<p><strong>ಕಲಬುರ್ಗಿ:</strong> ಕಮಲಾಪುರ ತಾಲ್ಲೂಕಿನ ಮರಮಂಚಿ ಗ್ರಾಮದಲ್ಲಿ ಸೋಮವಾರ, ಸೋಂಕಿತರನ್ನು ಕರೆ ತರಲು ಹೋಗಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಕೆಲವು ಗ್ರಾಮಸ್ಥರು, ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ.</p>.<p>ಮರಮಂಚಿ ತಾಂಡಾದಲ್ಲಿ 15 ಜನರಿಗೆ ಕೋವಿಡ್ ಸೊಂಕು ಪತ್ತೆಯಾಗಿದೆ. ಇವರೆಲ್ಲರೂ ಮುಂಬೈನಿಂದ ಮರಳಿದವರು. ಸೊಂಕು ಪತ್ತೆಯಾದ ಹಿನ್ನಲೆ ಅವರನ್ನ ಆಸ್ಪತ್ರೆಗೆ ದಾಖಲಿಸಲು ತಾಂಡಾಕ್ಕೆ ಅಧಿಕಾರಗಳು ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರುಆಂಬುಲೆನ್ಸ್ ಜೊತೆಗೆ ತೆರಳಿದ್ದರು.</p>.<p>'ನಮ್ಮಲ್ಲಿ ಯಾರಿಗೂ ಕೋವಿಡ್ ಬಂದಿಲ್ಲ. ಲಕ್ಷಣಗಳೇ ಇಲ್ಲ. ಎಲ್ಲರೂ ಹುಷಾರಾಗಿದ್ದಾರೆ. ಸುಮ್ಮನೆ ಕರೆದೊಯ್ಯಲು ಬಂದಿದ್ದೀರಿ' ಎಂದು ಸೋಂಕಿತರ ಸಂಬಂಧಿಕರು ಆಕ್ರೋಶಗೊಂಡರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕೋಪಗೊಂಡ ಜನ;<br />ಆಂಬುಲೆನ್ಸ್ ಸೇರಿದಂತೆ , ವೈದ್ಯರ ಮೇಲೆ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿದರು.</p>.<p>ಕಲ್ಲು ತೂರಾಟದ ಹಿನ್ನಲ್ಲೆ ವಾಹನಗಳನ್ನ ಬಿಟ್ಟು ಅಧಿಕಾರಿಗಳು, ಸಿಬ್ಬಂದಿ ಓಡಿ ಹೋಗಿ ರಕ್ಷಣೆ ಪಡೆದರು.</p>.<p>ಇದರಿಂದಾಗಿ ಕೆಲಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ಉಂಟಾಯಿತು.</p>.<p>ಪೊಲೀಸರೇ ತಮ್ಮ ಮೇಲೆ ಹಲ್ಲೆ ನಡೇಸಿ ಗಾತಗೊಳಿಸಿದ್ದಾರೆ. ದಬ್ಬಾಳಿಕೆ ಮಾಡಿದ್ದಾರೆ ಎಂದು ಕೆಲ ತಾಂಡಾ ನಿವಾಸಿಗಳ ಆರೋಪಿಸಿದರು. ಬೆನ್ನು, ಕಾಲು, ತೊಡೆಗಳಿಗೆ ಲಾಠಿ ಏಟು ಬಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.</p>.<p>ಮಧ್ಯಾಹ್ನ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಸಿಪಿಐ ರಾಘವೇಂದ್ರ ಭಜಂತ್ರಿ, ತಹಶೀಲ್ದಾರ್ ಅಂಜುಮ್ ತಬಸುಮ್ ತಾಂಡಾಗೆ ಭೇಟಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ಕಮಲಾಪುರ ತಾಲ್ಲೂಕಿನ ಮರಮಂಚಿ ಗ್ರಾಮದಲ್ಲಿ ಸೋಮವಾರ, ಸೋಂಕಿತರನ್ನು ಕರೆ ತರಲು ಹೋಗಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿದ ಕೆಲವು ಗ್ರಾಮಸ್ಥರು, ವಾಹನಗಳ ಮೇಲೂ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ.</p>.<p>ಮರಮಂಚಿ ತಾಂಡಾದಲ್ಲಿ 15 ಜನರಿಗೆ ಕೋವಿಡ್ ಸೊಂಕು ಪತ್ತೆಯಾಗಿದೆ. ಇವರೆಲ್ಲರೂ ಮುಂಬೈನಿಂದ ಮರಳಿದವರು. ಸೊಂಕು ಪತ್ತೆಯಾದ ಹಿನ್ನಲೆ ಅವರನ್ನ ಆಸ್ಪತ್ರೆಗೆ ದಾಖಲಿಸಲು ತಾಂಡಾಕ್ಕೆ ಅಧಿಕಾರಗಳು ಹಾಗೂ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರುಆಂಬುಲೆನ್ಸ್ ಜೊತೆಗೆ ತೆರಳಿದ್ದರು.</p>.<p>'ನಮ್ಮಲ್ಲಿ ಯಾರಿಗೂ ಕೋವಿಡ್ ಬಂದಿಲ್ಲ. ಲಕ್ಷಣಗಳೇ ಇಲ್ಲ. ಎಲ್ಲರೂ ಹುಷಾರಾಗಿದ್ದಾರೆ. ಸುಮ್ಮನೆ ಕರೆದೊಯ್ಯಲು ಬಂದಿದ್ದೀರಿ' ಎಂದು ಸೋಂಕಿತರ ಸಂಬಂಧಿಕರು ಆಕ್ರೋಶಗೊಂಡರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕೋಪಗೊಂಡ ಜನ;<br />ಆಂಬುಲೆನ್ಸ್ ಸೇರಿದಂತೆ , ವೈದ್ಯರ ಮೇಲೆ ಹಾಗೂ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಿದರು.</p>.<p>ಕಲ್ಲು ತೂರಾಟದ ಹಿನ್ನಲ್ಲೆ ವಾಹನಗಳನ್ನ ಬಿಟ್ಟು ಅಧಿಕಾರಿಗಳು, ಸಿಬ್ಬಂದಿ ಓಡಿ ಹೋಗಿ ರಕ್ಷಣೆ ಪಡೆದರು.</p>.<p>ಇದರಿಂದಾಗಿ ಕೆಲಹೊತ್ತು ಗ್ರಾಮದಲ್ಲಿ ಗೊಂದಲದ ವಾತಾವರಣ ಉಂಟಾಯಿತು.</p>.<p>ಪೊಲೀಸರೇ ತಮ್ಮ ಮೇಲೆ ಹಲ್ಲೆ ನಡೇಸಿ ಗಾತಗೊಳಿಸಿದ್ದಾರೆ. ದಬ್ಬಾಳಿಕೆ ಮಾಡಿದ್ದಾರೆ ಎಂದು ಕೆಲ ತಾಂಡಾ ನಿವಾಸಿಗಳ ಆರೋಪಿಸಿದರು. ಬೆನ್ನು, ಕಾಲು, ತೊಡೆಗಳಿಗೆ ಲಾಠಿ ಏಟು ಬಿದ್ದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.</p>.<p>ಮಧ್ಯಾಹ್ನ ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಸಿಪಿಐ ರಾಘವೇಂದ್ರ ಭಜಂತ್ರಿ, ತಹಶೀಲ್ದಾರ್ ಅಂಜುಮ್ ತಬಸುಮ್ ತಾಂಡಾಗೆ ಭೇಟಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>