<p><strong>ಚಿಂಚೋಳಿ: </strong>ಚಿಂಚೋಳಿ ವನ್ಯಜೀವಿ ಧಾಮವು ಮಳೆಯಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಸಿರು ವ್ಯಾಪಿಸಿದೆ. ಸಮೃದ್ಧ ಜೀವ ವೈವಿಧ್ಯತೆಯಿಂದ ಕೂಡಿರುವ ಈ ಕಾಡು ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮಳೆಗೆ ಹಸಿರು ರಾಶಿ ಹೊದ್ದುಕೊಂಡಿದೆ.</p>.<p>ಚಂದ್ರಂಪಳ್ಳಿ, ಮಾಣಿಕಪುರ, ಗೊಟ್ಟಂಗೊಟ್ಟ, ಎತ್ತಿಪೋತೆ, ಶೇರಿಭಿಕನಳ್ಳಿ, ಅಂತಾವರಂ, ಮೊಗದಂಪುರ, ಶಾದಿಪುರ, ಭೈರಂಪಳ್ಳಿ, ಸೋಮಲಿಂಗದಳ್ಳಿ, ಚಿಕ್ಕಲಿಂಗದಳ್ಳಿ ಸುತ್ತಲಿನ ಕಾಡು ಮೈದುಂಬಿಕೊಂಡಿದೆ.</p>.<p>ವನ್ಯಜೀವಿ ಧಾಮದ ಕೊತ್ವಾಲ್ ನಾಲಾ, ಮಂಡಿ ಬಸವಣ್ಣ ಕ್ಯಾಂಪ ಹಿಂದಿನ ನಾಲಾ, ಮಹಿಶಮ್ಮನ ಬೆಟ್ಟ, ಬಡೆಸಾಬ್, ಎತ್ತಿಪೋತೆ ನಾಲಾ ಹಾಗ ಬುರುಗದೊಡ್ಡಿ ಮೊದಲಾದ ಕಡೆ ತೊರೆಗಳಲ್ಲಿ ನೀರು ಗೋಚರಿಸುತ್ತಿದೆ.</p>.<p>ಸಮುದ್ರ ಮಟ್ಟದಿಂದ ಬುರುಗದೊಡ್ಡಿ 634 ಮೀಟರ್, ಶೇರಿಭಿಕನಳ್ಳಿ 601 ಮೀಟರ್, ಧರ್ಮಾಸಾಗರ 594 ಮೀಟರ್, ಗೊಟ್ಟಮಗೊಟ್ಟ 547 ಮೀಟರ್, ಶಾದಿಪುರ 502 ಮೀಟರ್, ಚಿಂದಾನೂರ 500 ಮೀಟರ್ ಮತ್ತು ಭೈರಂಪಳ್ಳಿ 478 ಮೀಟರ್ ಎತ್ತರದಲ್ಲಿದೆ. ಇವು ಚಾರಣಕ್ಕೆ ಹೇಳಿ ಮಾಡಿಸಿದ ತಾಣಗಳಾಗಿವೆ.</p>.<p>‘13,888 ಹೆಕ್ಟೇರ್ ವಿಸ್ತಾರದ ಈ ಕಾಡು ಬಯಲು ಸೀಮೆಯ ಪ್ರಮುಖವಾದ ಪರಿಸರ ಸೂಕ್ಷ್ಮ ವಲಯವಾಗಿದೆ. 2011ರಲ್ಲಿ ಕಾಯ್ದಿಟ್ಟ ಅರಣ್ಯವನ್ನು ವನ್ಯಜೀವಿ ಧಾಮವಾಗಿ ಮೇಲ್ದರ್ಜೆಗೇರಿಸಿದ ಮೇಲೆ ಇಲ್ಲಿ ಪರಿಸರ ಪ್ರವಾಸಕ್ಕೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಆಗಿಲ್ಲ’ ಎನ್ನುತ್ತಾರೆ ಸ್ಥಳೀಯರು.</p>.<p class="Subhead"><strong>ಜೀವ ವೈವಿಧ್ಯದ ತಾಣ: </strong>ಅಳಿವಿನ ಅಂಚಿನಲ್ಲಿರುವ ಮತ್ತು ಔಷಧಿಯ ಸಸ್ಯಗಳು ಇಲ್ಲಿ ಕಾಣಸಿಗುತ್ತವೆ. ಇದರಿಂದಾಗಿಯೇ ಇದಕ್ಕೆ ಮಹತ್ವ ಬಂದಿದೆ. ಬನ್ನಿ, ಧೂಪ, ಮುತ್ತುಗ, ಕವಳಾ, ಸಿಸೂ, ನೆಲ್ಲಿ, ಶಿವಣೆ, ಹೊನ್ನೆ, ರಕ್ತಚಂದನ, ಶ್ರೀಗಂಧ, ಸಾಗವಾನಿ, ಕರಿಮತ್ತಿ ಹಾಗೂ ಹೊಳೆ ಸಸ್ಯಗಳು ಇಲ್ಲಿವೆ.</p>.<p>ಕೃಷ್ಣಮೃಗ, ಕಾಡುಬೆಕ್ಕು, ಚಿರತೆ, ಹದ್ದು, ಸುವರ್ಣ ವರ್ಣದ ಮರಕುಟಿಕ, ನಾಗರಗಾವು, ಹೆಬ್ಬಾವು, ಮಂಡಲ ಹಾವುಗಳು ಅಳಿವಿನ ಅಂಚಿನಲ್ಲಿರುವ ಸಸ್ಯ, ಪ್ರಾಣಿ ಮತ್ತು ಪಕ್ಷಿ ಹಾಗೂ ಸರಿಸೃಪಗಳಾಗಿವೆ ಎನುತ್ತಾರೆ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ: </strong>ಚಿಂಚೋಳಿ ವನ್ಯಜೀವಿ ಧಾಮವು ಮಳೆಯಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಹಸಿರು ವ್ಯಾಪಿಸಿದೆ. ಸಮೃದ್ಧ ಜೀವ ವೈವಿಧ್ಯತೆಯಿಂದ ಕೂಡಿರುವ ಈ ಕಾಡು ಏಪ್ರಿಲ್, ಮೇ ತಿಂಗಳಲ್ಲಿ ಸುರಿದ ಮಳೆಗೆ ಹಸಿರು ರಾಶಿ ಹೊದ್ದುಕೊಂಡಿದೆ.</p>.<p>ಚಂದ್ರಂಪಳ್ಳಿ, ಮಾಣಿಕಪುರ, ಗೊಟ್ಟಂಗೊಟ್ಟ, ಎತ್ತಿಪೋತೆ, ಶೇರಿಭಿಕನಳ್ಳಿ, ಅಂತಾವರಂ, ಮೊಗದಂಪುರ, ಶಾದಿಪುರ, ಭೈರಂಪಳ್ಳಿ, ಸೋಮಲಿಂಗದಳ್ಳಿ, ಚಿಕ್ಕಲಿಂಗದಳ್ಳಿ ಸುತ್ತಲಿನ ಕಾಡು ಮೈದುಂಬಿಕೊಂಡಿದೆ.</p>.<p>ವನ್ಯಜೀವಿ ಧಾಮದ ಕೊತ್ವಾಲ್ ನಾಲಾ, ಮಂಡಿ ಬಸವಣ್ಣ ಕ್ಯಾಂಪ ಹಿಂದಿನ ನಾಲಾ, ಮಹಿಶಮ್ಮನ ಬೆಟ್ಟ, ಬಡೆಸಾಬ್, ಎತ್ತಿಪೋತೆ ನಾಲಾ ಹಾಗ ಬುರುಗದೊಡ್ಡಿ ಮೊದಲಾದ ಕಡೆ ತೊರೆಗಳಲ್ಲಿ ನೀರು ಗೋಚರಿಸುತ್ತಿದೆ.</p>.<p>ಸಮುದ್ರ ಮಟ್ಟದಿಂದ ಬುರುಗದೊಡ್ಡಿ 634 ಮೀಟರ್, ಶೇರಿಭಿಕನಳ್ಳಿ 601 ಮೀಟರ್, ಧರ್ಮಾಸಾಗರ 594 ಮೀಟರ್, ಗೊಟ್ಟಮಗೊಟ್ಟ 547 ಮೀಟರ್, ಶಾದಿಪುರ 502 ಮೀಟರ್, ಚಿಂದಾನೂರ 500 ಮೀಟರ್ ಮತ್ತು ಭೈರಂಪಳ್ಳಿ 478 ಮೀಟರ್ ಎತ್ತರದಲ್ಲಿದೆ. ಇವು ಚಾರಣಕ್ಕೆ ಹೇಳಿ ಮಾಡಿಸಿದ ತಾಣಗಳಾಗಿವೆ.</p>.<p>‘13,888 ಹೆಕ್ಟೇರ್ ವಿಸ್ತಾರದ ಈ ಕಾಡು ಬಯಲು ಸೀಮೆಯ ಪ್ರಮುಖವಾದ ಪರಿಸರ ಸೂಕ್ಷ್ಮ ವಲಯವಾಗಿದೆ. 2011ರಲ್ಲಿ ಕಾಯ್ದಿಟ್ಟ ಅರಣ್ಯವನ್ನು ವನ್ಯಜೀವಿ ಧಾಮವಾಗಿ ಮೇಲ್ದರ್ಜೆಗೇರಿಸಿದ ಮೇಲೆ ಇಲ್ಲಿ ಪರಿಸರ ಪ್ರವಾಸಕ್ಕೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಆಗಿಲ್ಲ’ ಎನ್ನುತ್ತಾರೆ ಸ್ಥಳೀಯರು.</p>.<p class="Subhead"><strong>ಜೀವ ವೈವಿಧ್ಯದ ತಾಣ: </strong>ಅಳಿವಿನ ಅಂಚಿನಲ್ಲಿರುವ ಮತ್ತು ಔಷಧಿಯ ಸಸ್ಯಗಳು ಇಲ್ಲಿ ಕಾಣಸಿಗುತ್ತವೆ. ಇದರಿಂದಾಗಿಯೇ ಇದಕ್ಕೆ ಮಹತ್ವ ಬಂದಿದೆ. ಬನ್ನಿ, ಧೂಪ, ಮುತ್ತುಗ, ಕವಳಾ, ಸಿಸೂ, ನೆಲ್ಲಿ, ಶಿವಣೆ, ಹೊನ್ನೆ, ರಕ್ತಚಂದನ, ಶ್ರೀಗಂಧ, ಸಾಗವಾನಿ, ಕರಿಮತ್ತಿ ಹಾಗೂ ಹೊಳೆ ಸಸ್ಯಗಳು ಇಲ್ಲಿವೆ.</p>.<p>ಕೃಷ್ಣಮೃಗ, ಕಾಡುಬೆಕ್ಕು, ಚಿರತೆ, ಹದ್ದು, ಸುವರ್ಣ ವರ್ಣದ ಮರಕುಟಿಕ, ನಾಗರಗಾವು, ಹೆಬ್ಬಾವು, ಮಂಡಲ ಹಾವುಗಳು ಅಳಿವಿನ ಅಂಚಿನಲ್ಲಿರುವ ಸಸ್ಯ, ಪ್ರಾಣಿ ಮತ್ತು ಪಕ್ಷಿ ಹಾಗೂ ಸರಿಸೃಪಗಳಾಗಿವೆ ಎನುತ್ತಾರೆ ವನ್ಯಜೀವಿ ಧಾಮದ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>