‘ವಿಭಾಗೀಯ ಕೇಂದ್ರವಾದ ಕಲಬುರ್ಗಿ ಜಿಲ್ಲೆಯ ಆಡಳಿತದ ಮೇಲೆ ಕಾರಜೋಳ ಅವರು ನಿಗಾ ವಹಿಸಿಲ್ಲ. ಅಭಿವೃದ್ಧಿಗೂ ಶ್ರಮಿಸಿಲ್ಲ. ಅವರು ತಮ್ಮ ಮತಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಮುಂಗಾರು ಬಿತ್ತನೆಗೆ ಸಕಾಲದಲ್ಲಿ ಬೀಜ, ಗೊಬ್ಬರ, ಕ್ರಿಮಿನಾಶಕ ಔಷಧಿ ಸಿಗದೆ ರೈತರು ಪರದಾಡುತ್ತಿದ್ದಾರೆ. ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾಗಿವೆ. ಅವರದ್ದೇ ನಿರ್ವಹಣೆಯ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ, ಸೇತುವೆಗಳು ಹಾಳಾಗಿವೆ’ ಎಂದು ಟೀಕಿಸಿದ್ದಾರೆ.