<p><strong>ಸೇಡಂ (ಕಲಬುರಗಿ):</strong> ‘ಪಕ್ಷಾತೀತವಾದ ಭಾರತೀಯ ಸಂಸ್ಕೃತಿ ಉತ್ಸವದಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡಿದೆ. ಯಾವುದೇ ಶಾಲಾ ಮಕ್ಕಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳದಂತೆ ಮೌಖಿಕ ಸೂಚನೆ ಕೊಟ್ಟಿದೆ. ಅದೇ ಸೂಚನೆ ಲಿಖಿತವಾಗಿ ಕೊಡುವ ಧೈರ್ಯವನ್ನೂ ಸರ್ಕಾರ ತೋರಿಲ್ಲ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.</p>.<p>ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.</p>.<p>‘ಇದು ಧೈರ್ಯವಿಲ್ಲದ ಹಾಗೂ ನಮ್ಮ ವಿಚಾರಧಾರೆ ವಿರೋಧವುಳ್ಳ ಸರ್ಕಾರವಾಗಿದೆ. ಮಕ್ಕಳಲ್ಲಿ ಯಾಕೆ ವಿಷ ಬೀಜ ಬಿತ್ತಬೇಕು?’ ಎಂದು ಪ್ರಶ್ನಿಸಿದರು.</p>.<p>‘ಕೊತ್ತಲ ಬಸವೇಶ್ವರ ವಿದ್ಯಾಸಂಸ್ಥೆ ಕಳೆದ ಎರಡ್ಮೂರು ದಶಕಗಳಲ್ಲಿ ಏನು ಮಾಡಿದೆ ಎಂಬುದನ್ನಾದರೂ ಸರ್ಕಾರ ಅಧ್ಯಯನ ಮಾಡಬೇಕಿತ್ತು. ಸ್ಥಳೀಯ ಶಾಸಕರೂ ಅದರ ಆಧಾರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.</p>.<p>‘ಸರ್ಕಾರದ ನಿರ್ಧಾರದಿಂದ ನಮಗೆ ದುಃಖವಾಗಿದೆ’ ಎಂದ ಅವರು ‘ಕಲಬುರಗಿಯಲ್ಲೂ ಈ ಉತ್ಸವಕ್ಕೆ ವಿರೋಧ ಮಾಡಿರುವುದು ಯಾವುದಕ್ಕಾಗಿ? ಭಾರತೀಯ ವಿಚಾರಧಾರೆ, ಕೃಷಿ ಪದ್ಧತಿ, ಆರೋಗ್ಯ ಪದ್ಧತಿ, ಕಲೆಯನ್ನೇ ಜನಕ್ಕೆ ಹೇಳಿಕೊಡುವುದು ತಪ್ಪೇ?’ ಎಂದು ಕೇಳಿದರು.</p>.<p>ಸರ್ಕಾರದ ವಿರೋಧದ ಬಗ್ಗೆ ಉತ್ಸವದ ಭಾಷಣದಲ್ಲೂ ಪ್ರಸ್ತಾಪಿಸಿದ ಸಚಿವರು, ‘ನಾವೆಲ್ಲ ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಆದರೆ, ಯಾವುದು ಸಂಸ್ಕೃತಿ ಉಳಿಸುತ್ತೆ, ಶಿಕ್ಷಣವನ್ನು ಮುಂದುವರಿಸುವ ಯತ್ನಗಳಿಗೆ ಪಕ್ಷ ರಾಜಕಾರಣ ಬಿಟ್ಟು ಬೆಂಬಲಿಸುವ ವಿಚಾರ ಕಲಿಯಬೇಕಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೇಡಂ (ಕಲಬುರಗಿ):</strong> ‘ಪಕ್ಷಾತೀತವಾದ ಭಾರತೀಯ ಸಂಸ್ಕೃತಿ ಉತ್ಸವದಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡಿದೆ. ಯಾವುದೇ ಶಾಲಾ ಮಕ್ಕಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳದಂತೆ ಮೌಖಿಕ ಸೂಚನೆ ಕೊಟ್ಟಿದೆ. ಅದೇ ಸೂಚನೆ ಲಿಖಿತವಾಗಿ ಕೊಡುವ ಧೈರ್ಯವನ್ನೂ ಸರ್ಕಾರ ತೋರಿಲ್ಲ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.</p>.<p>ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.</p>.<p>‘ಇದು ಧೈರ್ಯವಿಲ್ಲದ ಹಾಗೂ ನಮ್ಮ ವಿಚಾರಧಾರೆ ವಿರೋಧವುಳ್ಳ ಸರ್ಕಾರವಾಗಿದೆ. ಮಕ್ಕಳಲ್ಲಿ ಯಾಕೆ ವಿಷ ಬೀಜ ಬಿತ್ತಬೇಕು?’ ಎಂದು ಪ್ರಶ್ನಿಸಿದರು.</p>.<p>‘ಕೊತ್ತಲ ಬಸವೇಶ್ವರ ವಿದ್ಯಾಸಂಸ್ಥೆ ಕಳೆದ ಎರಡ್ಮೂರು ದಶಕಗಳಲ್ಲಿ ಏನು ಮಾಡಿದೆ ಎಂಬುದನ್ನಾದರೂ ಸರ್ಕಾರ ಅಧ್ಯಯನ ಮಾಡಬೇಕಿತ್ತು. ಸ್ಥಳೀಯ ಶಾಸಕರೂ ಅದರ ಆಧಾರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.</p>.<p>‘ಸರ್ಕಾರದ ನಿರ್ಧಾರದಿಂದ ನಮಗೆ ದುಃಖವಾಗಿದೆ’ ಎಂದ ಅವರು ‘ಕಲಬುರಗಿಯಲ್ಲೂ ಈ ಉತ್ಸವಕ್ಕೆ ವಿರೋಧ ಮಾಡಿರುವುದು ಯಾವುದಕ್ಕಾಗಿ? ಭಾರತೀಯ ವಿಚಾರಧಾರೆ, ಕೃಷಿ ಪದ್ಧತಿ, ಆರೋಗ್ಯ ಪದ್ಧತಿ, ಕಲೆಯನ್ನೇ ಜನಕ್ಕೆ ಹೇಳಿಕೊಡುವುದು ತಪ್ಪೇ?’ ಎಂದು ಕೇಳಿದರು.</p>.<p>ಸರ್ಕಾರದ ವಿರೋಧದ ಬಗ್ಗೆ ಉತ್ಸವದ ಭಾಷಣದಲ್ಲೂ ಪ್ರಸ್ತಾಪಿಸಿದ ಸಚಿವರು, ‘ನಾವೆಲ್ಲ ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಆದರೆ, ಯಾವುದು ಸಂಸ್ಕೃತಿ ಉಳಿಸುತ್ತೆ, ಶಿಕ್ಷಣವನ್ನು ಮುಂದುವರಿಸುವ ಯತ್ನಗಳಿಗೆ ಪಕ್ಷ ರಾಜಕಾರಣ ಬಿಟ್ಟು ಬೆಂಬಲಿಸುವ ವಿಚಾರ ಕಲಿಯಬೇಕಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>