ಯೋಜನಾ ಇಲಾಖೆಯ ಉಪನಿರ್ದೇಶಕಿ ಶಿವರೂಪಾ, ಸಹಾಯಕ ನಿರ್ದೇಶಕ ಗಿರೀಶ, ಸೆಕ್ಷನ್ ಅಧಿಕಾರಿ ದಿಲೀಪ್ ಹಾಗೂ ಡಾಟಾ ಆಪರೇಟರ್ (ಡಿಒ) ವರಲಕ್ಷ್ಮಿ ತಂಡದಲ್ಲಿದ್ದಾರೆ. ಈ ತಂಡ ಗುರುವಾರದವರೆಗೆ ಮಂಡಳಿ ಮತ್ತು ಸಂಘದ ದಾಖಲೆಗಳ ಪರಿಶೀಲನೆ ನಡೆಸಲಿದೆ. ಜೊತೆಗೆ ಮಂಡಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕಾಮಗಾರಿ ಅಥವಾ ಯೋಜನೆ ಅನುಷ್ಠಾನಗೊಳಿಸಿದ ಸ್ಥಳಕ್ಕೂ ಭೇಟಿ ನೀಡಿ ತನಿಖೆ ನಡೆಸಲಿದೆ. ಹಸು, ಯಂತ್ರೋಪಕರಣ ಸೇರಿದಂತೆ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸಲಿದೆ.