ಚಿಂಚೋಳಿ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ ಗುಡುಗು ಸಹಿತ ಮಳೆಯಾಗಿದೆ.
ತಾಲ್ಲೂಕಿನ ಮರಪಳ್ಳಿ ಗಾರಂಪಳ್ಳಿ ಸೀಮೆಯಲ್ಲಿ ಸಿಡಿಲು ಬಡಿದು ಮೂರು ಮೇಕೆಗಳು ಸಾವನ್ನಪ್ಪಿವೆ. ಜತೆಗೆ ಕುರಿಗಾಹಿ ಪುಟ್ಟಪ್ಪ ಶಿವಪ್ಪ ಎಂಬುವವರು ಸಿಡಿಲಾಘಾತದಿಂದ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಚಿಮ್ಮಾಈದಲಾಯಿ, ದಸ್ತಾಪುರ, ಗೌಡನಹಳ್ಳಿ, ಗಾರಂಪಳ್ಳಿ, ನೀಮಾ ಹೊಸಳ್ಳಿ, ಅಣವಾರ, ಮೊದಲಾದ ಕಡೆ ಬಿರುಸು ಮಳೆಯಾದರೆ, ಚಿಂಚೋಳಿ, ಪೋಲಕಪಳ್ಳಿ, ಪೋತಂಗಲ್, ರುಸ್ತಂಪುರ, ಕನಕಪುರ ಮೊದಲಾದ ಕಡೆ ಚದುರಿದ ಮಳೆಯಾಗಿದೆ.