<p><strong>ಕಲಬುರಗಿ</strong>: ‘ಜಾತಿ ಮತಗಳನ್ನು ಮೀರಿದ ಅಂತಃಕರಣವುಳ್ಳ ಶರಣ ಸಂಕುಲವು ಸಾರ್ವಕಾಲಿಕ ಶ್ರೇಷ್ಠವಾಗಿದೆ’ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.</p>.<p>ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಕರಿಕಾಲ ಚೋಳ’ ನಾಟಕದ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಭಿನ್ನ ನಾಟಕಗಳನ್ನು ಆಡುವ ಮೂಲಕ ಕಲಬುರಗಿ ರಂಗಾಯಣ ತಂಡವು ಸಮಾಜದ ಎಲ್ಲ ವರ್ಗಗಳನ್ನು ತಲುಪುವ, ಆ ಮೂಲಕ ಸಾಂಸ್ಕೃತಿಕ ಅರಿವನ್ನು ಮೂಡಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ’ ಎಂದರು.</p>.<p>‘ಕರಿಕಾಲ ಚೋಳ’ ನಾಟಕದ ರಚನೆಕಾರ ಮಹಾಂತೇಶ ನವಲಕಲ್ ಮಾತನಾಡಿ, ‘ಜಾತಿ ನಿರ್ಮೂಲನೆಯೇ ಶರಣರ ನಿಜವಾದ ಆಶಯಗಳಾಗಿದ್ದವು. ಇಂತಹ ಸೂಕ್ಷ್ಮ ವೈಚಾರಿಕ ವಸ್ತುವುಳ್ಳ ನಾಟಕವನ್ನು ಕಲಬುರಗಿ ರಂಗಾಯಣ ಕೈಗೆತ್ತಿಕೊಂಡು ಪ್ರದರ್ಶನ ಮಾಡಿದ್ದು ಅಭಿನಂದನೀಯ’ ಎಂದು ಹೇಳಿದರು.</p>.<p>ದಲಿತ ಮಾದಿಗ ಸಮನ್ವಯ ಸಮಿತಿ (ಡಿಎಂಎಸ್ಎಸ್) ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಮಾತನಾಡಿದರು.</p>.<p>ಸೇಡಂನ ಗಣಪತರಾವ ಚಿಮ್ಮನಚೋಡಕರ್, ರಾಜಕುಮಾರ ಹೊಸಮನಿ, ದಿಗಂಬರ ತ್ರಿಮೂರ್ತಿ, ಅರುಂಧತಿ ನಾಗಮೂರ್ತಿ, ಶ್ರೀಮಂತ ಭಂಡಾರಿ, ಮಲ್ಲಿಕಾರ್ಜುನ ದಿನ್ನಿ, ಸುಭಾಷ ಕಾಂಬಳೆ, ಅಮೃತ ಕೊರಳ್ಳಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ‘ಜಾತಿ ಮತಗಳನ್ನು ಮೀರಿದ ಅಂತಃಕರಣವುಳ್ಳ ಶರಣ ಸಂಕುಲವು ಸಾರ್ವಕಾಲಿಕ ಶ್ರೇಷ್ಠವಾಗಿದೆ’ ಎಂದು ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಹೇಳಿದರು.</p>.<p>ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಕರಿಕಾಲ ಚೋಳ’ ನಾಟಕದ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ವಿಭಿನ್ನ ನಾಟಕಗಳನ್ನು ಆಡುವ ಮೂಲಕ ಕಲಬುರಗಿ ರಂಗಾಯಣ ತಂಡವು ಸಮಾಜದ ಎಲ್ಲ ವರ್ಗಗಳನ್ನು ತಲುಪುವ, ಆ ಮೂಲಕ ಸಾಂಸ್ಕೃತಿಕ ಅರಿವನ್ನು ಮೂಡಿಸುವ ದಿಸೆಯಲ್ಲಿ ಶ್ರಮಿಸುತ್ತಿದೆ’ ಎಂದರು.</p>.<p>‘ಕರಿಕಾಲ ಚೋಳ’ ನಾಟಕದ ರಚನೆಕಾರ ಮಹಾಂತೇಶ ನವಲಕಲ್ ಮಾತನಾಡಿ, ‘ಜಾತಿ ನಿರ್ಮೂಲನೆಯೇ ಶರಣರ ನಿಜವಾದ ಆಶಯಗಳಾಗಿದ್ದವು. ಇಂತಹ ಸೂಕ್ಷ್ಮ ವೈಚಾರಿಕ ವಸ್ತುವುಳ್ಳ ನಾಟಕವನ್ನು ಕಲಬುರಗಿ ರಂಗಾಯಣ ಕೈಗೆತ್ತಿಕೊಂಡು ಪ್ರದರ್ಶನ ಮಾಡಿದ್ದು ಅಭಿನಂದನೀಯ’ ಎಂದು ಹೇಳಿದರು.</p>.<p>ದಲಿತ ಮಾದಿಗ ಸಮನ್ವಯ ಸಮಿತಿ (ಡಿಎಂಎಸ್ಎಸ್) ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಾರಫೈಲ್, ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಮಾತನಾಡಿದರು.</p>.<p>ಸೇಡಂನ ಗಣಪತರಾವ ಚಿಮ್ಮನಚೋಡಕರ್, ರಾಜಕುಮಾರ ಹೊಸಮನಿ, ದಿಗಂಬರ ತ್ರಿಮೂರ್ತಿ, ಅರುಂಧತಿ ನಾಗಮೂರ್ತಿ, ಶ್ರೀಮಂತ ಭಂಡಾರಿ, ಮಲ್ಲಿಕಾರ್ಜುನ ದಿನ್ನಿ, ಸುಭಾಷ ಕಾಂಬಳೆ, ಅಮೃತ ಕೊರಳ್ಳಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>