ಸುಗಮ ಸಂಗೀತ ಗಾಯಕ ಅಂಬರೇಶ ಸಾಲಿಮಠ, ಮಹಾಂತೇಶ, ವೆಂಕಟೇಶ, ಕೇಶವ ಕಮ್ಮಾರ, ಮರಿಯಪ್ಪ ತಿಪ್ಪಲದಿನ್ನಿ ಅವರು ಸುಗಮ ಸಂಗೀತ, ಜಾನಪದ, ತತ್ವಪದ, ಭಜನಾಪದ, ಸಂಪ್ರದಾಯಿಕ ಹಾಡು, ಜೋಗುಳ ಪದ, ಭಾವಗೀತೆ ಸೇರಿದಂತೆ ವಿವಿಧ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು.
ನೆಹರೂ ಯುವ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್, ಜ್ಯೂಸ್ ವಿತರಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಶಂಕರಗೌಡ, ಮೌನೇಶ ನಾಯಕ, ಸಿರವಾರ ಬಸವೇಶ್ವರ ಕಾಲೇಜು ಪ್ರಾಚಾರ್ಯ ಧರ್ಮಣ್ಣ, ಉಪನ್ಯಾಸಕ ಹನುಮಂತ ಅತ್ತನೂರು, ನೆಹರೂ ಯುವ ಕೇಂದ್ರದ ಸಂಯೋಜಕ ಮುತ್ತಣ್ಣ ಅತ್ತನೂರು, ಸುರೇಶ್ ಪಾಟೀಲ, ಮುತ್ತನಗೌಡ, ಮಹಿಳೆಯರು, ಮಕ್ಕಳು ಇದ್ದರು.