‘ಉತ್ತರಾಧಿಕಾರಿಯನ್ನು ಘೋಷಣೆ ಮಾಡುವ ಅಧಿಕಾರ ಚಿತ್ರದುರ್ಗದ ಮುರುಘಾಶರಣರಿಗೆ ಮಾತ್ರ ಇದೆ. ಆ ನಿಯಮವನ್ನು ಮೀರಿ
ನೀಲಲೋಚನಾ ತಾಯಿಯವರನ್ನು ಘೋಷಣೆ ಮಾಡಲಾಗಿತ್ತು. ಮಠದ ಉತ್ತರಾಧಿಕಾರಿಗಳು ಹಿಂದಿನ ಸ್ವಾಮೀಜಿಗಳ
ಸಂಬಂಧಿಯಾಗಿರುವಂತಿಲ್ಲ. ಆದರೆ, ನೀಲಲೋಚನಾ ತಾಯಿ ಅವರು ಹಿಂದೆ ಮಠದ ಪೀಠಾಧಿಪತಿಯಾಗಿದ್ದ ಸ್ವಾಮೀಜಿ ಅವರ ಸಂಬಂಧಿಯಾಗಿದ್ದಾರೆ. ಹೀಗಾಗಿ, ಈ ನಿರ್ಧಾರದ ಬಗ್ಗೆ ಚಿತ್ರದುರ್ಗ ಮುರುಘಾಮಠದವರು ಅತೃಪ್ತಿ ವ್ಯಕ್ತಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.