ಬುಧವಾರ ಡೊಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ದಿಗ್ಬಂಧನ ಹಾಕಿದೆ. ಅದಲ್ಲದೇ ಕಣಸೂರ, ಮಲಘಾಣ, ಕಲಗುರ್ತಿ ಮತ್ತು ತೆಂಗಳಿ ಹಳ್ಳದ ಸೇತುವೆ ಮೇಲಿಂದ ನೀರು ಹರಿದು ಸುತ್ತಲಿನ ಗ್ರಾಮಗಳ ಸಂಪರ್ಕ ಕಡಿತಗೊಳಿಸಿದೆ. ಹಳ್ಳದ ದಂಡೆಯ ಹೊಲಗಳಿಗೆ ನುಗ್ಗಿದ ನೀರು ತೊಗರಿ, ಹೆಸರು, ಉದ್ದು ಹೀಗೆ ಮುಂಗಾರು ಬೆಳೆಗಳನ್ನು ನಾಶಗೊಳಿಸಿದ್ದು, ಹೊಲ ಕೊಚ್ಚಿಹೋಗಿ ಅನ್ನದಾತರಿಗೆ ದಿಕ್ಕುತೋಚದಂತೆ ಮಾಡಿದೆ.