<p><strong>ಕಾಳಗಿ:</strong> ಭಾವೈಕ್ಯದ ಮೊಹರಂ ಹಬ್ಬ ತಾಲ್ಲೂಕಿನ ಎಲ್ಲೆಡೆ ಶುಕ್ರವಾರ (ಜೂನ್ 27) ಆರಂಭಗೊಂಡಿದ್ದು ಈ ನಿಮಿತ್ತ ಕಾಳಗಿ-ಮಲಘಾಣ ನಡುವಿನ ಹಜರತ್ ಶಹಾಹುಸೇನ್ ದರ್ಗಾದಲ್ಲಿ ಭಕ್ತರು ಶುಕ್ರವಾರ ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ ಭಕ್ತಿಭಾವ ಮೆರೆದರು.</p>.<p>ಬೆಳಿಗ್ಗೆ ಹಲಗೆ, ತಾಶಾ ವಾದ್ಯ, ಯುವಕರ ಕುಣಿತದೊಂದಿಗೆ ಚಾಂದಶಹಾ ದರ್ವೇಶ ಮನೆಯಿಂದ ಪಂಜಿ ಹೊತ್ತ ಮುರ್ತುಜ್ ಶಹಾ ದರವೇಶ ಸವಾರಿ ತುಂಬಿ ಮೆರವಣಿಗೆಯಲ್ಲಿ ಸಾಗಿದರು.</p>.<p>ಮುಖ್ಯಬಜಾರ್, ಮುತ್ಯಾನಕಟ್ಟೆ, ಕುರುಬರಬಾವಿ, ಹನುಮಾನ ಮಂದಿರ, ಗೋಟೂರ ಅಗಸಿ ರಸ್ತೆ ಮಾರ್ಗವಾಗಿ ಮೆರವಣಿಗೆ ಜರುಗಿತು.</p>.<p>ಕಾಳಗಿ, ಮಲಘಾಣ, ಡೊಣ್ಣೂರ ಮತ್ತಿತರ ಊರಿನ ಭಕ್ತರು ಇಡೀ ದಿನ ಶಹಾಹುಸೇನ ದರ್ಗಾ ಮತ್ತು ಕಾಸಿಂಸಾಬ ದರ್ಗಾಕ್ಕೆ ಕಾಲ್ನಡಿಗೆ, ಬೈಕ್, ಆಟೊ ಮೂಲಕ ತೆರಳಿ ಮಾಲದಿ, ಅನ್ನ, ಕಾಯಿ-ಕರ್ಪೂರ, ಲೋಬಾನ ಸಲ್ಲಿಸಿ ಪಂಜಿ ಮತ್ತು ಗೋರಿಗೆ ನಮಿಸಿ ಪ್ರಾರ್ಥಿಸಿದರು.</p>.<p>ಕೋರವಾರ, ಭರತನೂರ, ಚಿಂತಕುಂಟಾ, ನಾವದಗಿ, ಗೋಟೂರ, ಕೋಡ್ಲಿ, ರಟಕಲ್, ತೆಂಗಳಿ ಮತ್ತಿತರ ಗ್ರಾಮಗಳಲ್ಲಿ ಮೊಹರಂ ಅದ್ದೂರಿಯಿಂದ ನೆರವೇರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಭಾವೈಕ್ಯದ ಮೊಹರಂ ಹಬ್ಬ ತಾಲ್ಲೂಕಿನ ಎಲ್ಲೆಡೆ ಶುಕ್ರವಾರ (ಜೂನ್ 27) ಆರಂಭಗೊಂಡಿದ್ದು ಈ ನಿಮಿತ್ತ ಕಾಳಗಿ-ಮಲಘಾಣ ನಡುವಿನ ಹಜರತ್ ಶಹಾಹುಸೇನ್ ದರ್ಗಾದಲ್ಲಿ ಭಕ್ತರು ಶುಕ್ರವಾರ ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ ಭಕ್ತಿಭಾವ ಮೆರೆದರು.</p>.<p>ಬೆಳಿಗ್ಗೆ ಹಲಗೆ, ತಾಶಾ ವಾದ್ಯ, ಯುವಕರ ಕುಣಿತದೊಂದಿಗೆ ಚಾಂದಶಹಾ ದರ್ವೇಶ ಮನೆಯಿಂದ ಪಂಜಿ ಹೊತ್ತ ಮುರ್ತುಜ್ ಶಹಾ ದರವೇಶ ಸವಾರಿ ತುಂಬಿ ಮೆರವಣಿಗೆಯಲ್ಲಿ ಸಾಗಿದರು.</p>.<p>ಮುಖ್ಯಬಜಾರ್, ಮುತ್ಯಾನಕಟ್ಟೆ, ಕುರುಬರಬಾವಿ, ಹನುಮಾನ ಮಂದಿರ, ಗೋಟೂರ ಅಗಸಿ ರಸ್ತೆ ಮಾರ್ಗವಾಗಿ ಮೆರವಣಿಗೆ ಜರುಗಿತು.</p>.<p>ಕಾಳಗಿ, ಮಲಘಾಣ, ಡೊಣ್ಣೂರ ಮತ್ತಿತರ ಊರಿನ ಭಕ್ತರು ಇಡೀ ದಿನ ಶಹಾಹುಸೇನ ದರ್ಗಾ ಮತ್ತು ಕಾಸಿಂಸಾಬ ದರ್ಗಾಕ್ಕೆ ಕಾಲ್ನಡಿಗೆ, ಬೈಕ್, ಆಟೊ ಮೂಲಕ ತೆರಳಿ ಮಾಲದಿ, ಅನ್ನ, ಕಾಯಿ-ಕರ್ಪೂರ, ಲೋಬಾನ ಸಲ್ಲಿಸಿ ಪಂಜಿ ಮತ್ತು ಗೋರಿಗೆ ನಮಿಸಿ ಪ್ರಾರ್ಥಿಸಿದರು.</p>.<p>ಕೋರವಾರ, ಭರತನೂರ, ಚಿಂತಕುಂಟಾ, ನಾವದಗಿ, ಗೋಟೂರ, ಕೋಡ್ಲಿ, ರಟಕಲ್, ತೆಂಗಳಿ ಮತ್ತಿತರ ಗ್ರಾಮಗಳಲ್ಲಿ ಮೊಹರಂ ಅದ್ದೂರಿಯಿಂದ ನೆರವೇರುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>