತೀರ್ಥ ದೇವಸ್ಥಾನ ಸಮೀಪದ ಮನೆಯೊಂದರ ಕೀಲಿ ಒಡೆದು ಕಳ್ಳರು 6 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.</p>.<p>ರವಿಚಂದ್ರ ಪಾಟೀಲ ಚಿನ್ನಾಭರಣ ಕಳೆದುಕೊಂಡವರು.</p>.<p>‘ಕಲಬುರಗಿಯ ಆರ್.ಜೆ.ನಗರದ ಅಕ್ಕಂದಿರ ಮನೆಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಮನೆಗೆ ಕೀಲಿ ಹಾಕಿ ಹೋಗಿದ್ದೆ. ಫೆಬ್ರುವರಿ 7ರಂದು ಸಂಜೆಯಿಂದ ಫೆಬ್ರುವರಿ 9ರ ರಾತ್ರಿ 10 ಗಂಟೆಗೆ ನಡುವೆ ಮನೆಯ ಕೀಲಿ ಒಡೆದು ಕಳವು ಮಾಡಲಾಗಿದೆ’ ಎಂದು ರವಿಚಂದ್ರ ಸಬರ್ಬನ್ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಹನುಮಾನ ತಾಂಡಾ ನಗರದ ಕುಟುಂಬವೊಂದಕ್ಕೆ ₹ 23.75 ಲಕ್ಷ ವಂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.</p>.<p>ಕಲಬುರಗಿಯ ಹನುಮಾನ ತಾಂಡಾದ ದಿ.ದಾಮು ರಾಠೋಡ ಹಾಗೂ ಅವರ ಪುತ್ರಿ ಪ್ರಿಯಾಂಕಾ ರಾಠೋಡ ವಂಚನೆಗೆ ಒಳಗಾದವರು.</p>.<p>‘ನಮ್ಮ ತಂದೆಗೆ ವಿಜಯಪುರ ಜಿಲ್ಲೆಯ ಸಿಂದಗಿಯ ಲೋಹಿತ ಮೇತ್ರಿ ಅವರೊಂದಿಗೆ ಸ್ನೇಹವಿತ್ತು. ಆ ಸ್ನೇಹ ಬಳಸಿ ಲೋಹಿತ ನಮ್ಮ ತಂದೆ ಹೊಲ ಮಾರಿ ಇಟ್ಟುಕೊಂಡಿದ್ದ ಹಣದಲ್ಲಿ ₹ 2.50 ಲಕ್ಷ ಸಾಲವಾಗಿ ಪಡೆದಿದ್ದರು. ವರ್ಷದ ಬಳಿಕವೂ ಅದನ್ನು ಮರಳಿಸಿರಲಿಲ್ಲ. ಈ ನಡುವೆ ನಮ್ಮ ತಂದೆ 2021ರ ಮೇ ತಿಂಗಳಲ್ಲಿ ನಮ್ಮ ತಂದೆ ತೀರಿಕೊಂಡರು. ನಂತರವೂ ನನ್ನ ತಂಗಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ನನ್ನ ಹಾಗೂ ತಾಯಿಯಿಂದ ಆಗಾಗ ಹಣ ಪಡೆದಿದ್ದರು. 2020ರಿಂದ 2024ರ ಫೆಬ್ರುವರಿ 15ರ ತನಕ ಹಂತಹಂತವಾಗಿ ₹ 24.25 ಲಕ್ಷ ಪಡೆದಿದ್ದಾರೆ. ಇದರಲ್ಲಿ 2025ರ ಏಪ್ರಿಲ್ 11ರಂದು ₹ 50 ಸಾವಿರ ಕೊಟ್ಟಿದ್ದಾರೆ. ಇನ್ನುಳಿದ ಹಣ ನೀಡದೇ ವಂಚಿಸಿದ್ದಾರೆ’ ಎಂದು ದಾಮು ರಾಠೋಡ ಪುತ್ರಿ ಪ್ರಿಯಾಂಕಾ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>.<p><strong>ಚಿನ್ನಾಭರಣ, ನಗದು ಕಳವು</strong></p>.<p><strong>ಕಲಬುರಗಿ</strong>: ಇಲ್ಲಿನ ಅಯೋಧ್ಯಾ ನಗರದ ರಾಮತೀರ್ಥ ದೇವಸ್ಥಾನ ಸಮೀಪದ ಮನೆಯೊಂದರ ಕೀಲಿ ಒಡೆದು ಕಳ್ಳರು 6 ಗ್ರಾಂ ಚಿನ್ನಾಭರಣ, 300 ಗ್ರಾಂ ಬೆಳ್ಳಿ ಆಭರಣ ಹಾಗೂ ₹ 1 ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.</p>.<p>ರವಿಚಂದ್ರ ಪಾಟೀಲ ಚಿನ್ನಾಭರಣ ಕಳೆದುಕೊಂಡವರು.</p>.<p>‘ಕಲಬುರಗಿಯ ಆರ್.ಜೆ.ನಗರದ ಅಕ್ಕಂದಿರ ಮನೆಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಮನೆಗೆ ಕೀಲಿ ಹಾಕಿ ಹೋಗಿದ್ದೆ. ಫೆಬ್ರುವರಿ 7ರಂದು ಸಂಜೆಯಿಂದ ಫೆಬ್ರುವರಿ 9ರ ರಾತ್ರಿ 10 ಗಂಟೆಗೆ ನಡುವೆ ಮನೆಯ ಕೀಲಿ ಒಡೆದು ಕಳವು ಮಾಡಲಾಗಿದೆ’ ಎಂದು ರವಿಚಂದ್ರ ಸಬರ್ಬನ್ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>