ಚಿಂಚೋಳಿ ತಾಲ್ಲೂಕು ತಾಜಲಾಪುರ ಸೇತುವೆ ಮುಳುಗಡೆಯಾಗಿದ್ದು ಗ್ರಾಮ ಹಾಗೂ ಭಾಲ್ಕಿ ಚಿಂಚೋಳಿ ರಾಜ್ಯಹೆದ್ದಾರಿ 75ರ ಸಂಪರ್ಕ ಕಡಿತವಾಗಿದೆ
ಚಿಂಚೋಳಿ ತಾಲ್ಲೂಕು ಕನಕಪುರ ಸೇತುವೆ ಮುಳುಗಡೆಯಾಗಿದೆ
ಚಿಂಚೋಳಿ ತಾಲ್ಲೂಕು ಚಂದ್ರಂಪಳ್ಳಿ ಜಲಾಶಯ ಭರ್ತಿಯ ಅಂಚು ತಲುಪಿದೆ

ಪ್ರತಿ ಮಳೆಗಾಲದಲ್ಲಿ ನಮ್ಮ ಊರಿನ ಜನರು ಪ್ರವಾಹ ಭೀತಿಯಲ್ಲಿ ಜೀವನ ನಡೆಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.
ಮಲ್ಲು ರಾಯಪ್ಪಗೌಡ ಯುವ ಮುಖಂಡ ಬೆನಕನಳ್ಳಿ
ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಸೋರುವ ಶಿಥಿಲವಾದ ಶಾಲೆ ಅಂಗನವಾಡಿ ಕಟ್ಟಡ ಬಳಸದಂತೆ ನಿರ್ದೇಶನ ನೀಡಲಾಗಿದೆ. ಸೇತುವೆ ದಾಟಿ ಬರುವ ಶಾಲೆಗಳಿಗೆ ರಜೆ.
ವೀರೇಶ ಮುಳುಗುಂದ ಮಠ ಚಿಂಚೋಳಿ ತಹಶೀಲ್ದಾರ್
ಪ್ರವಾಹ ಮುನ್ನಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಜನ ಜಾನುವಾರುಗಳ ಬಗ್ಗೆ ಕಾಳಜಿವಹಿಸಬೇಕು
ಅವಿನಾಶ ಜಾಧವ ಚಿಂಚೋಳಿ ಶಾಸಕ