ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಎಸ್ಎಂಎಫ್ನಲ್ಲಿ ನೊಂದಣಿಯಾದರೂ ವೇತನ ನಿಡದೇ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಅನುಕಂಪದ ನೇಮಕಾತಿ ಮಾಡಿಕೊಳ್ಳದೆ, ಬಾಕಿ ಇರುವ ಹಳೆಯ 10–18 ತಿಂಗಳ ವೇತನ ನೀಡಲು ತಮ್ಮ ಆದೇಶ ಇದ್ದರೂ 15ನೇ ಹಣಕಾಸಿನಲ್ಲಿ ಯೋಜನಾ ವರದಿ ತಯಾರು ಮಾಡುವಾಗ ಸಿಬ್ಬಂದಿ ವೇತನಕ್ಕೆ ಅನುದಾನ ಉಳಿಸದೇ ಸಂಪೂರ್ಣವಾಗಿ ಖರ್ಚು ಮಾಡುವ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.