ಏ.9ರಿಂದ 13ರವರೆಗೆ ಪಲ್ಲಕ್ಕಿ ಉತ್ಸವ ನಡೆಸಿದ ಭಕ್ತರು ಏ.14ರಂದು ತೇರು ಎಳೆಯಲಿದ್ದಾರೆ. ಮುಲ್ಲಾಮಾರಿ ನದಿದಂಡೆಯಲ್ಲಿ ರಥೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ನಿಜಗುಣಾರೂಢ ನಾಟ್ಯಸಂಘ ಚಿಮ್ಮನಚೋಡ ವತಿಯಿಂದ ‘ಜಮೀನ್ದಾರ ಮನೆತನ’ ನಾಟಕ ಏ.14 ಮತ್ತು 15ರಂದು ರಾತ್ರಿ ಪ್ರದರ್ಶನಗೊಳ್ಳಲಿದೆ. ಜಾತ್ರಾ ಮಹೋತ್ಸವದಲ್ಲಿ ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವರು’ ಎಂದರು.