<p><strong>ಕಲಬುರ್ಗಿ:</strong>ಜಿಲ್ಲೆಯಲ್ಲಿ ಭಾರಿ ಮಳೆಯ ಪ್ರಯುಕ್ತ ಜೂನ್ 22ರಂದು ಹೇರೂರ (ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಅವರಜನಸ್ಪಂದನ ಹಾಗೂ ಗ್ರಾಮವಾಸ್ತವ್ಯಕಾರ್ಯಕ್ರಮ ಮುಂದೂಡಲಾಗಿದೆ.</p>.<p>ಮುಂದಿನ ಗ್ರಾಮ ವಾಸ್ತವ್ಯ ದಿನಾಂಕವನ್ನು ಮುಖ್ಯಮಂತ್ರಿನಿಗದಿಪಡಿಸಿ ತಿಳಿಸುತ್ತಾರೆ ಎಂದುಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಅವರು ತಿಳಿಸಿದ್ದಾರೆ.</p>.<p><strong>ಉತ್ತರ ಕರ್ನಾಟಕದ ಊಟ ಸವಿದ ಸಿಎಂ</strong></p>.<p><strong>ಯಾದಗಿರಿ:</strong>ಚಂಡರಕಿಯಲ್ಲಿ ಜನತಾ ದರ್ಶನ, ಅಹವಾಲು ಸ್ವೀಕಾರ, ಪತ್ರಿಕಾ ಗೋಷ್ಠಿ ಮುಗಿಸಿಕೊಂಡು, ಬೆಳಗ್ಗೆಯಿಂದ ಊಟಮಾಡದೆ ಕುಳಿತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಊಟ ಸವಿದರು.<br /><br />ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತೆರಳಿದ ಸಿಎಂ ಊಟಕ್ಕಾಗಿ ಹೈದರಾಬಾದ್ ಕರ್ನಾಟಕ ಭಾಗದ ಗೋದಿ ಹುಗ್ಗಿ, ಪುಂಡೆಪಲ್ಲೆ, ಹಾಲು ಕುರ್ಮಾ, ಫುಲ್ಕಾ, ಖಡಕ್ ಜೋಳದ ರೊಟ್ಟಿ, ಬಿಳಿ ಅನ್ನ, ಮಿರ್ಚಿ ಭಜ್ಜಿಯನ್ನು ಸವಿದರು.</p>.<p>ಚಂಡರಕಿ ಶಾಲಾ ಮಕ್ಕಳಿಂದ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಶಾಲಾ ಮಕ್ಕಳೊಂದಿಗೆ ರಾತ್ರಿಯ ಭೋಜನ ಸೇವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶಂಪೂರ, ವೆಂಕಟರಾವ ನಾಡಗೌಡ, ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong>ಜಿಲ್ಲೆಯಲ್ಲಿ ಭಾರಿ ಮಳೆಯ ಪ್ರಯುಕ್ತ ಜೂನ್ 22ರಂದು ಹೇರೂರ (ಬಿ) ಗ್ರಾಮದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಅವರಜನಸ್ಪಂದನ ಹಾಗೂ ಗ್ರಾಮವಾಸ್ತವ್ಯಕಾರ್ಯಕ್ರಮ ಮುಂದೂಡಲಾಗಿದೆ.</p>.<p>ಮುಂದಿನ ಗ್ರಾಮ ವಾಸ್ತವ್ಯ ದಿನಾಂಕವನ್ನು ಮುಖ್ಯಮಂತ್ರಿನಿಗದಿಪಡಿಸಿ ತಿಳಿಸುತ್ತಾರೆ ಎಂದುಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಅವರು ತಿಳಿಸಿದ್ದಾರೆ.</p>.<p><strong>ಉತ್ತರ ಕರ್ನಾಟಕದ ಊಟ ಸವಿದ ಸಿಎಂ</strong></p>.<p><strong>ಯಾದಗಿರಿ:</strong>ಚಂಡರಕಿಯಲ್ಲಿ ಜನತಾ ದರ್ಶನ, ಅಹವಾಲು ಸ್ವೀಕಾರ, ಪತ್ರಿಕಾ ಗೋಷ್ಠಿ ಮುಗಿಸಿಕೊಂಡು, ಬೆಳಗ್ಗೆಯಿಂದ ಊಟಮಾಡದೆ ಕುಳಿತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಊಟ ಸವಿದರು.<br /><br />ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತೆರಳಿದ ಸಿಎಂ ಊಟಕ್ಕಾಗಿ ಹೈದರಾಬಾದ್ ಕರ್ನಾಟಕ ಭಾಗದ ಗೋದಿ ಹುಗ್ಗಿ, ಪುಂಡೆಪಲ್ಲೆ, ಹಾಲು ಕುರ್ಮಾ, ಫುಲ್ಕಾ, ಖಡಕ್ ಜೋಳದ ರೊಟ್ಟಿ, ಬಿಳಿ ಅನ್ನ, ಮಿರ್ಚಿ ಭಜ್ಜಿಯನ್ನು ಸವಿದರು.</p>.<p>ಚಂಡರಕಿ ಶಾಲಾ ಮಕ್ಕಳಿಂದ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಶಾಲಾ ಮಕ್ಕಳೊಂದಿಗೆ ರಾತ್ರಿಯ ಭೋಜನ ಸೇವಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಾಜಶೇಖರ ಪಾಟೀಲ, ಬಂಡೆಪ್ಪ ಖಾಶಂಪೂರ, ವೆಂಕಟರಾವ ನಾಡಗೌಡ, ಶಾಸಕ ನಾಗನಗೌಡ ಕಂದಕೂರ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>