ಈ ಕುರಿತು ಪ್ರತಿಕ್ರಿಯೆ ನೀಡಿದ ಸಮುದಾಯದ ಮುಖಂಡ ರಹೀಂ ಸಾಬ್ ಮುಲ್ಲಾ, ‘ಕಳೆದ ನಾಲ್ಕು ವರ್ಷಗಳಿಂದ ನಾವು ನಮ್ಮ ಹಿಂದೂ ಸಹೋದರರಿಗೆ ಮಜ್ಜಿಗೆ, ಪಾನಕ ವಿತರಿಸುತ್ತಿದ್ದೇವೆ. ನಮಗೆ ಧರ್ಮ ಮುಖ್ಯವಲ್ಲ. ಬಾಯಾರಿಕೆಯಿಂದ ಬಂದವರಿಗೆ ದಾಹ ನೀಗಿಸುವುದೇ ಮುಖ್ಯವಾಗುತ್ತದೆ. ಹೀಗಾಗಿ, ಯುವಕರ ತಂಡವನ್ನು ಕಟ್ಟಿಕೊಂಡಿದ್ದೇನೆ. ರಾಮನವಮಿ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಹೊರಟಿರುವವರಿಗೆ ಪಾನಕ ಕೊಡುತ್ತೇವೆ’ ಎಂದರು.