<p><strong>ಕಾಳಗಿ:</strong> ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ.</p>.<p>ತೇವಾಂಶಕ್ಕೆ ತೊಗರಿ, ಸೋಯಾ, ಹತ್ತಿ, ಕಬ್ಬು ಹಾಳಾಗುವ ಭಯ ರೈತರಲ್ಲಿ ಕಾಡುತ್ತಿದೆ. ರಾಶಿಗೆ ಬಂದ ಹೆಸರು, ಉದ್ದು ಬಿಡಿಸಿಕೊಳ್ಳಲಾಗದೆ ಹೊಲದಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿ ಅನ್ನದಾತರು ಕಂಗಲಾಗಿದ್ದಾರೆ.</p>.<p>ಕಾಳಗಿ ಪಟ್ಟಣದ ಬಸ್ ನಿಲ್ದಾಣ ಬಳಿ ಹಾದುಹೋಗಿರುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ ಕಿತ್ತುಹೋಗಿ ತಗ್ಗುಬಿದ್ದು ಮಳೆನೀರು ನಿಂತಿದೆ. </p>.<p>ಹೇರೂರ (ಕೆ) ಬೆಣ್ಣೆತೊರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದ್ದು, ಗುರುವಾರ 14 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ನದಿಪಾತ್ರದ ಹಳೆಹೆಬ್ಬಾಳ, ಕಣಸೂರ, ಮಲಘಾಣ, ತೆಂಗಳಿ ಗ್ರಾಮಸ್ಥರಿಗೆ ನದಿತೀರಕ್ಕೆ ಜನ-ಜಾನುವಾರು ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.</p>.<p>ಸೇಡಂ ಸಂಪರ್ಕಿಸುವ ಭೂತ್ಪೂರ-ರುದ್ನೂರ ನಡುವಿನ ಹೆದ್ದಾರಿ ಸೇತುವೆ ಮುಳುಗಡೆಯಾಗಿದ್ದು, ಕಾಳಗಿ, ಚಿಂಚೋಳಿ ತಾಲ್ಲೂಕು ಸಂಪರ್ಕ ರಸ್ತೆ ಸಂಚಾರ ಮಾರ್ಗ ಸ್ಥಗಿತಗೊಂಡಿದೆ. </p>.<p>ಚಿಂಚೋಳಿ (ಎಚ್) ರಾಜ್ಯಹೆದ್ದಾರಿ ಮೇಲೆ ಮಳೆನೀರು ಅಧಿಕವಾಗಿ ನಿಂತಿದ್ದರಿಂದ ಚಿಂಚೋಳಿ (ಎಚ್)-ಸುಗೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಅಶೋಕನಗರ ಮಾರ್ಗ ಬದಲಾವಣೆಯಲ್ಲಿ ಸಂಚರಿಸುತ್ತಿವೆ.</p>.<p>ಚಿತ್ತಾಪುರ ತಾಲ್ಲೂಕಿನ ದಂಡೋತಿ ಸೇತುವೆ ಮುಳುಗಡೆಯಾಗಿದ್ದರಿಂದ ಕಾಳಗಿ-ಚಿತ್ತಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ವಾಹನಗಳು ತೆಂಗಳಿ ಕ್ರಾಸ್ ವರೆಗೆ ಮಾತ್ರ ಸಂಚರಿಸಿದವು.</p>.<p>‘ಬೆಣ್ಣೆತೊರಾ ಜಲಾಶಯದ ಹೆಚ್ಚುವರಿ ನೀರು ಹೊರಬಿಟ್ಟಿದ್ದರಿಂದ ಅಕ್ಕಪಕ್ಕದ ಜಮೀನುಗಳ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು’ ಎಂದು ಹೆಬ್ಬಾಳ ಗ್ರಾ.ಪಂ ಸದಸ್ಯೆ ರುಕ್ಮಿಣಿ ಭೀಮಾಶಂಕರ, ಮಲಘಾಣ ಮಾಜಿ ಸದಸ್ಯೆ ಅಂಜನಾದೇವಿ ನಾಮದಾರ, ರಾಜಕುಮಾರ ನಾಮದಾರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ತಾಲ್ಲೂಕಿನೆಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ.</p>.<p>ತೇವಾಂಶಕ್ಕೆ ತೊಗರಿ, ಸೋಯಾ, ಹತ್ತಿ, ಕಬ್ಬು ಹಾಳಾಗುವ ಭಯ ರೈತರಲ್ಲಿ ಕಾಡುತ್ತಿದೆ. ರಾಶಿಗೆ ಬಂದ ಹೆಸರು, ಉದ್ದು ಬಿಡಿಸಿಕೊಳ್ಳಲಾಗದೆ ಹೊಲದಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿ ಅನ್ನದಾತರು ಕಂಗಲಾಗಿದ್ದಾರೆ.</p>.<p>ಕಾಳಗಿ ಪಟ್ಟಣದ ಬಸ್ ನಿಲ್ದಾಣ ಬಳಿ ಹಾದುಹೋಗಿರುವ ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ ಕಿತ್ತುಹೋಗಿ ತಗ್ಗುಬಿದ್ದು ಮಳೆನೀರು ನಿಂತಿದೆ. </p>.<p>ಹೇರೂರ (ಕೆ) ಬೆಣ್ಣೆತೊರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಳವಾಗಿದ್ದು, ಗುರುವಾರ 14 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ನದಿಪಾತ್ರದ ಹಳೆಹೆಬ್ಬಾಳ, ಕಣಸೂರ, ಮಲಘಾಣ, ತೆಂಗಳಿ ಗ್ರಾಮಸ್ಥರಿಗೆ ನದಿತೀರಕ್ಕೆ ಜನ-ಜಾನುವಾರು ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.</p>.<p>ಸೇಡಂ ಸಂಪರ್ಕಿಸುವ ಭೂತ್ಪೂರ-ರುದ್ನೂರ ನಡುವಿನ ಹೆದ್ದಾರಿ ಸೇತುವೆ ಮುಳುಗಡೆಯಾಗಿದ್ದು, ಕಾಳಗಿ, ಚಿಂಚೋಳಿ ತಾಲ್ಲೂಕು ಸಂಪರ್ಕ ರಸ್ತೆ ಸಂಚಾರ ಮಾರ್ಗ ಸ್ಥಗಿತಗೊಂಡಿದೆ. </p>.<p>ಚಿಂಚೋಳಿ (ಎಚ್) ರಾಜ್ಯಹೆದ್ದಾರಿ ಮೇಲೆ ಮಳೆನೀರು ಅಧಿಕವಾಗಿ ನಿಂತಿದ್ದರಿಂದ ಚಿಂಚೋಳಿ (ಎಚ್)-ಸುಗೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನಗಳು ಅಶೋಕನಗರ ಮಾರ್ಗ ಬದಲಾವಣೆಯಲ್ಲಿ ಸಂಚರಿಸುತ್ತಿವೆ.</p>.<p>ಚಿತ್ತಾಪುರ ತಾಲ್ಲೂಕಿನ ದಂಡೋತಿ ಸೇತುವೆ ಮುಳುಗಡೆಯಾಗಿದ್ದರಿಂದ ಕಾಳಗಿ-ಚಿತ್ತಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ವಾಹನಗಳು ತೆಂಗಳಿ ಕ್ರಾಸ್ ವರೆಗೆ ಮಾತ್ರ ಸಂಚರಿಸಿದವು.</p>.<p>‘ಬೆಣ್ಣೆತೊರಾ ಜಲಾಶಯದ ಹೆಚ್ಚುವರಿ ನೀರು ಹೊರಬಿಟ್ಟಿದ್ದರಿಂದ ಅಕ್ಕಪಕ್ಕದ ಜಮೀನುಗಳ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು’ ಎಂದು ಹೆಬ್ಬಾಳ ಗ್ರಾ.ಪಂ ಸದಸ್ಯೆ ರುಕ್ಮಿಣಿ ಭೀಮಾಶಂಕರ, ಮಲಘಾಣ ಮಾಜಿ ಸದಸ್ಯೆ ಅಂಜನಾದೇವಿ ನಾಮದಾರ, ರಾಜಕುಮಾರ ನಾಮದಾರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>