<p><strong>ಕಲಬುರಗಿ</strong>: ಬಿ.ಇಡಿ ಪದವಿ ಮುಗಿಸಿ ಉತ್ತಮ ಶಿಕ್ಷಕರಾಗಬೇಕು ಎಂಬ ಕನಸು ಹೊತ್ತಿದ್ದ ಅಭ್ಯರ್ಥಿಗಳಿಗೆ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿಧಿಸುತ್ತಿರುವ ‘ಹೆಚ್ಚುವರಿ ಶುಲ್ಕ’ವು ಬರೆ ಎಳೆಯುತ್ತಿದೆ.</p>.<p>ಸರ್ಕಾರಿ ಕೋಟಾದಡಿ ಸೀಟು ಲಭಿಸಿದ್ದರೂ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪಡೆಯಲು ಬಂದ ಅಭ್ಯರ್ಥಿಯಿಂದ ನಿಗದಿತ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ₹25,000ರಿಂದ ₹ 35,000 ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಹಣ ಕಟ್ಟಲಾಗದ ಕೆಲವು ಅಭ್ಯರ್ಥಿಗಳು, ತಮಗೆ ಹಂಚಿಕೆಯಾಗಿರುವ ಬಿ.ಇಡಿ ಸೀಟನ್ನು ರದ್ದುಗೊಳಿಸಿ, ಕಟ್ಟಿರುವ ಪ್ರವೇಶ ಶುಲ್ಕವನ್ನು ವಾಪಸ್ ಕೊಡಿ ಎಂದು ಡಯಟ್ಗೆ ಪತ್ರ ಬರೆದಿದ್ದಾರೆ. ‘ಪ್ರಜಾವಾಣಿ’ಗೆ ಈ ಪತ್ರಗಳು ಲಭಿಸಿದೆ.</p>.<p>ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ಕಾಲೇಜಿಗೆ ₹ 5,125, ಅನುದಾನಿತ ಕಾಲೇಜಿಗೆ ₹6,175 ಹಾಗೂ ಖಾಸಗಿ (ಅನುದಾನ ರಹಿತ) ಕಾಲೇಜಿಗೆ ₹ 10,175 ಶುಲ್ಕ ಪಾವತಿಸಬೇಕು. ಆದರೆ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ಅಭ್ಯರ್ಥಿಗಳಿಂದ ಪ್ರತಿ ಸೆಮಿಸ್ಟರ್ಗೆ ಕಾಲೇಜು ಅಭಿವೃದ್ಧಿ, ಪ್ರವಾಸ, ನೋಂದಣಿ ಶುಲ್ಕ ಸೇರಿದಂತೆ ₹ 25,000ರಿಂದ ₹35,000ವರೆಗೆ ಹಣ ಕೇಳುತ್ತಿವೆ. ಜೊತೆಗೆ ವಿಶ್ವವಿದ್ಯಾಲಯಕ್ಕೆ ತಾವು ಕಟ್ಟಬೇಕಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಭಿವೃದ್ಧಿ ವ್ಯವಸ್ಥೆ(ಯುಯುಸಿಎಂಎಸ್) ನಿರ್ವಹಣೆಯ ₹1,000 ಶುಲ್ಕದ ಬದಲಿಗೆ, ಅಭ್ಯರ್ಥಿಗಳಿಂದ ₹ 10,000 ಕಟ್ಟಿಸಿಕೊಳ್ಳುತ್ತಿವೆ.</p>.<p>ಇವೆಲ್ಲವೂ ಸೇರಿದರೆ ಸರ್ಕಾರಿ ಕೋಟಾದಡಿ ಸೀಟು ಸಿಕ್ಕರೂ ಒಬ್ಬ ಅಭ್ಯರ್ಥಿ ಒಂದು ಸೆಮಿಸ್ಟರ್ಗೆ ಸುಮಾರು ₹55,000ರಿಂದ ₹65,000ವರೆಗೆ ತಕ್ಷಣ ಕಾಲೇಜಿಗೆ ಕಟ್ಟಬೇಕಾಗಿದೆ. ನಾಲ್ಕು ಸೆಮಿಸ್ಟರ್ಗಳಿಗೆ ₹1.5 ಲಕ್ಷದಿಂದ ₹ 2 ಲಕ್ಷದವರೆಗೆ ಕಟ್ಟಬೇಕಾಗಿರುವುದರಿಂದ ತಮಗೆ ಪ್ರವೇಶವೇ ಬೇಡ ಎಂದು ಕೆಲವು ಅಭ್ಯರ್ಥಿಗಳು ಡಯಟ್ಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.</p>.<p>ಮೆರಿಟ್ ಲಿಸ್ಟ್ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲಿಸಿ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಬಳಿಕ ತಾವು ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯಬೇಕು. ಒಂದು ವೇಳೆ ಅಭ್ಯರ್ಥಿಯು ಕಾಲೇಜು ಬದಲಾಯಿಸಿಕೊಳ್ಳಬೇಕಾದರೆ, 2ನೇ ಸುತ್ತಿನ ಮೆರಿಟ್ ಲಿಸ್ಟ್ ಬಿಡುಗಡೆ ಆಗುವವರೆಗೂ ಕಾಯಬೇಕು. ಆ ನಂತರ ಕಾಲೇಜನ್ನು ಬದಲಿಸಿಕೊಳ್ಳಬೇಕು. ಹೀಗೆ ಬದಲಿಸಿಕೊಂಡರೆ ಹೆಚ್ಚುವರಿಯಾಗಿ ಪಾವತಿಸಿದ ಹಣವೂ ವಾಪಸ್ ಬರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವ ಮುನ್ನವೇ ತಮಗೆ ಹಂಚಿಕೆಯಾಗಿದ್ದ ಸೀಟನ್ನು ರದ್ದುಗೊಳಿಸಬೇಕು ಎಂದು ಡಯಟ್ಗೆ ಪತ್ರ ಬರೆಯುತ್ತಿದ್ದಾರೆ.</p>.<div><blockquote>ಸರ್ಕಾರಿ ಕೋಟಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು. ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು</blockquote><span class="attribution">ಬಿ.ಎಂ. ಪಾಟೀಲ, ಹಂಗಾಮಿ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಬಿ.ಇಡಿ ಪದವಿ ಮುಗಿಸಿ ಉತ್ತಮ ಶಿಕ್ಷಕರಾಗಬೇಕು ಎಂಬ ಕನಸು ಹೊತ್ತಿದ್ದ ಅಭ್ಯರ್ಥಿಗಳಿಗೆ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿಧಿಸುತ್ತಿರುವ ‘ಹೆಚ್ಚುವರಿ ಶುಲ್ಕ’ವು ಬರೆ ಎಳೆಯುತ್ತಿದೆ.</p>.<p>ಸರ್ಕಾರಿ ಕೋಟಾದಡಿ ಸೀಟು ಲಭಿಸಿದ್ದರೂ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪಡೆಯಲು ಬಂದ ಅಭ್ಯರ್ಥಿಯಿಂದ ನಿಗದಿತ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ₹25,000ರಿಂದ ₹ 35,000 ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಹಣ ಕಟ್ಟಲಾಗದ ಕೆಲವು ಅಭ್ಯರ್ಥಿಗಳು, ತಮಗೆ ಹಂಚಿಕೆಯಾಗಿರುವ ಬಿ.ಇಡಿ ಸೀಟನ್ನು ರದ್ದುಗೊಳಿಸಿ, ಕಟ್ಟಿರುವ ಪ್ರವೇಶ ಶುಲ್ಕವನ್ನು ವಾಪಸ್ ಕೊಡಿ ಎಂದು ಡಯಟ್ಗೆ ಪತ್ರ ಬರೆದಿದ್ದಾರೆ. ‘ಪ್ರಜಾವಾಣಿ’ಗೆ ಈ ಪತ್ರಗಳು ಲಭಿಸಿದೆ.</p>.<p>ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ಕಾಲೇಜಿಗೆ ₹ 5,125, ಅನುದಾನಿತ ಕಾಲೇಜಿಗೆ ₹6,175 ಹಾಗೂ ಖಾಸಗಿ (ಅನುದಾನ ರಹಿತ) ಕಾಲೇಜಿಗೆ ₹ 10,175 ಶುಲ್ಕ ಪಾವತಿಸಬೇಕು. ಆದರೆ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ಅಭ್ಯರ್ಥಿಗಳಿಂದ ಪ್ರತಿ ಸೆಮಿಸ್ಟರ್ಗೆ ಕಾಲೇಜು ಅಭಿವೃದ್ಧಿ, ಪ್ರವಾಸ, ನೋಂದಣಿ ಶುಲ್ಕ ಸೇರಿದಂತೆ ₹ 25,000ರಿಂದ ₹35,000ವರೆಗೆ ಹಣ ಕೇಳುತ್ತಿವೆ. ಜೊತೆಗೆ ವಿಶ್ವವಿದ್ಯಾಲಯಕ್ಕೆ ತಾವು ಕಟ್ಟಬೇಕಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಭಿವೃದ್ಧಿ ವ್ಯವಸ್ಥೆ(ಯುಯುಸಿಎಂಎಸ್) ನಿರ್ವಹಣೆಯ ₹1,000 ಶುಲ್ಕದ ಬದಲಿಗೆ, ಅಭ್ಯರ್ಥಿಗಳಿಂದ ₹ 10,000 ಕಟ್ಟಿಸಿಕೊಳ್ಳುತ್ತಿವೆ.</p>.<p>ಇವೆಲ್ಲವೂ ಸೇರಿದರೆ ಸರ್ಕಾರಿ ಕೋಟಾದಡಿ ಸೀಟು ಸಿಕ್ಕರೂ ಒಬ್ಬ ಅಭ್ಯರ್ಥಿ ಒಂದು ಸೆಮಿಸ್ಟರ್ಗೆ ಸುಮಾರು ₹55,000ರಿಂದ ₹65,000ವರೆಗೆ ತಕ್ಷಣ ಕಾಲೇಜಿಗೆ ಕಟ್ಟಬೇಕಾಗಿದೆ. ನಾಲ್ಕು ಸೆಮಿಸ್ಟರ್ಗಳಿಗೆ ₹1.5 ಲಕ್ಷದಿಂದ ₹ 2 ಲಕ್ಷದವರೆಗೆ ಕಟ್ಟಬೇಕಾಗಿರುವುದರಿಂದ ತಮಗೆ ಪ್ರವೇಶವೇ ಬೇಡ ಎಂದು ಕೆಲವು ಅಭ್ಯರ್ಥಿಗಳು ಡಯಟ್ಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.</p>.<p>ಮೆರಿಟ್ ಲಿಸ್ಟ್ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲಿಸಿ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಬಳಿಕ ತಾವು ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯಬೇಕು. ಒಂದು ವೇಳೆ ಅಭ್ಯರ್ಥಿಯು ಕಾಲೇಜು ಬದಲಾಯಿಸಿಕೊಳ್ಳಬೇಕಾದರೆ, 2ನೇ ಸುತ್ತಿನ ಮೆರಿಟ್ ಲಿಸ್ಟ್ ಬಿಡುಗಡೆ ಆಗುವವರೆಗೂ ಕಾಯಬೇಕು. ಆ ನಂತರ ಕಾಲೇಜನ್ನು ಬದಲಿಸಿಕೊಳ್ಳಬೇಕು. ಹೀಗೆ ಬದಲಿಸಿಕೊಂಡರೆ ಹೆಚ್ಚುವರಿಯಾಗಿ ಪಾವತಿಸಿದ ಹಣವೂ ವಾಪಸ್ ಬರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವ ಮುನ್ನವೇ ತಮಗೆ ಹಂಚಿಕೆಯಾಗಿದ್ದ ಸೀಟನ್ನು ರದ್ದುಗೊಳಿಸಬೇಕು ಎಂದು ಡಯಟ್ಗೆ ಪತ್ರ ಬರೆಯುತ್ತಿದ್ದಾರೆ.</p>.<div><blockquote>ಸರ್ಕಾರಿ ಕೋಟಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು. ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು</blockquote><span class="attribution">ಬಿ.ಎಂ. ಪಾಟೀಲ, ಹಂಗಾಮಿ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>