<p><strong>ಕಲಬುರಗಿ:</strong> ಇಲ್ಲಿನ ಗೋದುತಾಯಿ ನಗರದ ಶಿವಮಂದಿರ ಆವರಣದಲ್ಲಿ ಗುರುವಾರ ಸಂಜೆ ಶರಣಬಸವೇಶ್ವರರ ಮಹಾ ತೊಟ್ಟಿಲೋತ್ಸವ ಹಾಗೂ ಸಹಸ್ರ ದೀಪೋತ್ಸವದ ಸಂಭ್ರಮದಿಂದ ಜರುಗಿತು.</p>.<p>ದೇಗುಲದಲ್ಲಿ ಕಟ್ಟಿದ್ದ ಪುಷ್ಪಾಲಂಕೃತ ತೊಟ್ಟಿಲು ಜೀಕಲು ಬಡಾವಣೆಯ ಮಹಿಳೆಯರೆಲ್ಲ ಅಣಿಯಾಗಿದ್ದರು.</p>.<p>ಪುಟಾಣಿ ವೇದಿಕೆ ಕಾರ್ಯಕ್ರಮ ನಡೆಯಿತು. ಮುಖಂಡರಿಂದ ‘ಮಿತ ನುಡಿ’ಗಳ ಹಿತವಚನದ ಬಳಿಕ ದೀಪ ಪ್ರಜ್ವಲಿಸಲಾಯಿತು. ‘ಬಸವಲಿಂಗಾಯ ನಮಃ’, ‘ಶರಣಬಸವೇಶ್ವರ ಮಹಾರಾಜಕೀ ಜೈ’ ಇತ್ಯಾದಿ ಘೋಷಣೆಗಳು ಮೊಳಗಿದವು.</p>.<p>ಬಳಿಕ ಶಿವಮಂದಿರದ ಸುತ್ತಲೂ ಎಣ್ಣೆ ತುಂಬಿಕೊಂಡು ‘ಬೆಳಕು’ ಮಿನುಗಿಸಲು ಕಾತರಿಸುತ್ತಿದ್ದ ದೀಪಗಳನ್ನು ಭಕ್ತರು ಬೆಳಗಿದರು. ಅತ್ತ ದೀಪಗಳ ಬೆಳಕು ಮೂಡುತ್ತಿದ್ದರೆ ಇತ್ತ ದೇವಸ್ಥಾನದಲ್ಲಿ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಮಹಿಳೆಯರ ಸಮ್ಮುಖದಲ್ಲಿ ಹಲವರು ಪುಷ್ಪಾಲಂಕೃತ ತೊಟ್ಟಿಲು ತೂಗಿ ಭಕ್ತಿ ಮೆರೆದರು.</p>.<p>ಇದಕ್ಕೂ ಮುನ್ನ ಮಾತನಾಡಿದ ಲಿಂಗರಾಜಪ್ಪ ಅಪ್ಪ, ‘2002ರಲ್ಲಿ ಪುಷ್ಯ ಮಾಸದ 6ನೇ ದಿನದಂದು ಬಸವರಾಜಪ್ಪ ಅಪ್ಪ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವ ಶುರು ಮಾಡಿದ್ದರು. ಆ ವರ್ಷ ನನ್ನ ಮಗ ಹುಟ್ಟಿದ್ದ. 23 ವರ್ಷಗಳಿಂದ ಮಹಾತೊಟ್ಟಿಲೋತ್ಸವ ನಡೆದುಕೊಂಡು ಬರುತ್ತಿದೆ. ಈ ತೊಟ್ಟಿಲು ಪೂಜಿಸಿದರೆ ಖಂಡಿತ ಒಳ್ಳೆಯದಾಗುತ್ತದೆ’ ಎಂದರು.</p>.<p>ಲಲಿತಾ ಇಬ್ರಾಹಿಂಪುರ ಮಾತನಾಡಿ, ‘ಸಹಸ್ರ ದೀಪೋತ್ಸವದ ಸಂಭ್ರಮ ದೀಪಾವಳಿಗೂ ಹೆಚ್ಚು ಕಾಣುತ್ತಿದೆ. ಈ ದೀಪದ ಬೆಳಕು ನಮ್ಮೆಲ್ಲರ ಅಜ್ಞಾನ ತೊಲಗಿಸಲಿ, ಮೂಢನಂಬಿಕೆ ನಿರ್ಮೂಲನೆ ಮಾಡಲಿ. ಶರಣಬಸವೇಶ್ವರರು ಎಲ್ಲರಿಗೂ ಸದ್ಗುಣ ಕರುಣಿಸಲಿ’ ಎಂದು ಆಶಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಗೋದುತಾಯಿ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ‘ಶರಣಬಸವೇಶ್ವರರ ಪವಾಡಗಳು ವರ್ಣಾತೀತ. ಅವರ ತೊಟ್ಟಿಲೋತ್ಸವ ಸೇವೆ ಹಲವು ಕುಟುಂಬಗಳಿಗೆ ಸಂತಾನ ಭಾಗ್ಯ ಕರುಣಿಸಿದೆ. ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ’ ಎಂದರು.</p>.<p>ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಉದನೂರ, ಕಾಂಗ್ರೆಸ್ ಮುಖಂಡ ಶರಣಗೌಡ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ಲಿಂಗರಾಜಪ್ಪ ಅಪ್ಪ ಅವರ ಮಗಳು ಶ್ರವಣಾ, ಅಳಿಯ ಸುಭಾಷ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.</p>.<p>ಸಮಾರಂಭದ ಬಳಿಕ ಭಕ್ತರಿಗೆ ಅನ್ನಪ್ರಸಾದ ಉಣಬಡಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ:</strong> ಇಲ್ಲಿನ ಗೋದುತಾಯಿ ನಗರದ ಶಿವಮಂದಿರ ಆವರಣದಲ್ಲಿ ಗುರುವಾರ ಸಂಜೆ ಶರಣಬಸವೇಶ್ವರರ ಮಹಾ ತೊಟ್ಟಿಲೋತ್ಸವ ಹಾಗೂ ಸಹಸ್ರ ದೀಪೋತ್ಸವದ ಸಂಭ್ರಮದಿಂದ ಜರುಗಿತು.</p>.<p>ದೇಗುಲದಲ್ಲಿ ಕಟ್ಟಿದ್ದ ಪುಷ್ಪಾಲಂಕೃತ ತೊಟ್ಟಿಲು ಜೀಕಲು ಬಡಾವಣೆಯ ಮಹಿಳೆಯರೆಲ್ಲ ಅಣಿಯಾಗಿದ್ದರು.</p>.<p>ಪುಟಾಣಿ ವೇದಿಕೆ ಕಾರ್ಯಕ್ರಮ ನಡೆಯಿತು. ಮುಖಂಡರಿಂದ ‘ಮಿತ ನುಡಿ’ಗಳ ಹಿತವಚನದ ಬಳಿಕ ದೀಪ ಪ್ರಜ್ವಲಿಸಲಾಯಿತು. ‘ಬಸವಲಿಂಗಾಯ ನಮಃ’, ‘ಶರಣಬಸವೇಶ್ವರ ಮಹಾರಾಜಕೀ ಜೈ’ ಇತ್ಯಾದಿ ಘೋಷಣೆಗಳು ಮೊಳಗಿದವು.</p>.<p>ಬಳಿಕ ಶಿವಮಂದಿರದ ಸುತ್ತಲೂ ಎಣ್ಣೆ ತುಂಬಿಕೊಂಡು ‘ಬೆಳಕು’ ಮಿನುಗಿಸಲು ಕಾತರಿಸುತ್ತಿದ್ದ ದೀಪಗಳನ್ನು ಭಕ್ತರು ಬೆಳಗಿದರು. ಅತ್ತ ದೀಪಗಳ ಬೆಳಕು ಮೂಡುತ್ತಿದ್ದರೆ ಇತ್ತ ದೇವಸ್ಥಾನದಲ್ಲಿ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವಕ್ಕೆ ಚಾಲನೆ ನೀಡಲಾಯಿತು. ನೂರಾರು ಮಹಿಳೆಯರ ಸಮ್ಮುಖದಲ್ಲಿ ಹಲವರು ಪುಷ್ಪಾಲಂಕೃತ ತೊಟ್ಟಿಲು ತೂಗಿ ಭಕ್ತಿ ಮೆರೆದರು.</p>.<p>ಇದಕ್ಕೂ ಮುನ್ನ ಮಾತನಾಡಿದ ಲಿಂಗರಾಜಪ್ಪ ಅಪ್ಪ, ‘2002ರಲ್ಲಿ ಪುಷ್ಯ ಮಾಸದ 6ನೇ ದಿನದಂದು ಬಸವರಾಜಪ್ಪ ಅಪ್ಪ ಶರಣಬಸವೇಶ್ವರರ ಮಹಾತೊಟ್ಟಿಲೋತ್ಸವ ಶುರು ಮಾಡಿದ್ದರು. ಆ ವರ್ಷ ನನ್ನ ಮಗ ಹುಟ್ಟಿದ್ದ. 23 ವರ್ಷಗಳಿಂದ ಮಹಾತೊಟ್ಟಿಲೋತ್ಸವ ನಡೆದುಕೊಂಡು ಬರುತ್ತಿದೆ. ಈ ತೊಟ್ಟಿಲು ಪೂಜಿಸಿದರೆ ಖಂಡಿತ ಒಳ್ಳೆಯದಾಗುತ್ತದೆ’ ಎಂದರು.</p>.<p>ಲಲಿತಾ ಇಬ್ರಾಹಿಂಪುರ ಮಾತನಾಡಿ, ‘ಸಹಸ್ರ ದೀಪೋತ್ಸವದ ಸಂಭ್ರಮ ದೀಪಾವಳಿಗೂ ಹೆಚ್ಚು ಕಾಣುತ್ತಿದೆ. ಈ ದೀಪದ ಬೆಳಕು ನಮ್ಮೆಲ್ಲರ ಅಜ್ಞಾನ ತೊಲಗಿಸಲಿ, ಮೂಢನಂಬಿಕೆ ನಿರ್ಮೂಲನೆ ಮಾಡಲಿ. ಶರಣಬಸವೇಶ್ವರರು ಎಲ್ಲರಿಗೂ ಸದ್ಗುಣ ಕರುಣಿಸಲಿ’ ಎಂದು ಆಶಿಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಗೋದುತಾಯಿ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ, ‘ಶರಣಬಸವೇಶ್ವರರ ಪವಾಡಗಳು ವರ್ಣಾತೀತ. ಅವರ ತೊಟ್ಟಿಲೋತ್ಸವ ಸೇವೆ ಹಲವು ಕುಟುಂಬಗಳಿಗೆ ಸಂತಾನ ಭಾಗ್ಯ ಕರುಣಿಸಿದೆ. ಅವರ ಆಶೀರ್ವಾದ ನಮ್ಮೆಲ್ಲರ ಮೇಲೆ ಇರಲಿ’ ಎಂದರು.</p>.<p>ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಉದನೂರ, ಕಾಂಗ್ರೆಸ್ ಮುಖಂಡ ಶರಣಗೌಡ ಅಲ್ಲಮಪ್ರಭು ಪಾಟೀಲ ಮಾತನಾಡಿದರು. ಲಿಂಗರಾಜಪ್ಪ ಅಪ್ಪ ಅವರ ಮಗಳು ಶ್ರವಣಾ, ಅಳಿಯ ಸುಭಾಷ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.</p>.<p>ಸಮಾರಂಭದ ಬಳಿಕ ಭಕ್ತರಿಗೆ ಅನ್ನಪ್ರಸಾದ ಉಣಬಡಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>