ಯಾದಗಿರಿ:ಚಂಡರಕಿಯಲ್ಲಿ ಜನತಾ ದರ್ಶನ, ಅಹವಾಲು ಸ್ವೀಕಾರ, ಪತ್ರಿಕಾ ಗೋಷ್ಠಿ ಮುಗಿಸಿಕೊಂಡು, ಬೆಳಗ್ಗೆಯಿಂದ ಊಟಮಾಡದೆ ಕುಳಿತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಊಟ ಸವಿದರು.
ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ತೆರಳಿದ ಸಿಎಂ ಊಟಕ್ಕಾಗಿ ಹೈದರಾಬಾದ್ ಕರ್ನಾಟಕ ಭಾಗದ ಗೋದಿ ಹುಗ್ಗಿ, ಪುಂಡೆಪಲ್ಲೆ, ಹಾಲು ಕುರ್ಮಾ, ಫುಲ್ಕಾ, ಖಡಕ್ ಜೋಳದ ರೊಟ್ಟಿ, ಬಿಳಿ ಅನ್ನ, ಮಿರ್ಚಿ ಭಜ್ಜಿಯನ್ನು ಸವಿದರು.