ಮಂಗಳವಾರ ‘ಪ್ರಜಾವಾಣಿ’ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಮಾಹಿತಿ ನೀಡಿದ ಮಾಗಣಗೇರಿ ಶ್ರೀಮಠದ ಡಾ.ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳು, ಜಾತ್ರಾ ಮಹೋತ್ಸವದ ಅಂಗವಾಗಿಡಿಸೆಂಬರ್ 6ರಿಂದಲೇ ನವಲಗುಂದ ನಾಗಲಿಂಗ ಶಿವಯೋಗಿಗಳ ಪುರಾಣ ಆರಂಭವಾಗಿದೆ. ಗದಗ ವೀರೇಶ್ವರ ಪುಣ್ಯಾಶ್ರಮದ ಸಾವಿತ್ರೆಮ್ಮ ಹಾಗೂ ಜೇರಟಗಿಯ ಮಡಿವಾಳಯ್ಯ ಶಾಸ್ತ್ರಿಗಳು ನಡೆಸಿಕೊಡುವರು. ಸಿದ್ಧಾರೂಢ ನಾಗರಹಳ್ಳಿ ಸಂಗೀತ ನೀಡಲಿದ್ದು, ರುದ್ರುಸ್ವಾಮಿ ಮೇಲಿನಮಠ ಅವರು ತಬಲಾಸೇವೆ ನೀಡುವರು. ಇದೇ 12ರಂದು ಬಾಗನಗೌಡ ಪಾಟೀಲ ಕವಡಿಮಟ್ಟಿ ಅವರಿಂದ ಸಿಂಹಾಸನ ಪೂಜೆ ನೆರವೇರುವುದು. 19ರಂದು ತೋಟೇಂದ್ರ ಶಿವಾಚಾರ್ಯರ ಗದ್ದುಗೆಗೆ ಸಂಜೆ ದೀಪೋತ್ಸವ ನಡೆಯಲಿದೆ. ಅದೇ ದಿನ ಉಚಿತ ನೇತ್ರ ತಪಾಸಣೆ, ಎಲುಬು, ಕೀಲು, ನರಗಳ ತಜ್ಞರಿಂದ ಆರೋಗ್ಯ ಶಿಬಿರ ನಡೆಯಲಿದೆ’ ಎಂದರು.