ಕಲಬುರಗಿ: ‘ಒಳ್ಳೆಯದಾದರೆ ನಂದು, ಕೆಟ್ಟದ್ದಾದರೆ ನಿಂದು’ ಎನ್ನುವ ಕೆಲ ನಾಯಕರು ಕಾಂಗ್ರೆಸ್ನಲ್ಲಿದ್ದಾರೆ. ಪಕ್ಷದ ಬಗ್ಗೆ ಅಭಿಮಾನ ಇರುವ ಯಾರೂ ಈ ರೀತಿ ಮಾತನಾಡುವುದಿಲ್ಲ. ಕೆಲವರಿಗೆ ಅಧಿಕಾರ ಬೇಕು. ಆದರೆ, ಅದನ್ನು ಪಡೆಯುವಷ್ಟು ಶಾಸಕರನ್ನು ಗೆಲ್ಲಿಸುವುದಿಲ್ಲ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.