ಕಲಬುರ್ಗಿ: ಜಿಲ್ಲೆಯಲ್ಲಿ ಸೋಮವಾರ ಎಂಎಸ್ಐಎಲ್ ಹಾಗೂ ವೈನ್ಶಾಪ್ ಹಾಗೂ ಎಂಆರ್ಪಿ ಔಟ್ಲೆಟ್ಗಳು (ಸಿಎಲ್ 2, ಸಿಎಲ್ 11 ಸಿ) ಆರಂಭವಾಗಿಲ್ಲ.
ಜಿಲ್ಲಾಧಿಕಾರಿ ಶರತ್ ಬಿ. ಅವರು ಇಂದು (ಮೇ 4) ಬೆಳಿಗ್ಗೆ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಆ ಬಳಿಕವಷ್ಟೇ ಮದ್ಯದಂಗಡಿ ತೆರೆಯಲು ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 164 ವೈನ್ ಶಾಪ್ಗಳಿದ್ದು, ಜನದಟ್ಟಣಿ ತಡೆಯಲು ಅಂಗಡಿಗಳ ಮುಂದೆ ಭಾನುವಾರವೇ ಬ್ಯಾರಿಕೇಡ್ ಹಾಗೂ ಆರು ಅಡಿ ಅಂತರದಲ್ಲಿ ಬಾಕ್ಸ್ ಗಳನ್ನು ಹಾಕಲಾಗಿದೆ.