<p><strong>ಕಾಳಗಿ:</strong> ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ತಿಂಗಳೇ ಉರುಳಿದರೂ ಗೆದ್ದ ಅಭ್ಯರ್ಥಿಗಳ ಹೆಸರು ಕರ್ನಾಟಕ ರಾಜ್ಯಪತ್ರದಲ್ಲಿ ಉಲ್ಲೇಖವಾಗಿಲ್ಲ. ಅಲ್ಲದೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ದಿನಾಂಕವೂ ಪ್ರಕಟವಾಗಿಲ್ಲ.</p>.<p>ಐದು ವರ್ಷದ ಒಂದು ಅವಧಿಯೆ ಕಳೆದುಹೋದ ಮೇಲೆ ಪ್ರಥಮ ಬಾರಿಗೆ ನಡೆದ ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಕಳೆದ ಆಗಸ್ಟ್ 20ರಂದು ಪ್ರಕಟಗೊಂಡಿದೆ.</p>.<p>ಈ ಚುನಾವಣೆಯ ಮೊದಲೇ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಹೊರಹೊಮ್ಮಿ ಅಧ್ಯಕ್ಷ ಸ್ಥಾನ ‘ಸಾಮಾನ್ಯ ವರ್ಗ’ ಮತ್ತು ಉಪಾಧ್ಯಕ್ಷ ಸ್ಥಾನ ‘ಪರಿಶಿಷ್ಟ ಜಾತಿ’ಗೆ ನಿಗದಿಯಾಗಿದೆ.</p>.<p>ಕಾಳಗಿ ತಾಲ್ಲೂಕಾದ ಮೇಲೆ ಹಾಗೂ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮೇಲೆ ಇದು ಪ್ರಥಮ ಚುನಾವಣೆ ಆಗಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಭಾರಿ ಹುಮ್ಮಸ್ಸಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.</p>.<p>ಅಷ್ಟೇ ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಇದೇ ಊರಿನವರಾಗಿದ್ದರಿಂದ ಮತ್ತು ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಇದೇ ತಾಲ್ಲೂಕಿನವರಾಗಿದ್ದರಿಂದ 11ವಾರ್ಡ್ಗಳಿಗೂ ಜಿದ್ದಾಜಿದ್ದಿಯಿಂದ ಎದುರಿಸಿ ಕಾಂಗ್ರೆಸ್ಸಿನ 6 ಮತ್ತು ಬಿಜೆಪಿಯ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.</p>.<p>ಗೆದ್ದ ಅಭ್ಯರ್ಥಿಗಳೆಲ್ಲರೂ ಹೊಸ ಮುಖಗಳೇ ಆಗಿದ್ದು, ಮಾತು ಎತ್ತಿದರೆ ಸಾಕು ‘ಅಧಿಕಾರ ಸ್ವೀಕಾರ’ ಇನ್ನು ಯಾವಾಗ? ಎಂಬ ಚರ್ಚೆಯೆ ಕೇಳಿಬರುತ್ತಿದೆ. ಮೊದಲೇ ಪಂಚಾಯಿತಿಗೆ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಆಡಳಿತದ ನಡುವೆ ಚುನಾವಣೆಯಾಗಿದೆ.</p>.<p>ವಾರ್ಡ್ಗಳಲ್ಲಿ ಹೆಪ್ಪುಗಟ್ಟಿರುವ ಹಲವು ಸಮಸ್ಯೆಗಳು ಚುನಾಯಿತ ಪ್ರತಿನಿಧಿಗಳಿಗೆ ತಲೆ ತಿನ್ನುತ್ತಿವೆ. ಅಧಿಕೃತ ಆಡಳಿತ ಮಂಡಳಿ ಇಲ್ಲದೆ ಸರ್ಕಾರದ ಅನುದಾನ ಕೈತಪ್ಪಿ ಹೋಗುತ್ತಿದೆ.</p>.<p>ಒಟ್ಟಾರೆ, ನೂತನ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿ ಅಭ್ಯರ್ಥಿಗಳು ಆಯ್ಕೆ ಮುಹೂರ್ತಕ್ಕೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.</p>.<div><blockquote>ಕೋರ್ಟ್ನಲ್ಲಿ ವಾರ್ಡ್ವೊಂದರ ಕೇಸ್ ನಡೆಯುತ್ತಿದ್ದರಿಂದ ತಡವಾಗುತ್ತಿದ್ದು ಮುಂದಿನ ತಿಂಗಳು ಅಧಿಸೂಚನೆ ಪ್ರಕಟಗೊಳ್ಳಲಿದೆ</blockquote><span class="attribution">-ಪೃಥ್ವಿರಾಜ ಪಾಟೀಲ, ತಹಶೀಲ್ದಾರ್ ಕಾಳಗಿ</span></div>.<div><blockquote>ಗೆದ್ದ ಅಭ್ಯರ್ಥಿಗಳ ಗೆಜೆಟ್ ಈ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅನುದಾನವಿಲ್ಲದೇ ಅಭಿವೃದ್ಧಿಗೆ ತೊಡಕಾಗುತ್ತಿದೆ.</blockquote><span class="attribution">-ಪಂಕಜಾ ಎ., ಮುಖ್ಯಾಧಿಕಾರಿ ಪ.ಪಂ ಕಾಳಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಳಗಿ:</strong> ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ತಿಂಗಳೇ ಉರುಳಿದರೂ ಗೆದ್ದ ಅಭ್ಯರ್ಥಿಗಳ ಹೆಸರು ಕರ್ನಾಟಕ ರಾಜ್ಯಪತ್ರದಲ್ಲಿ ಉಲ್ಲೇಖವಾಗಿಲ್ಲ. ಅಲ್ಲದೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ದಿನಾಂಕವೂ ಪ್ರಕಟವಾಗಿಲ್ಲ.</p>.<p>ಐದು ವರ್ಷದ ಒಂದು ಅವಧಿಯೆ ಕಳೆದುಹೋದ ಮೇಲೆ ಪ್ರಥಮ ಬಾರಿಗೆ ನಡೆದ ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಕಳೆದ ಆಗಸ್ಟ್ 20ರಂದು ಪ್ರಕಟಗೊಂಡಿದೆ.</p>.<p>ಈ ಚುನಾವಣೆಯ ಮೊದಲೇ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಹೊರಹೊಮ್ಮಿ ಅಧ್ಯಕ್ಷ ಸ್ಥಾನ ‘ಸಾಮಾನ್ಯ ವರ್ಗ’ ಮತ್ತು ಉಪಾಧ್ಯಕ್ಷ ಸ್ಥಾನ ‘ಪರಿಶಿಷ್ಟ ಜಾತಿ’ಗೆ ನಿಗದಿಯಾಗಿದೆ.</p>.<p>ಕಾಳಗಿ ತಾಲ್ಲೂಕಾದ ಮೇಲೆ ಹಾಗೂ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಮೇಲೆ ಇದು ಪ್ರಥಮ ಚುನಾವಣೆ ಆಗಿದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಭಾರಿ ಹುಮ್ಮಸ್ಸಿನಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.</p>.<p>ಅಷ್ಟೇ ಅಲ್ಲದೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಇದೇ ಊರಿನವರಾಗಿದ್ದರಿಂದ ಮತ್ತು ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಇದೇ ತಾಲ್ಲೂಕಿನವರಾಗಿದ್ದರಿಂದ 11ವಾರ್ಡ್ಗಳಿಗೂ ಜಿದ್ದಾಜಿದ್ದಿಯಿಂದ ಎದುರಿಸಿ ಕಾಂಗ್ರೆಸ್ಸಿನ 6 ಮತ್ತು ಬಿಜೆಪಿಯ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.</p>.<p>ಗೆದ್ದ ಅಭ್ಯರ್ಥಿಗಳೆಲ್ಲರೂ ಹೊಸ ಮುಖಗಳೇ ಆಗಿದ್ದು, ಮಾತು ಎತ್ತಿದರೆ ಸಾಕು ‘ಅಧಿಕಾರ ಸ್ವೀಕಾರ’ ಇನ್ನು ಯಾವಾಗ? ಎಂಬ ಚರ್ಚೆಯೆ ಕೇಳಿಬರುತ್ತಿದೆ. ಮೊದಲೇ ಪಂಚಾಯಿತಿಗೆ ಜನಪ್ರತಿನಿಧಿಗಳಿಲ್ಲದೇ ಅಧಿಕಾರಿಗಳ ಆಡಳಿತದ ನಡುವೆ ಚುನಾವಣೆಯಾಗಿದೆ.</p>.<p>ವಾರ್ಡ್ಗಳಲ್ಲಿ ಹೆಪ್ಪುಗಟ್ಟಿರುವ ಹಲವು ಸಮಸ್ಯೆಗಳು ಚುನಾಯಿತ ಪ್ರತಿನಿಧಿಗಳಿಗೆ ತಲೆ ತಿನ್ನುತ್ತಿವೆ. ಅಧಿಕೃತ ಆಡಳಿತ ಮಂಡಳಿ ಇಲ್ಲದೆ ಸರ್ಕಾರದ ಅನುದಾನ ಕೈತಪ್ಪಿ ಹೋಗುತ್ತಿದೆ.</p>.<p>ಒಟ್ಟಾರೆ, ನೂತನ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿ ಅಭ್ಯರ್ಥಿಗಳು ಆಯ್ಕೆ ಮುಹೂರ್ತಕ್ಕೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.</p>.<div><blockquote>ಕೋರ್ಟ್ನಲ್ಲಿ ವಾರ್ಡ್ವೊಂದರ ಕೇಸ್ ನಡೆಯುತ್ತಿದ್ದರಿಂದ ತಡವಾಗುತ್ತಿದ್ದು ಮುಂದಿನ ತಿಂಗಳು ಅಧಿಸೂಚನೆ ಪ್ರಕಟಗೊಳ್ಳಲಿದೆ</blockquote><span class="attribution">-ಪೃಥ್ವಿರಾಜ ಪಾಟೀಲ, ತಹಶೀಲ್ದಾರ್ ಕಾಳಗಿ</span></div>.<div><blockquote>ಗೆದ್ದ ಅಭ್ಯರ್ಥಿಗಳ ಗೆಜೆಟ್ ಈ ವಾರದಲ್ಲಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಅನುದಾನವಿಲ್ಲದೇ ಅಭಿವೃದ್ಧಿಗೆ ತೊಡಕಾಗುತ್ತಿದೆ.</blockquote><span class="attribution">-ಪಂಕಜಾ ಎ., ಮುಖ್ಯಾಧಿಕಾರಿ ಪ.ಪಂ ಕಾಳಗಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>