<p><strong>ಕಾಳಗಿ</strong>: ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಮತದಾನ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ.</p>.<p>ಕಾಳಗಿ ಪಟ್ಟಣ ಮತ್ತು 6 ತಾಂಡಾಗಳು ಸೇರಿ ಒಟ್ಟು 11ವಾರ್ಡ್ಗಳ 11 ಸ್ಥಾನಗಳಿಗೆ ಸಲ್ಲಿಸಿದ 32 ನಾಮಪತ್ರಗಳಲ್ಲಿ 3 ನಾಮಪತ್ರ ತಿರಸ್ಕೃತಗೊಂಡಿದ್ದು, 5 ನಾಮಪತ್ರ ವಾಪಸ್ ಪಡೆಯಲಾಗಿದೆ. ಅಂತಿಮವಾಗಿ ಉಳಿದ 24 ಅಭ್ಯರ್ಥಿಗಳಲ್ಲಿ ಪ್ರತಿಸ್ಪರ್ಧೆ ಇಲ್ಲದ ಕಾರಣ ವಾರ್ಡ್ ನಂ.04ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಇನ್ನು ಬಿಜೆಪಿ-10, ಕಾಂಗ್ರೆಸ್-10, ಆಮ್ ಆದ್ಮಿ-1 ಮತ್ತು ಪಕ್ಷೇತರ-2 ಹೀಗೆ ಒಟ್ಟು 23 ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.</p>.<p>ಪಟ್ಟಣ ಪಂಚಾಯಿತಿ ಫಲಿತಾಂಶ ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಜಿದ್ದಾಜಿದ್ದಿಯ ಅಖಾಡ ನಿರ್ಮಾಣಗೊಂಡಿದೆ.</p>.<p>ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿ.ಪ ಸದಸ್ಯ ಜಗದೇವ ಗುತ್ತೇದಾರ ಅವರಿಗೆ ಈ ಚುನಾವಣೆ ಸವಾಲ್ ಆಗಿದೆ. ಮೇಲ್ನೋಟಕ್ಕೆ ಅಭ್ಯರ್ಥಿಗಳ ಗೆಲುವಿಗೆ ಎರಡು ಪಕ್ಷಗಳಲ್ಲಿ ಪ್ರಚಾರದ ಕಾವು ಜೋರಾಗಿದೆ. ಎರಡು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ-ಕಾಂಗ್ರೆಸ್ಗೆ ನಿದ್ದೆಗೆಡಿಸಿದ್ದಾರೆ.</p>.<div><blockquote>ಕಾಳಗಿ ಪ್ರಸಿದ್ಧ ಕ್ಷೇತ್ರವಾಗಿದ್ದರಿಂದ ಪ್ರಯತ್ನಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಜನರು ನಮ್ಮನ್ನು ಅಷ್ಟೇ ಗೌರವ ತೋರುತ್ತಿದ್ದಾರೆ</blockquote><span class="attribution">ರಾಜೇಶ ಗುತ್ತೇದಾರ ಜಿ.ಪಂ ಮಾಜಿ ಸದಸ್ಯ</span></div>.<div><blockquote>ಶಾಸಕ ಡಾ.ಅವಿನಾಶ ಜಾಧವ ಅವರು ಸಾಕಷ್ಟು ಅನುದಾನ ತಂದು ಕಾಳಗಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತಿದ್ದೇವೆ</blockquote><span class="attribution">ಶೇಖರ ಪಾಟೀಲ ಬಿಜೆಪಿ ಜಿಲ್ಲಾ ಕಾರ್ಯದರ್ಶಿ</span></div>.<p> <strong>ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ</strong> </p><p>ವಾರ್ಡ್ ನಂ.1: ಗುರುರಾಜ ತಿಪ್ಪಯ್ಯ (ಕಾಂಗ್ರೆಸ್) ಮಂಜುನಾಥ ಸಿದ್ದಯ್ಯ (ಬಿಜೆಪಿ) ವಾರ್ಡ್</p><p>ನಂ.2: ಜಗದೀಶ ಜೈಶಂಕರ (ಬಿಜೆಪಿ) ಬಸವರಾಜ ಪರಮೇಶ್ವರ (ಕಾಂಗ್ರೆಸ್) ಶೇಕ್ ಪರ್ಹಾನ ಪೀರಅಹ್ಮದ್ (ಆಮ್ ಆದ್ಮಿ) ಬಾಬು ಮಲ್ಲಣ್ಣ (ಪಕ್ಷೇತರ) ವಾರ್ಡ್ </p><p>ನಂ.03: ಲಲಿತಾಬಾಯಿ ಸಿದ್ರಾಮಪ್ಪಾ (ಕಾಂಗ್ರೆಸ್) ಸಿದ್ದಲಿಂಗಮ್ಮ ಚಂದ್ರಶೆಟ್ಟಿ (ಬಿಜೆಪಿ) ವಾರ್ಡ್ </p><p>ನಂ.05: ರಮೇಶ ಚಂದ್ರಕಾಂತ (ಬಿಜೆಪಿ) ರವಿದಾಸ ಸುಧಾಕರ (ಕಾಂಗ್ರೆಸ್) ವಾರ್ಡ್ </p><p>ನಂ.06: ಲಾಲಬಿ ಸಾದಿಕಮಿಯ್ಯ (ಬಿಜೆಪಿ) ಸಾಲಿಯಾಬೇಗಂ ಮಹೆಬೂಬ (ಕಾಂಗ್ರೆಸ್) </p><p>ವಾರ್ಡ್ ನಂ.07: ಶರಣಪ್ಪ ತಿಮ್ಮಯ್ಯ (ಕಾಂಗ್ರೆಸ್) ಹಣಮಂತ ಗುಂಡಪ್ಪ (ಬಿಜೆಪಿ) </p><p>ವಾರ್ಡ್ ನಂ.08: ಉಷಾರಾಣಿ ದತ್ತಾತ್ರೇಯ (ಕಾಂಗ್ರೆಸ್) ಮೀನಾಕ್ಷಿ ಪ್ರಶಾಂತ (ಬಿಜೆಪಿ) </p><p>ವಾರ್ಡ್ ನಂ.09: ಚಂದ್ರಕಲಾ ಚಂದ್ರಕಾಂತ (ಬಿಜೆಪಿ) ಜಯಶ್ರೀ ಸಂತೋಷಕುಮಾರ (ಕಾಂಗ್ರೆಸ್) </p><p>ವಾರ್ಡ್ ನಂ.10: ಜೀತೇಂದ್ರ ನೂರಸಿಂಗ್ ರಾಠೋಡ (ಬಿಜೆಪಿ) ವಿಜಯಕುಮಾರ ಶಂಕರ (ಕಾಂಗ್ರೆಸ್) ರೋಹಿತ್ ಆನಂದ (ಪಕ್ಷೇತರ) </p><p>ವಾರ್ಡ್ ನಂ.11: ಪಾರ್ವತಿ ವಿಠಲರಾವ (ಬಿಜೆಪಿ) ಪೂಜಾ ರಾಜು (ಕಾಂಗ್ರೆಸ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ</strong>: ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಮತದಾನ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ.</p>.<p>ಕಾಳಗಿ ಪಟ್ಟಣ ಮತ್ತು 6 ತಾಂಡಾಗಳು ಸೇರಿ ಒಟ್ಟು 11ವಾರ್ಡ್ಗಳ 11 ಸ್ಥಾನಗಳಿಗೆ ಸಲ್ಲಿಸಿದ 32 ನಾಮಪತ್ರಗಳಲ್ಲಿ 3 ನಾಮಪತ್ರ ತಿರಸ್ಕೃತಗೊಂಡಿದ್ದು, 5 ನಾಮಪತ್ರ ವಾಪಸ್ ಪಡೆಯಲಾಗಿದೆ. ಅಂತಿಮವಾಗಿ ಉಳಿದ 24 ಅಭ್ಯರ್ಥಿಗಳಲ್ಲಿ ಪ್ರತಿಸ್ಪರ್ಧೆ ಇಲ್ಲದ ಕಾರಣ ವಾರ್ಡ್ ನಂ.04ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.</p>.<p>ಇನ್ನು ಬಿಜೆಪಿ-10, ಕಾಂಗ್ರೆಸ್-10, ಆಮ್ ಆದ್ಮಿ-1 ಮತ್ತು ಪಕ್ಷೇತರ-2 ಹೀಗೆ ಒಟ್ಟು 23 ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.</p>.<p>ಪಟ್ಟಣ ಪಂಚಾಯಿತಿ ಫಲಿತಾಂಶ ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಜಿದ್ದಾಜಿದ್ದಿಯ ಅಖಾಡ ನಿರ್ಮಾಣಗೊಂಡಿದೆ.</p>.<p>ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿ.ಪ ಸದಸ್ಯ ಜಗದೇವ ಗುತ್ತೇದಾರ ಅವರಿಗೆ ಈ ಚುನಾವಣೆ ಸವಾಲ್ ಆಗಿದೆ. ಮೇಲ್ನೋಟಕ್ಕೆ ಅಭ್ಯರ್ಥಿಗಳ ಗೆಲುವಿಗೆ ಎರಡು ಪಕ್ಷಗಳಲ್ಲಿ ಪ್ರಚಾರದ ಕಾವು ಜೋರಾಗಿದೆ. ಎರಡು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ-ಕಾಂಗ್ರೆಸ್ಗೆ ನಿದ್ದೆಗೆಡಿಸಿದ್ದಾರೆ.</p>.<div><blockquote>ಕಾಳಗಿ ಪ್ರಸಿದ್ಧ ಕ್ಷೇತ್ರವಾಗಿದ್ದರಿಂದ ಪ್ರಯತ್ನಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಜನರು ನಮ್ಮನ್ನು ಅಷ್ಟೇ ಗೌರವ ತೋರುತ್ತಿದ್ದಾರೆ</blockquote><span class="attribution">ರಾಜೇಶ ಗುತ್ತೇದಾರ ಜಿ.ಪಂ ಮಾಜಿ ಸದಸ್ಯ</span></div>.<div><blockquote>ಶಾಸಕ ಡಾ.ಅವಿನಾಶ ಜಾಧವ ಅವರು ಸಾಕಷ್ಟು ಅನುದಾನ ತಂದು ಕಾಳಗಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತಿದ್ದೇವೆ</blockquote><span class="attribution">ಶೇಖರ ಪಾಟೀಲ ಬಿಜೆಪಿ ಜಿಲ್ಲಾ ಕಾರ್ಯದರ್ಶಿ</span></div>.<p> <strong>ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ</strong> </p><p>ವಾರ್ಡ್ ನಂ.1: ಗುರುರಾಜ ತಿಪ್ಪಯ್ಯ (ಕಾಂಗ್ರೆಸ್) ಮಂಜುನಾಥ ಸಿದ್ದಯ್ಯ (ಬಿಜೆಪಿ) ವಾರ್ಡ್</p><p>ನಂ.2: ಜಗದೀಶ ಜೈಶಂಕರ (ಬಿಜೆಪಿ) ಬಸವರಾಜ ಪರಮೇಶ್ವರ (ಕಾಂಗ್ರೆಸ್) ಶೇಕ್ ಪರ್ಹಾನ ಪೀರಅಹ್ಮದ್ (ಆಮ್ ಆದ್ಮಿ) ಬಾಬು ಮಲ್ಲಣ್ಣ (ಪಕ್ಷೇತರ) ವಾರ್ಡ್ </p><p>ನಂ.03: ಲಲಿತಾಬಾಯಿ ಸಿದ್ರಾಮಪ್ಪಾ (ಕಾಂಗ್ರೆಸ್) ಸಿದ್ದಲಿಂಗಮ್ಮ ಚಂದ್ರಶೆಟ್ಟಿ (ಬಿಜೆಪಿ) ವಾರ್ಡ್ </p><p>ನಂ.05: ರಮೇಶ ಚಂದ್ರಕಾಂತ (ಬಿಜೆಪಿ) ರವಿದಾಸ ಸುಧಾಕರ (ಕಾಂಗ್ರೆಸ್) ವಾರ್ಡ್ </p><p>ನಂ.06: ಲಾಲಬಿ ಸಾದಿಕಮಿಯ್ಯ (ಬಿಜೆಪಿ) ಸಾಲಿಯಾಬೇಗಂ ಮಹೆಬೂಬ (ಕಾಂಗ್ರೆಸ್) </p><p>ವಾರ್ಡ್ ನಂ.07: ಶರಣಪ್ಪ ತಿಮ್ಮಯ್ಯ (ಕಾಂಗ್ರೆಸ್) ಹಣಮಂತ ಗುಂಡಪ್ಪ (ಬಿಜೆಪಿ) </p><p>ವಾರ್ಡ್ ನಂ.08: ಉಷಾರಾಣಿ ದತ್ತಾತ್ರೇಯ (ಕಾಂಗ್ರೆಸ್) ಮೀನಾಕ್ಷಿ ಪ್ರಶಾಂತ (ಬಿಜೆಪಿ) </p><p>ವಾರ್ಡ್ ನಂ.09: ಚಂದ್ರಕಲಾ ಚಂದ್ರಕಾಂತ (ಬಿಜೆಪಿ) ಜಯಶ್ರೀ ಸಂತೋಷಕುಮಾರ (ಕಾಂಗ್ರೆಸ್) </p><p>ವಾರ್ಡ್ ನಂ.10: ಜೀತೇಂದ್ರ ನೂರಸಿಂಗ್ ರಾಠೋಡ (ಬಿಜೆಪಿ) ವಿಜಯಕುಮಾರ ಶಂಕರ (ಕಾಂಗ್ರೆಸ್) ರೋಹಿತ್ ಆನಂದ (ಪಕ್ಷೇತರ) </p><p>ವಾರ್ಡ್ ನಂ.11: ಪಾರ್ವತಿ ವಿಠಲರಾವ (ಬಿಜೆಪಿ) ಪೂಜಾ ರಾಜು (ಕಾಂಗ್ರೆಸ್)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>