ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಘದ ಅಧ್ಯಕ್ಷ ಬೀರೇಂದ್ರ ಕೇಶವ ಹಾಗೂ ಯಾದಗಿರಿ ಜಿಲ್ಲಾ ಅಧ್ಯಕ್ಷ ದುಂಡು ಚವ್ಹಾಣ್, ‘ಆಯುಷ್ಮಾನ್ ಭಾರತ ಎಲ್ಲರಿಗೂ ಆರೋಗ್ಯ ಆಶ್ರಯದ ಮೇರೆಗೆ ಹಳ್ಳಿಗಳಿಂದ ಕೂಡಿದ ನಮ್ಮ ದೇಶಕ್ಕೆ ಹಳ್ಳಿಯ ಜನರಿಗೆ ಆರೊಗ್ಯ ಸೌಲಭ್ಯವನ್ನು ಕೊಡಬೇಕೆಂದು ಪ್ರಧಾನ ಮಂತ್ರಿಗಳ ಕನಸಿನ ಕೂಸಾದ ಆಯುಷ್ಮಾನ್ ಭಾರತ ಸಿ.ಪಿ.ಎಚ್.ಸಿ, ಯು.ಎಚ್.ಸಿ ಅಡಿಯಲ್ಲಿ ರಾಜ್ಯದಾದ್ಯಂತ ಬಿ.ಎಸ್ಸಿ ನರ್ಸಿಂಗ್, ಎಂ.ಎಸ್ಸಿ. ನರ್ಸಿಂಗ್ ಪದವೀಧರರನ್ನು ಇಗ್ನೊ ವಿಶ್ವವಿದ್ಯಾಲಯ ಮಾನ್ಯತೆ ಹೊಂದಿರುವ 6 ತಿಂಗಳ ಬ್ರಿಡ್ಜ್ ಕೋರ್ಸ ಮುಗಿಸಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಆರೊಗ್ಯ ಅಧಿಕಾರಿಗಳಾಗಿ ನೇಮಕಗೊಂಡಿರುತ್ತೇವೆ. ಆದರೆ ನಮ್ಮ ಪದನಾಮವನ್ನು ಯಾವುದೇ ಸೂಚನೆಯಿಲ್ಲದೆ ಮಧ್ಯಮ ಹಂತದ ಆರೊಗ್ಯ ಪೂರೈಕೆದಾರರೆಂದು ಎಲ್ಲಾ ಕಚೇರಿ ಪತ್ರಗಳಲ್ಲಿ ಉಲ್ಲೆಖಿಸಲಾಗುತ್ತಿದ್ದು ಇದರಿಂದ ಗೊಂದಲಕ್ಕೊಳಗಾಗಿದ್ದೆವೆ’ ಎಂದರು.