ಕೋಟೆ ಸಂಪೂರ್ಣ ಹಾಳಾಗಿದೆ. ಇದು ಗ್ರಾಮಸ್ಥರಿಗೆ ನೋವು ತಂದಿದೆ. ಪ್ರವಾಸಿಗರು ಬಂದು ವಾಪಸ್ ಹೋಗುವಂತಾಗಿದೆ. ಸಂಬಂಧಿಸಿದ ಇಲಾಖೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕು
ರಾಚಯ್ಯಸ್ವಾಮಿ ಸ್ಥಳೀಯರು
ಚಾಲುಕ್ಯರ ರಾಜಧಾನಿ ಬಾದಾಮಿಯಿಂದ ನಾವು ಬಂದಿದ್ದೇವೆ. ರಾಷ್ಟ್ರಕೂಟರ ರಾಜಧಾನಿಯಾಗಿರುವ ಮಳಖೇಡ ಕೋಟೆಯ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ
ಮಾಗುಂಡಪ್ಪ ಕಟಗೇರಿ ಬಾದಾಮಿ
ಪ್ರೊ.ಶ್ರೀಶೈಲ ಬಿರಾದಾರ ಇತಿಹಾಸ ತಜ್ಞ
‘ಮಳಖೇಡದಲ್ಲಿ ಮತ್ತೆ ಉತ್ಖನನದ ಅಗತ್ಯ’
ಈವರೆಗೆ ಕನ್ನಡದ ಎಂಟು ಅರೇಬಿಕ್ನ 1 ಶಾಸನ ಇಲ್ಲಿ ಮಳಖೇಡದಲ್ಲಿ ಪತ್ತೆಯಾಗಿವೆ. ಅಚ್ಚರಿಯೆಂದರೆ ರಾಷ್ಟ್ರಕೂಟರ ಒಂದು ಶಾಸನವೂ ಇಲ್ಲಿ ದೊರೆತಿಲ್ಲ. ಆದರೆ ಮಧ್ಯಪ್ರದೇಶದಲ್ಲಿ ದೊರಕಿದರೂ ಕನ್ನಡದಲ್ಲಿಯೇ ಇವೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಷ್ಟೇ ಕುತೂಲಹಲಕಾರಿ ಸಂಗತಿಗಳನ್ನು ಮಳಖೇಡ ತನ್ನೊಡಲಲ್ಲಿ ಇಟ್ಟುಕೊಂಡಿದೆ. ಇದು ಜೈನರ ಪ್ರಮುಖ ತಾಣವಾಗಿತ್ತು. ಬಳಿಕ ಅಗ್ರಹಾರವೂ ಆಗಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಜೈನ ಬಸದಿಗಳು ಉತ್ತರಾದಿ ಮಠವೂ ನೆಲೆಗೊಂಡಿವೆ. ಹೀಗಾಗಿ ಇಲ್ಲಿ ಅಭಿವೃದ್ಧಿಯೊಂದಿಗೆ ಪ್ರವಾಸೋದ್ಯಮಕ್ಕೆ ಆದ್ಯತೆ ಸಿಗಬೇಕಿದೆ. ಇನ್ನಷ್ಟು ಉತ್ಖನನ ಕಾರ್ಯಗಳೂ ನಡೆಯಬೇಕು ಎನ್ನುತ್ತಾರೆ- ಇತಿಹಾಸ ತಜ್ಞ ಪ್ರೊ.ಶ್ರೀಶೈಲ ಬಿರಾದಾರ.