<p><strong>ಕಲಬುರ್ಗಿ: </strong>ಮಹಾರಾಷ್ಟ್ರದಿಂದ ಮರಳಿದ 36 ಹಾಗೂ ದುಬೈನಿಂದ ಬಂದ ಇಬ್ಬರು ಸೇರಿದಂತೆ ಒಟ್ಟು 39 ಮಂದಿಗೆ ಭಾನುವಾರ ಕೋವಿಡ್–19 ದೃಢಪಟ್ಟಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂದು ಇನ್ನೂ ಪತ್ತೆಯಾಗಿಲ್ಲ.</p>.<p>ಕಲಬುರ್ಗಿ ನಗರದಲ್ಲಿ 2, ತಾಲ್ಲೂಕಿನಲ್ಲಿ 5, ಶಹಾಬಾದ್ 2, ಕಾಳಗಿ 12, ಚಿತ್ತಾಪುರ 13, ಸೇಡಂ 1, ಕಮಲಾಪುರ 2 ಹಾಗೂ ಚಿಂಚೋಳಿ 2 ಪ್ರಕರಣ ಪತ್ತೆಯಾಗಿವೆ.</p>.<p>ಇದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 660ಕ್ಕೆ ಏರಿದೆ. ಏಳು ಮಂದಿ ಮೃತಪಟ್ಟಿದ್ದು, 166 ಜನ ಗುಣಮುಖರಾಗಿದ್ದಾರೆ. 487 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p class="Briefhead"><strong>2 ವರ್ಷದ ಮಗುವಿಗೆ ಕೋವಿಡ್</strong></p>.<p>ವಾಡಿ: ಲಾಡ್ಲಾಪುರ ಸಮೀಪದ ಚಾಜುನಾಯಕ ತಾಂಡಾದ 2 ವರ್ಷದ ಹೆಣ್ಣು ಮಗುವಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮುಂಬೈಯಿಂದ ಪಾಲಕರೊಂದಿಗೆ ಬಂದಿದ್ದ ಮಗುವನ್ನು, ಕ್ವಾರಂಟೈನ್ ಅವಧಿ ಮುಗಿಸಿದ ಮೇಲೆ ತಾಂಡಾಕ್ಕೆ ಕಳುಹಿಸಲಾಗಿತ್ತು.</p>.<p>ಇನ್ನೊಂದೆಡೆ, ಕೊಲ್ಲೂರು ಸಮೀಪದ ಬನ್ನೆಟ್ಟಿ ಗ್ರಾಮದಲ್ಲಿ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಪುಣೆಯಿಂದ ವಾಪಸ್ಸಾಗಿದ್ದ ಮಹಿಳೆ ಹೆಬ್ಬಾಳದಲ್ಲಿ ಕ್ವಾರಂಟೈನ್ ಮುಗಿಸಿ ಮೇ 28ರಂದು ಗ್ರಾಮಕ್ಕೆ ಮರಳಿದ್ದರು.</p>.<p>ಯಾಗಾಪೂರ ಗ್ರಾ.ಪಂ ವ್ಯಾಪ್ತಿಯ ಬದ್ದುನಾಯಕ ತಾಂಡಾದ 3 ವರ್ಷದ ಬಾಲಕನಿಗೆ ಶನಿವಾರ ಕೋವಿಡ್ ದೃಢಪಟ್ಟಿತ್ತು. ಮಗುವನ್ನು ಭಾನುವಾರ ಅಂಬುಲೆನ್ಸ್ ಮೂಲಕ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.</p>.<p class="Briefhead"><strong>ದುಬೈನಿಂದ ಬಂದ ಇಬ್ಬರಿಗೆ ಕೋವಿಡ್</strong></p>.<p>ಚಿಂಚೋಳಿ: ದುಬೈನಿಂದ ಬಂದು ಇಲ್ಲಿನ ಪೋಲಕಪಳ್ಳಿಯ ಆದರ್ಶ ವಿದ್ಯಾಲಯದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಹಾಗೂ ಅವರ 4 ವರ್ಷದ ಮಗುವಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಕ ಪಾಟೀಲ ತಿಳಿಸಿದ್ದಾರೆ.</p>.<p>ಕೊರೊನಾ ಆರಂಭದಿಂದ ಇಲ್ಲಿಯವರೆಗೆ ಅವಿಭಜಿತ ತಾಲ್ಲೂಕಿನಲ್ಲಿ ಕೊವಿಡ್-19 ಪೀಡಿತರ ಸಂಖ್ಯೆ 79ಕ್ಕೆ ಏರಿದೆ. ಆದರೆ ಕಾಳಗಿ ಮತ್ತು ಕಮಲಾಪುರ ತಾಲ್ಲೂಕಿಗೆ ಸೇರಿದ ಅವಿಭಜಿತ ಚಿಂಚೋಳಿ ತಾಲ್ಲೂಕಿನ ಹಳ್ಳಿಗಳನ್ನು ಹೊರತುಪಡಿಸಿದರೆ; ಕೊವಿಡ್ ಪೀಡಿತರ ಸಂಖ್ಯೆ 37 ಆಗಲಿದೆ ಎಂದರು.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇನ್ನೂ ನೆರೆಯ ತಾಲ್ಲೂಕಿಗೆ ಸೇರಿದ ಹಳ್ಳಿಗಳು ಚಿಂಚೋಳಿ ತಾಲ್ಲೂಕು ಆಡಳಿತದಲ್ಲಿಯೇ ಮುಂದುವರಿದಿವೆ. ಹೀಗಾಗಿ, ಅಂಕಿ ಸಂಖ್ಯೆ ಅವುಗಳು ಸೇರಿಯೇ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>3,000 ಜನರ ಗಂಟಲು ದ್ರವದ ಮಾದರಿ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿವರೆಗೆ 2,000ಕ್ಕೂ ಹೆಚ್ಚು ಜನರ ವರದಿ ಬಂದಿದ್ದು ಇನ್ನೂ ಒಂದು ಸಾವಿರ ಜನರ ವರದಿ ಪ್ರಯೋಗಾಲಯದಿಂದ ಬರಬೇಕಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರ್ಗಿ: </strong>ಮಹಾರಾಷ್ಟ್ರದಿಂದ ಮರಳಿದ 36 ಹಾಗೂ ದುಬೈನಿಂದ ಬಂದ ಇಬ್ಬರು ಸೇರಿದಂತೆ ಒಟ್ಟು 39 ಮಂದಿಗೆ ಭಾನುವಾರ ಕೋವಿಡ್–19 ದೃಢಪಟ್ಟಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂದು ಇನ್ನೂ ಪತ್ತೆಯಾಗಿಲ್ಲ.</p>.<p>ಕಲಬುರ್ಗಿ ನಗರದಲ್ಲಿ 2, ತಾಲ್ಲೂಕಿನಲ್ಲಿ 5, ಶಹಾಬಾದ್ 2, ಕಾಳಗಿ 12, ಚಿತ್ತಾಪುರ 13, ಸೇಡಂ 1, ಕಮಲಾಪುರ 2 ಹಾಗೂ ಚಿಂಚೋಳಿ 2 ಪ್ರಕರಣ ಪತ್ತೆಯಾಗಿವೆ.</p>.<p>ಇದರಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 660ಕ್ಕೆ ಏರಿದೆ. ಏಳು ಮಂದಿ ಮೃತಪಟ್ಟಿದ್ದು, 166 ಜನ ಗುಣಮುಖರಾಗಿದ್ದಾರೆ. 487 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p class="Briefhead"><strong>2 ವರ್ಷದ ಮಗುವಿಗೆ ಕೋವಿಡ್</strong></p>.<p>ವಾಡಿ: ಲಾಡ್ಲಾಪುರ ಸಮೀಪದ ಚಾಜುನಾಯಕ ತಾಂಡಾದ 2 ವರ್ಷದ ಹೆಣ್ಣು ಮಗುವಿನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಮುಂಬೈಯಿಂದ ಪಾಲಕರೊಂದಿಗೆ ಬಂದಿದ್ದ ಮಗುವನ್ನು, ಕ್ವಾರಂಟೈನ್ ಅವಧಿ ಮುಗಿಸಿದ ಮೇಲೆ ತಾಂಡಾಕ್ಕೆ ಕಳುಹಿಸಲಾಗಿತ್ತು.</p>.<p>ಇನ್ನೊಂದೆಡೆ, ಕೊಲ್ಲೂರು ಸಮೀಪದ ಬನ್ನೆಟ್ಟಿ ಗ್ರಾಮದಲ್ಲಿ 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಪುಣೆಯಿಂದ ವಾಪಸ್ಸಾಗಿದ್ದ ಮಹಿಳೆ ಹೆಬ್ಬಾಳದಲ್ಲಿ ಕ್ವಾರಂಟೈನ್ ಮುಗಿಸಿ ಮೇ 28ರಂದು ಗ್ರಾಮಕ್ಕೆ ಮರಳಿದ್ದರು.</p>.<p>ಯಾಗಾಪೂರ ಗ್ರಾ.ಪಂ ವ್ಯಾಪ್ತಿಯ ಬದ್ದುನಾಯಕ ತಾಂಡಾದ 3 ವರ್ಷದ ಬಾಲಕನಿಗೆ ಶನಿವಾರ ಕೋವಿಡ್ ದೃಢಪಟ್ಟಿತ್ತು. ಮಗುವನ್ನು ಭಾನುವಾರ ಅಂಬುಲೆನ್ಸ್ ಮೂಲಕ ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು.</p>.<p class="Briefhead"><strong>ದುಬೈನಿಂದ ಬಂದ ಇಬ್ಬರಿಗೆ ಕೋವಿಡ್</strong></p>.<p>ಚಿಂಚೋಳಿ: ದುಬೈನಿಂದ ಬಂದು ಇಲ್ಲಿನ ಪೋಲಕಪಳ್ಳಿಯ ಆದರ್ಶ ವಿದ್ಯಾಲಯದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಮಹಿಳೆ ಹಾಗೂ ಅವರ 4 ವರ್ಷದ ಮಗುವಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ದೀಪಕ ಪಾಟೀಲ ತಿಳಿಸಿದ್ದಾರೆ.</p>.<p>ಕೊರೊನಾ ಆರಂಭದಿಂದ ಇಲ್ಲಿಯವರೆಗೆ ಅವಿಭಜಿತ ತಾಲ್ಲೂಕಿನಲ್ಲಿ ಕೊವಿಡ್-19 ಪೀಡಿತರ ಸಂಖ್ಯೆ 79ಕ್ಕೆ ಏರಿದೆ. ಆದರೆ ಕಾಳಗಿ ಮತ್ತು ಕಮಲಾಪುರ ತಾಲ್ಲೂಕಿಗೆ ಸೇರಿದ ಅವಿಭಜಿತ ಚಿಂಚೋಳಿ ತಾಲ್ಲೂಕಿನ ಹಳ್ಳಿಗಳನ್ನು ಹೊರತುಪಡಿಸಿದರೆ; ಕೊವಿಡ್ ಪೀಡಿತರ ಸಂಖ್ಯೆ 37 ಆಗಲಿದೆ ಎಂದರು.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಇನ್ನೂ ನೆರೆಯ ತಾಲ್ಲೂಕಿಗೆ ಸೇರಿದ ಹಳ್ಳಿಗಳು ಚಿಂಚೋಳಿ ತಾಲ್ಲೂಕು ಆಡಳಿತದಲ್ಲಿಯೇ ಮುಂದುವರಿದಿವೆ. ಹೀಗಾಗಿ, ಅಂಕಿ ಸಂಖ್ಯೆ ಅವುಗಳು ಸೇರಿಯೇ ನೀಡಲಾಗುತ್ತಿದೆ ಎಂದು ತಿಳಿಸಿದರು.</p>.<p>3,000 ಜನರ ಗಂಟಲು ದ್ರವದ ಮಾದರಿ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಲ್ಲಿವರೆಗೆ 2,000ಕ್ಕೂ ಹೆಚ್ಚು ಜನರ ವರದಿ ಬಂದಿದ್ದು ಇನ್ನೂ ಒಂದು ಸಾವಿರ ಜನರ ವರದಿ ಪ್ರಯೋಗಾಲಯದಿಂದ ಬರಬೇಕಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>