<p><strong>ಕಲಬುರಗಿ:</strong> ‘ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಚಿಗರತಳ್ಳಿ, ಯಾಳವಾರ, ಕೊಡಚಿ, ಲಕಣಾಪುರ, ಖಾದ್ಯಾಪುರ, ಚಿಗರಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶೂನ್ಯ ಬರುತ್ತಿದ್ದ ಮನೆಗಳ ವಿದ್ಯುತ್ ಬಿಲ್ ₹1 ಲಕ್ಷದವರೆಗೆ ನೀಡಲಾಗಿದೆ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಆರೋಪಿಸಿದರು.</p>.<p>‘ಚಿಗರತಳ್ಳಿಯ ಆರ್ಆರ್ ಸಂಖ್ಯೆ: ಎಸ್ಐಜಿಎಲ್31 ಈ ಮನೆಯ ವಿದ್ಯುತ್ ಬಿಲ್ ಜುಲೈನಲ್ಲಿ ₹219 ಬಂದರೆ, ಅಕ್ಟೋಬರ್ನಲ್ಲಿ ಬಾಕಿ ₹581 ಸೇರಿ ₹44,291 ಬಂದಿದೆ. ಅದೇ ರೀತಿ ಆರ್ಆರ್ ಸಂಖ್ಯೆ: ಎಸ್ಐಜಿಎಲ್38020 ಈ ಮನೆಯ ವಿದ್ಯುತ್ ಬಿಲ್ ಅಕ್ಟೋಬರ್ನಲ್ಲಿ ಬಾಕಿ ₹1,201 ಸೇರಿ ₹1,10,944 ಬಂದಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಬಿಲ್ಗಳನ್ನು ಪ್ರದರ್ಶಿಸಿದರು.</p>.<p>‘ಅಧಿಕ ಮೊತ್ತದ ಬಿಲ್ಗಳ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಜನರದೇ ತಪ್ಪು ಅನ್ನುವ ರೀತಿಯಲ್ಲಿ ಜೆಸ್ಕಾಂ ಸಿಬ್ಬಂದಿ ವರ್ತಿಸುತ್ತಿದ್ದಾರೆ. 4 ದಿನಗಳಲ್ಲಿ ಮೀಟರ್ ದೋಷ ಸರಿಪಡಿಸದಿದ್ದರೆ, ಸಿಪಿಐ, ಆದರ್ಶ ಗ್ರಾಮ ಸಮಿತಿ ಯಾಳವಾರ ಹಾಗೂ ಜೇವರ್ಗಿ–ಯಡ್ರಾಮಿ ತಾಲ್ಲೂಕು ಅಭಿವೃದ್ಧಿ ಸಮಿತಿಗಳ ನೇತೃತ್ವದಲ್ಲಿ ನ.10ರಂದು ಜೇವರ್ಗಿಯ ಜೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.</p>.<p>ಆದರ್ಶ ಗ್ರಾಮ ಸಮಿತಿ ಯಾಳವಾರ ಅಧ್ಯಕ್ಷ ಇಬ್ರಾಹಿಂ ಪಟೇಲ್, ಗ್ರಾ.ಪಂ ಸದಸ್ಯ ಸದ್ದಾಂ ಪಟೇಲ್ ಚಿಗರತಳ್ಳಿ ಮಾತನಾಡಿ, ‘ಹಸಿಬರಗಾಲದಿಂದ ರೈತರು, ಕೂಲಿಕಾರ್ಮಿಕರು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಹೊತ್ತಲ್ಲಿ ಜೆಸ್ಕಾಂ ನೌಕರರು ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಿರುವುದು ಖಂಡನೀಯ. ಕೂಡಲೇ ಜೆಸ್ಕಾಂ ಅಧಿಕಾರಿಗಳು ದೋಷವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.</p>.<p>ಬಾಬು ಬಿ., ರಾಜಾ ಪಟೇಲ್, ಮಹಮ್ಮದ್ ಚೌದರಿ, ಅಖಿಲ ಪಾಷಾ ಜಾಗೀರದಾರ, ಖಾಜಾ ಪಟೇಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ‘ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಚಿಗರತಳ್ಳಿ, ಯಾಳವಾರ, ಕೊಡಚಿ, ಲಕಣಾಪುರ, ಖಾದ್ಯಾಪುರ, ಚಿಗರಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶೂನ್ಯ ಬರುತ್ತಿದ್ದ ಮನೆಗಳ ವಿದ್ಯುತ್ ಬಿಲ್ ₹1 ಲಕ್ಷದವರೆಗೆ ನೀಡಲಾಗಿದೆ’ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಆರೋಪಿಸಿದರು.</p>.<p>‘ಚಿಗರತಳ್ಳಿಯ ಆರ್ಆರ್ ಸಂಖ್ಯೆ: ಎಸ್ಐಜಿಎಲ್31 ಈ ಮನೆಯ ವಿದ್ಯುತ್ ಬಿಲ್ ಜುಲೈನಲ್ಲಿ ₹219 ಬಂದರೆ, ಅಕ್ಟೋಬರ್ನಲ್ಲಿ ಬಾಕಿ ₹581 ಸೇರಿ ₹44,291 ಬಂದಿದೆ. ಅದೇ ರೀತಿ ಆರ್ಆರ್ ಸಂಖ್ಯೆ: ಎಸ್ಐಜಿಎಲ್38020 ಈ ಮನೆಯ ವಿದ್ಯುತ್ ಬಿಲ್ ಅಕ್ಟೋಬರ್ನಲ್ಲಿ ಬಾಕಿ ₹1,201 ಸೇರಿ ₹1,10,944 ಬಂದಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹಲವಾರು ಬಿಲ್ಗಳನ್ನು ಪ್ರದರ್ಶಿಸಿದರು.</p>.<p>‘ಅಧಿಕ ಮೊತ್ತದ ಬಿಲ್ಗಳ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಜನರದೇ ತಪ್ಪು ಅನ್ನುವ ರೀತಿಯಲ್ಲಿ ಜೆಸ್ಕಾಂ ಸಿಬ್ಬಂದಿ ವರ್ತಿಸುತ್ತಿದ್ದಾರೆ. 4 ದಿನಗಳಲ್ಲಿ ಮೀಟರ್ ದೋಷ ಸರಿಪಡಿಸದಿದ್ದರೆ, ಸಿಪಿಐ, ಆದರ್ಶ ಗ್ರಾಮ ಸಮಿತಿ ಯಾಳವಾರ ಹಾಗೂ ಜೇವರ್ಗಿ–ಯಡ್ರಾಮಿ ತಾಲ್ಲೂಕು ಅಭಿವೃದ್ಧಿ ಸಮಿತಿಗಳ ನೇತೃತ್ವದಲ್ಲಿ ನ.10ರಂದು ಜೇವರ್ಗಿಯ ಜೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.</p>.<p>ಆದರ್ಶ ಗ್ರಾಮ ಸಮಿತಿ ಯಾಳವಾರ ಅಧ್ಯಕ್ಷ ಇಬ್ರಾಹಿಂ ಪಟೇಲ್, ಗ್ರಾ.ಪಂ ಸದಸ್ಯ ಸದ್ದಾಂ ಪಟೇಲ್ ಚಿಗರತಳ್ಳಿ ಮಾತನಾಡಿ, ‘ಹಸಿಬರಗಾಲದಿಂದ ರೈತರು, ಕೂಲಿಕಾರ್ಮಿಕರು, ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಹೊತ್ತಲ್ಲಿ ಜೆಸ್ಕಾಂ ನೌಕರರು ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಿರುವುದು ಖಂಡನೀಯ. ಕೂಡಲೇ ಜೆಸ್ಕಾಂ ಅಧಿಕಾರಿಗಳು ದೋಷವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.</p>.<p>ಬಾಬು ಬಿ., ರಾಜಾ ಪಟೇಲ್, ಮಹಮ್ಮದ್ ಚೌದರಿ, ಅಖಿಲ ಪಾಷಾ ಜಾಗೀರದಾರ, ಖಾಜಾ ಪಟೇಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>