<p><strong>ಕಲಬುರ್ಗಿ:</strong> ರಾಜ್ಯ ಸರ್ಕಾರ ಭಾನುವಾರ ಲಾಕ್ಡೌನ್ ಘೋಷಿಸಿರುವ ಮತ್ತು ಕೊರೊನಾ ಸೋಂಕು ಹರಡುವ ಭೀತಿ ಇರುವ ಕಾರಣ ಬಹುತೇಕ ದೇಗುಲಗಳಲ್ಲಿ ಗುರುಪೂರ್ಣಿಮಾ ಸರಳವಾಗಿ ಆಚರಿಸಲಾಗುವುದು. ಕೆಲ ಕಡೆ ವಿಶೇಷ ಪೂಜೆಗಳು ನಡೆದರೆ, ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.</p>.<p>ಅಫಜಲಪುರ ತಾಲ್ಲೂಕಿನ ದೇವಲಗಾಣಗಪುರದ ದತ್ತ ಮಂದಿರ ಮತ್ತು ಘತ್ತರಗಿಯ ಭಾಗ್ಯವಂತಿ ದೇವಸ್ಥಾನ ಬಂದ್ ಇರುತ್ತವೆ. ಕಲಬುರ್ಗಿ ಬುದ್ಧ ವಿಹಾರ ಸಹ ಬಂದ್ ಇರಲಿದ್ದು, ಬುದ್ಧ ದರ್ಶನಕ್ಕೆ ಅವಕಾಶ ಇರುವುದಿಲ್ಲ.</p>.<p>ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಬೆಳಿಗ್ಗೆ 7 ರಿಂದ 10ರವರೆಗೆ ಮಾತ್ರ ದೇವರ ದರ್ಶನ ಪಡೆಯಲು ಅವಕಾಶವಿರುತ್ತದೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ.</p>.<p class="Subhead">ವ್ಯಾಸ ಪೂರ್ಣಿಮಾ: ನಗರದ ಬಿದ್ದಾಪುರದ ನಂಜನಗೂಡು ರಾಯರ ಮಠ ಮತ್ತು ವಿದ್ಯಾನಗರ ಕಾಲೊನಿಯ ಕೃಷ್ಣ ಮಠದಲ್ಲಿ ವ್ಯಾಸ ಪೂರ್ಣಿಮಾ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ಪೂಜೆ ಜರುಗಲಿದ್ದು, ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ರಾಯರ ಮಠದ ವ್ಯವಸ್ಥಾಪಕ ನವಲೆ ಕೃಷ್ಣಾಚಾರ ತಿಳಿಸಿದರು.</p>.<p class="Subhead">ಸರಳ ಆಚರಣೆ: ರಾಮಮಂದಿರ ಸರ್ಕಲ್ ಬಳಿಯಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 6.30 ರಿಂದ 8ರವರೆಗೆ ಗುರುಪೂರ್ಣಿಮಾ ಸರಳವಾಗಿ ಆಚರಿಸಲಾಗುವುದು. ಈ ಅವಧಿಯಲ್ಲಿ ಮಾತ್ರ ಭಕ್ತರಿಗೆ ದರ್ಶನ ಮಾಡಲು ಅವಕಾಶವಿರುತ್ತದೆ ಎಂದು ಮಂದಿರದ ಪ್ರತಿನಿಧಿ ಡಾ. ಎನ್.ಜಿ.ಗಚ್ಚಿನಮನಿ ತಿಳಿಸಿದರು.</p>.<p class="Briefhead"><strong>‘ಮನೆಯಲ್ಲೇ ಮಾತೆಯ ಜನ್ಮದಿನ ಆಚರಿಸಿ’</strong></p>.<p>ತಾಲ್ಲೂಕಿನ ಮಾಣಿಕ್ಯಗಿರಿಯ ಲಿಂ.ಮಾತಾಮಾಣಿಕೇಶ್ವರಿಯವರ 87ನೇ ಜನ್ಮದಿನವನ್ನು ಭಕ್ತರು ಭಾನುವಾರ (ಜುಲೈ 5) ತಮ್ಮ ಮನೆಯಲ್ಲೇ ಆಚರಿಸುವಂತೆ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜಾ ಮಾತಾ ಟ್ರಸ್ಟ್ನ ಟ್ರಸ್ಟಿ ಸಿದ್ರಾಮಪ್ಪ ಸಣ್ಣೂರ ಮನವಿ ಮಾಡಿದ್ದಾರೆ.</p>.<p>‘ಭಾನುವಾರ ಬೆಳಿಗ್ಗೆ 7.30ಕ್ಕೆ ಮಾತೆ ಮಾಣಿಕೇಶ್ವರಿಯವರ ಜನ್ಮದಿನ ಮಾಣಿಕ್ಯಗಿರಿಯಲ್ಲಿ ಆಚರಿಸಲಾಗುವುದು. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಭಕ್ತಾದಿಗಳು ಮಾಣಿಕ್ಯಗಿರಿಗೆ ಬಾರದೇ ತಮ್ಮ ಮನೆಗಳಲ್ಲಿ ಜನ್ಮದಿನ ಆಚರಿಸಬೇಕು’ ಎಂದು ಅವರು ಕೋರಿದ್ದಾರೆ.</p>.<p>ಲಾಕ್ಡೌನ್ ಮಧ್ಯೆಯೂ ಕೆಲ ಭಕ್ತರು ಮಾಣಿಕ್ಯಗಿರಿಗೆ ಬರುವ ಸಾಧ್ಯತೆಯಿದ್ದು ಈ ಕಾರಣ ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.</p>.<p>ಡಿವೈಎಸ್ಪಿ–1, ಸಿಪಿಐ 3, ಪಿಎಸ್ಐ 8, ಎಎಸ್ಐ 15, ಎಚ್ಸಿ 30, ಪಿಸಿ 100,ಹೋಂಗಾರ್ಡ್ 20 ಅಲ್ಲದೆ ಸಶಸ್ತ್ರ ಮೀಸಲು ಪಡೆಯ 2 ತುಕಡಿ ಈಗಾಗಲೇ ಮಾಣಿಕ್ಯಗಿರಿಯಲ್ಲಿ ಮೊಕ್ಕಾಂ ಹೂಡಿವೆ. ಮಾಣಕ್ಯಗಿರಿಯ ಮುಖ್ಯದ್ವಾರದ ಬಳಿ ಬ್ಯಾರಿಕೇಡ್ ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ:</strong> ರಾಜ್ಯ ಸರ್ಕಾರ ಭಾನುವಾರ ಲಾಕ್ಡೌನ್ ಘೋಷಿಸಿರುವ ಮತ್ತು ಕೊರೊನಾ ಸೋಂಕು ಹರಡುವ ಭೀತಿ ಇರುವ ಕಾರಣ ಬಹುತೇಕ ದೇಗುಲಗಳಲ್ಲಿ ಗುರುಪೂರ್ಣಿಮಾ ಸರಳವಾಗಿ ಆಚರಿಸಲಾಗುವುದು. ಕೆಲ ಕಡೆ ವಿಶೇಷ ಪೂಜೆಗಳು ನಡೆದರೆ, ಕೆಲ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.</p>.<p>ಅಫಜಲಪುರ ತಾಲ್ಲೂಕಿನ ದೇವಲಗಾಣಗಪುರದ ದತ್ತ ಮಂದಿರ ಮತ್ತು ಘತ್ತರಗಿಯ ಭಾಗ್ಯವಂತಿ ದೇವಸ್ಥಾನ ಬಂದ್ ಇರುತ್ತವೆ. ಕಲಬುರ್ಗಿ ಬುದ್ಧ ವಿಹಾರ ಸಹ ಬಂದ್ ಇರಲಿದ್ದು, ಬುದ್ಧ ದರ್ಶನಕ್ಕೆ ಅವಕಾಶ ಇರುವುದಿಲ್ಲ.</p>.<p>ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಬೆಳಿಗ್ಗೆ 7 ರಿಂದ 10ರವರೆಗೆ ಮಾತ್ರ ದೇವರ ದರ್ಶನ ಪಡೆಯಲು ಅವಕಾಶವಿರುತ್ತದೆ ಎಂದು ದೇವಸ್ಥಾನದ ಪ್ರಮುಖರು ತಿಳಿಸಿದ್ದಾರೆ.</p>.<p class="Subhead">ವ್ಯಾಸ ಪೂರ್ಣಿಮಾ: ನಗರದ ಬಿದ್ದಾಪುರದ ನಂಜನಗೂಡು ರಾಯರ ಮಠ ಮತ್ತು ವಿದ್ಯಾನಗರ ಕಾಲೊನಿಯ ಕೃಷ್ಣ ಮಠದಲ್ಲಿ ವ್ಯಾಸ ಪೂರ್ಣಿಮಾ ನಡೆಯಲಿದೆ. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ವಿಶೇಷ ಪೂಜೆ ಜರುಗಲಿದ್ದು, ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ರಾಯರ ಮಠದ ವ್ಯವಸ್ಥಾಪಕ ನವಲೆ ಕೃಷ್ಣಾಚಾರ ತಿಳಿಸಿದರು.</p>.<p class="Subhead">ಸರಳ ಆಚರಣೆ: ರಾಮಮಂದಿರ ಸರ್ಕಲ್ ಬಳಿಯಶಿರಡಿ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 6.30 ರಿಂದ 8ರವರೆಗೆ ಗುರುಪೂರ್ಣಿಮಾ ಸರಳವಾಗಿ ಆಚರಿಸಲಾಗುವುದು. ಈ ಅವಧಿಯಲ್ಲಿ ಮಾತ್ರ ಭಕ್ತರಿಗೆ ದರ್ಶನ ಮಾಡಲು ಅವಕಾಶವಿರುತ್ತದೆ ಎಂದು ಮಂದಿರದ ಪ್ರತಿನಿಧಿ ಡಾ. ಎನ್.ಜಿ.ಗಚ್ಚಿನಮನಿ ತಿಳಿಸಿದರು.</p>.<p class="Briefhead"><strong>‘ಮನೆಯಲ್ಲೇ ಮಾತೆಯ ಜನ್ಮದಿನ ಆಚರಿಸಿ’</strong></p>.<p>ತಾಲ್ಲೂಕಿನ ಮಾಣಿಕ್ಯಗಿರಿಯ ಲಿಂ.ಮಾತಾಮಾಣಿಕೇಶ್ವರಿಯವರ 87ನೇ ಜನ್ಮದಿನವನ್ನು ಭಕ್ತರು ಭಾನುವಾರ (ಜುಲೈ 5) ತಮ್ಮ ಮನೆಯಲ್ಲೇ ಆಚರಿಸುವಂತೆ ರೂಪರಹಿತ ಅಹಿಂಸಾ ಯೋಗೀಶ್ವರ ವೀರಧರ್ಮಜಾ ಮಾತಾ ಟ್ರಸ್ಟ್ನ ಟ್ರಸ್ಟಿ ಸಿದ್ರಾಮಪ್ಪ ಸಣ್ಣೂರ ಮನವಿ ಮಾಡಿದ್ದಾರೆ.</p>.<p>‘ಭಾನುವಾರ ಬೆಳಿಗ್ಗೆ 7.30ಕ್ಕೆ ಮಾತೆ ಮಾಣಿಕೇಶ್ವರಿಯವರ ಜನ್ಮದಿನ ಮಾಣಿಕ್ಯಗಿರಿಯಲ್ಲಿ ಆಚರಿಸಲಾಗುವುದು. ಕೊರೊನಾ ಸೋಂಕು ಎಲ್ಲೆಡೆ ವ್ಯಾಪಿಸುತ್ತಿರುವ ಕಾರಣ ಭಕ್ತಾದಿಗಳು ಮಾಣಿಕ್ಯಗಿರಿಗೆ ಬಾರದೇ ತಮ್ಮ ಮನೆಗಳಲ್ಲಿ ಜನ್ಮದಿನ ಆಚರಿಸಬೇಕು’ ಎಂದು ಅವರು ಕೋರಿದ್ದಾರೆ.</p>.<p>ಲಾಕ್ಡೌನ್ ಮಧ್ಯೆಯೂ ಕೆಲ ಭಕ್ತರು ಮಾಣಿಕ್ಯಗಿರಿಗೆ ಬರುವ ಸಾಧ್ಯತೆಯಿದ್ದು ಈ ಕಾರಣ ಡಿವೈಎಸ್ಪಿ ಈ.ಎಸ್.ವೀರಭದ್ರಯ್ಯ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.</p>.<p>ಡಿವೈಎಸ್ಪಿ–1, ಸಿಪಿಐ 3, ಪಿಎಸ್ಐ 8, ಎಎಸ್ಐ 15, ಎಚ್ಸಿ 30, ಪಿಸಿ 100,ಹೋಂಗಾರ್ಡ್ 20 ಅಲ್ಲದೆ ಸಶಸ್ತ್ರ ಮೀಸಲು ಪಡೆಯ 2 ತುಕಡಿ ಈಗಾಗಲೇ ಮಾಣಿಕ್ಯಗಿರಿಯಲ್ಲಿ ಮೊಕ್ಕಾಂ ಹೂಡಿವೆ. ಮಾಣಕ್ಯಗಿರಿಯ ಮುಖ್ಯದ್ವಾರದ ಬಳಿ ಬ್ಯಾರಿಕೇಡ್ ಹಾಕಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>