ಬಂಬೂ ಬಜಾರ್ ಬಳಿಯ ಭೋವಿಗಲ್ಲಿ ನಿವಾಸಿ ಲಕ್ಷ್ಮಿಕಾಂತ ಮಾರುತಿರಾವ್ (35) ತನ್ನ ಮಕ್ಕಳಾದ ಸೋನಿಯಾ (10) ಮತ್ತು ಮಯೂರಿ (8) ಎಂಬ ಮಕ್ಕಳನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಲಕ್ಷ್ಮಿಕಾಂತ ಪತ್ನಿ ಅಂಜಲಿ ತಮ್ಮ ಇನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ನಾಲ್ಕು ತಿಂಗಳ ಹಿಂದೆ ಮನೆ ಬಿಟ್ಟು ತವರುಮನೆಗೆ ಹೋಗಿದ್ದರು. ಅಂದಿನಿಂದ ಇಬ್ಬರು ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ ಲಕ್ಷ್ಮಿಕಾಂತ ಮೇಲೆ ಇತ್ತು. ಪತ್ನಿ ಮನೆ ಬಿಟ್ಟು ಬೇಸರದಲ್ಲೇ ಇದ್ದ ಲಕ್ಷ್ಮಿಕಾಂತ ಮಂಗಳವಾರ ಸಂಜೆ ನಗರದ ಸೇಡಂ ರಸ್ತೆಯಲ್ಲಿರುವ ವೀರೇಂದ್ರ ಪಾಟೀಲ ಬಡಾವಣೆಯ ಉದ್ಯಾನಕ್ಕೆ ಕರೆದುಕೊಂಡು ಹೋಗಿದ್ದಾನೆ. ಮಕ್ಕಳನ್ನು ಆಟವಾಡಿಸಿ ಆಟೊದಲ್ಲಿ ಕರೆತಂದು ಅಲ್ಲಿಯೇ ಕತ್ತು ಹಿಸುಕಿ ಸಾಯಿಸಿದ್ದಾಗಿ ಪೊಲೀಸರು ಎದುರು ತಪ್ಪೊಪ್ಪಿಕೊಂಡಿದ್ದಾನೆ.