<p><strong>ಚಿಂಚೋಳಿ</strong>: ಮಣ್ಣಿನ ಮಡಕೆಗಳು ಬಡವರ ಫ್ರಿಜ್ ಎಂದೇ ಜನಪ್ರಿಯ. ಬೇಸಿಗೆ ಬಂದರೆ ಸಾಕು ಕುಂಬಾರರಿಗೆ ಕೈತುಂಬಾ ಕೆಲಸ. ಆದರೆ ಪ್ರಸಕ್ತ ವರ್ಷ ಕುಂಬಾರರ ಬದುಕನ್ನು ಕೊರೊನಾ ಮಹಾಮಾರಿ ದುಸ್ತರಗೊಳಿಸಿದೆ.</p>.<p>ತೊಗರಿ, ಜೋಳದ ಸುಗ್ಗಿಯ ನಂತರ ಕತ್ತೆಗಳ ಮೇಲೆ ಹಳ್ಳಿ ಹಳ್ಳಿಗಳಿಗೆ ತೆರಳಿ ಮಣ್ಣಿನ ಮಡಕೆ ಮಾರಾಟ ಮಾಡುವ ಕುಂಬಾರರಿಗೆ ಪ್ರಸಕ್ತ ವರ್ಷ ಕೆಲಸವೇ ಇಲ್ಲದಂತಾಗಿದೆ. ಕೊರೊನಾ ಹಾವಳಿಯಿಂದ ಕುಂಬಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಕುಂಬಾರರು ವರ್ಷ ಪೂರ್ತಿ ತಯಾರಿಸಿದ ಮಡಕೆಗಳನ್ನು ಬೇಸಿಗೆಯಲ್ಲಿ ಮಾರಾಟ ಮಾಡುವುದು ರೂಢಿ. ಪ್ರಸಕ್ತ ವರ್ಷ ಲಾಕ್ಡೌನಿಂದಾಗಿ ಮಾರಾಟ ಮಾಡಲಾಗದೆ ಪರಿತಪಿಸುತ್ತಿದ್ದಾರೆ.</p>.<p>ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕ್ಷೌರಿಕರು, ಅಟೊರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮತ್ತು ನೇಕಾರರಿಗೆ, ಕಟ್ಟಡ ಕಾರ್ಮಿಕರಿಗೆ ನೆರವು ಪ್ರಕಟಿಸಿ ₹1610 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಇದರಲ್ಲಿ ಕುಂಬಾರರನ್ನು ಪರಿಗಣಿಸಿಲ್ಲ.</p>.<p>‘ತೊಂದರೆಗೆ ಸಿಲುಕಿದ ಬಡವರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕುಂಬಾರರನ್ನು ಕಡೆಗಣಿಸಿದ್ದು ದುರದೃಷ್ಟಕರ’ ಎಂದು ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಕುಂಬಾರ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ಮುಖ್ಯಮಂತ್ರಿಗಳು ರಾಜ್ಯದಲ್ಲಿ ಲಕ್ಷಾಂತರ ಕುಂಬಾರರು ಸಂಕಷ್ಟ ಸಿಲುಕಿದ್ದರೂ ಅವರ ಬಗ್ಗೆ ಉದಾಸೀನ ಮಾಡಿರುವುದು ನೋವಿನ ಸಂಗತಿ. ಕುಂಬಾರರಿಗೂ ನೆರವು ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<p>‘ಮುಖ್ಯಮಂತ್ರಿಗಳು ತಕ್ಷಣ ಕುಂಬಾರರಿಗೆ ನೆರವು ಘೋಷಿಸಿ ಬಡವರ ಪರ ಎಂಬ ಬದ್ಧತೆಯನ್ನು ಉಳಿಸಿಕೊಳ್ಳಬೇಕು’ ಎಂದು ಕುಂಬಾರ ಸಮಾಜದ ಮುಖಂಡ ತಾ.ಪಂ. ಮಾಜಿ ಸದಸ್ಯ ನರಶಿಮ್ಲು ಕುಂಬಾರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಂಚೋಳಿ</strong>: ಮಣ್ಣಿನ ಮಡಕೆಗಳು ಬಡವರ ಫ್ರಿಜ್ ಎಂದೇ ಜನಪ್ರಿಯ. ಬೇಸಿಗೆ ಬಂದರೆ ಸಾಕು ಕುಂಬಾರರಿಗೆ ಕೈತುಂಬಾ ಕೆಲಸ. ಆದರೆ ಪ್ರಸಕ್ತ ವರ್ಷ ಕುಂಬಾರರ ಬದುಕನ್ನು ಕೊರೊನಾ ಮಹಾಮಾರಿ ದುಸ್ತರಗೊಳಿಸಿದೆ.</p>.<p>ತೊಗರಿ, ಜೋಳದ ಸುಗ್ಗಿಯ ನಂತರ ಕತ್ತೆಗಳ ಮೇಲೆ ಹಳ್ಳಿ ಹಳ್ಳಿಗಳಿಗೆ ತೆರಳಿ ಮಣ್ಣಿನ ಮಡಕೆ ಮಾರಾಟ ಮಾಡುವ ಕುಂಬಾರರಿಗೆ ಪ್ರಸಕ್ತ ವರ್ಷ ಕೆಲಸವೇ ಇಲ್ಲದಂತಾಗಿದೆ. ಕೊರೊನಾ ಹಾವಳಿಯಿಂದ ಕುಂಬಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಕುಂಬಾರರು ವರ್ಷ ಪೂರ್ತಿ ತಯಾರಿಸಿದ ಮಡಕೆಗಳನ್ನು ಬೇಸಿಗೆಯಲ್ಲಿ ಮಾರಾಟ ಮಾಡುವುದು ರೂಢಿ. ಪ್ರಸಕ್ತ ವರ್ಷ ಲಾಕ್ಡೌನಿಂದಾಗಿ ಮಾರಾಟ ಮಾಡಲಾಗದೆ ಪರಿತಪಿಸುತ್ತಿದ್ದಾರೆ.</p>.<p>ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕ್ಷೌರಿಕರು, ಅಟೊರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಮತ್ತು ನೇಕಾರರಿಗೆ, ಕಟ್ಟಡ ಕಾರ್ಮಿಕರಿಗೆ ನೆರವು ಪ್ರಕಟಿಸಿ ₹1610 ಕೋಟಿ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಇದರಲ್ಲಿ ಕುಂಬಾರರನ್ನು ಪರಿಗಣಿಸಿಲ್ಲ.</p>.<p>‘ತೊಂದರೆಗೆ ಸಿಲುಕಿದ ಬಡವರ ನೆರವಿಗೆ ಧಾವಿಸಬೇಕಿದ್ದ ಸರ್ಕಾರ ಕುಂಬಾರರನ್ನು ಕಡೆಗಣಿಸಿದ್ದು ದುರದೃಷ್ಟಕರ’ ಎಂದು ಜಿಲ್ಲಾ ಕುಂಬಾರ ಸಮಾಜದ ಅಧ್ಯಕ್ಷ ಶಿವಶರಣಪ್ಪ ಕುಂಬಾರ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ಮುಖ್ಯಮಂತ್ರಿಗಳು ರಾಜ್ಯದಲ್ಲಿ ಲಕ್ಷಾಂತರ ಕುಂಬಾರರು ಸಂಕಷ್ಟ ಸಿಲುಕಿದ್ದರೂ ಅವರ ಬಗ್ಗೆ ಉದಾಸೀನ ಮಾಡಿರುವುದು ನೋವಿನ ಸಂಗತಿ. ಕುಂಬಾರರಿಗೂ ನೆರವು ಘೋಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.</p>.<p>‘ಮುಖ್ಯಮಂತ್ರಿಗಳು ತಕ್ಷಣ ಕುಂಬಾರರಿಗೆ ನೆರವು ಘೋಷಿಸಿ ಬಡವರ ಪರ ಎಂಬ ಬದ್ಧತೆಯನ್ನು ಉಳಿಸಿಕೊಳ್ಳಬೇಕು’ ಎಂದು ಕುಂಬಾರ ಸಮಾಜದ ಮುಖಂಡ ತಾ.ಪಂ. ಮಾಜಿ ಸದಸ್ಯ ನರಶಿಮ್ಲು ಕುಂಬಾರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>