<p><strong>ಆಳಂದ</strong>: ತಾಲ್ಲೂಕಿನ ಕಿಣಿಸುಲ್ತಾನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಕೆ ಮಾಡಲಾಗಿದೆ ಎಂದು ಆಪಾದಿಸಿ ಮಕ್ಕಳ ಪೋಷಕರು, ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.</p>.<p>ಗ್ರಾಮದ ಪೋಷಕರು ಶಾಲೆಯ ಅಡುಗೆ ಕೋಣೆಗೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಬಿಸಿಯೂಟದಲ್ಲಿ ಬಳಸಿದ ಆಲುಗಡ್ಡೆ, ಟೊಮೆಟೊ ಸೇರಿದಂತೆ ಇತರೆ ತರಕಾರಿ ಕೊಳೆತಿರುವುದು ಗಮನಕ್ಕೆ ಬಂತು ಎಂದು ಸ್ಥಳೀಯರು ಹೇಳಿದ್ದಾರೆ.</p>.<p>ಅಡುಗೆ ಸಹಾಯಕರು ಹಾಗೂ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಪಾಲಕರು, ‘ಕೊಳೆತ ತರಕಾರಿ, ಅಶುದ್ಧ ನೀರಿನಿಂದ ಮಕ್ಕಳ ಆರೋಗ್ಯ ಹದಗೆಟ್ಟರೆ ಯಾರೂ ಜವಾಬ್ದಾರರು? ಸರ್ಕಾರದಿಂದ ಬಿಸಿಯೂಟ, ತರಕಾರಿ ಖರೀದಿಗೆ ಹಣ ಬರುವದಿಲ್ಲವಾ? ನಿತ್ಯ ತಾಜಾ ತರಕಾರಿಗಳು ಏಕೆ ಬಳಕೆ ಮಾಡುವದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಬಿಇಒ ಸಿ.ಜಿ.ಹಳ್ಳದ ಅವರಿಗೆ ಮುಖ್ಯ ಶಿಕ್ಷಕಿ ಹಾಗೂ ಅಡುಗೆ ಸಹಾಯಕರ ವಿರುದ್ಧ ಕ್ರಮ ಜರುಗಿಸುವಂತೆ ಪಾಲಕರು ದೂರು ಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ</strong>: ತಾಲ್ಲೂಕಿನ ಕಿಣಿಸುಲ್ತಾನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಕೆ ಮಾಡಲಾಗಿದೆ ಎಂದು ಆಪಾದಿಸಿ ಮಕ್ಕಳ ಪೋಷಕರು, ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.</p>.<p>ಗ್ರಾಮದ ಪೋಷಕರು ಶಾಲೆಯ ಅಡುಗೆ ಕೋಣೆಗೆ ಬಂದು ಪರಿಶೀಲನೆ ನಡೆಸಿದರು. ಈ ವೇಳೆ ಬಿಸಿಯೂಟದಲ್ಲಿ ಬಳಸಿದ ಆಲುಗಡ್ಡೆ, ಟೊಮೆಟೊ ಸೇರಿದಂತೆ ಇತರೆ ತರಕಾರಿ ಕೊಳೆತಿರುವುದು ಗಮನಕ್ಕೆ ಬಂತು ಎಂದು ಸ್ಥಳೀಯರು ಹೇಳಿದ್ದಾರೆ.</p>.<p>ಅಡುಗೆ ಸಹಾಯಕರು ಹಾಗೂ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಪಾಲಕರು, ‘ಕೊಳೆತ ತರಕಾರಿ, ಅಶುದ್ಧ ನೀರಿನಿಂದ ಮಕ್ಕಳ ಆರೋಗ್ಯ ಹದಗೆಟ್ಟರೆ ಯಾರೂ ಜವಾಬ್ದಾರರು? ಸರ್ಕಾರದಿಂದ ಬಿಸಿಯೂಟ, ತರಕಾರಿ ಖರೀದಿಗೆ ಹಣ ಬರುವದಿಲ್ಲವಾ? ನಿತ್ಯ ತಾಜಾ ತರಕಾರಿಗಳು ಏಕೆ ಬಳಕೆ ಮಾಡುವದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.</p>.<p>ಬಿಇಒ ಸಿ.ಜಿ.ಹಳ್ಳದ ಅವರಿಗೆ ಮುಖ್ಯ ಶಿಕ್ಷಕಿ ಹಾಗೂ ಅಡುಗೆ ಸಹಾಯಕರ ವಿರುದ್ಧ ಕ್ರಮ ಜರುಗಿಸುವಂತೆ ಪಾಲಕರು ದೂರು ಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>