‘ಜಿಡಗಾ, ನಿಂಬರ್ಗಾ, ಸರಸಂಬಾ ಜಿಲ್ಲಾ ಪಂಚಾಯಿತಿ, ಕೆಲ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ಸೂಕ್ತ ಕಾರಣವಿಲ್ಲದೆ ಸ್ವಾರ್ಥ ರಾಜಕೀಯ, ಜಾತಿಯ ಮಾನದಂಡದ ಆಧಾರದ ಮೇಲೆ ವಿಭಜಿಸಿ ಕ್ಷೇತ್ರದ ಜನತೆಗೆ ಅನ್ಯಾಯ ಮಾಡಲಾಗಿತ್ತು. ಜನರ ಭಾವನೆಗಳನ್ನು ಗೌರವಿಸದ ತಾಲ್ಲೂಕು ತಹಶೀಲ್ದಾರ್, ಶಾಸಕರು ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು’ ಎಂದು ಅವರು ತಿಳಿಸಿದ್ದಾರೆ.