ಕಮಲಾಪುರ(ಕಲಬುರಗಿ): ತಾಲ್ಲೂಕಿನ ಕಿಣ್ಣ ಸಡಕ್ ಸಮೀಪದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಸೋಮವಾರ ಪಲ್ಟಿಯಾಗಿದ್ದು, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ನಲ್ಲಿ 43 ಜನ ಪ್ರಯಾಣಿಕರಿದ್ದು, ಈ ಪೈಕಿ ನಾಲ್ವರಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ. ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ–ಹೈದರಾಬಾದ್ ನಡುವೆ ಸಂಚರಿಸುತ್ತಿದ್ದ ಬಸ್, ಸೋಮವಾರ ಬೆಳಿಗ್ಗೆ ಹೈದರಾಬಾದ್ನಿಂದ ಕಲಬುರಗಿಗೆ ಬರುತ್ತಿತ್ತು. ಬೆಳಿಗ್ಗೆ 5.30ರ ಸುಮಾರಿಗೆ ಕಿಣ್ಣ ಸಡಕ ಬಳಿ ಸಾಗುತ್ತಿತ್ತು. ದರ್ಗಾ ಸಮೀಪ ಹೊಡ್ಡು ಹಾಗೂ ಹೆದ್ದಾರಿಯ ತಿರುವಿದೆ. ಎದುರಿಗೆ ವೇಗವಾಗಿ ಲಾರಿ ಬರುತ್ತಿದ್ದು ಡಿಕ್ಕಿ ಆಗುವ ಸಂಭವವಿತ್ತು. ಡಿಕ್ಕಿ ತಪ್ಪಿಸಲು ಚಾಲಕ ಬ್ರೇಕ್ ಹಾಕಿ ಪಕ್ಕಕ್ಕೆ ತೆರಳಲು ಪ್ರಯತ್ನಿಸಿದ್ದ. ಆಗ ಆಯ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ಹೇಳಿದ್ದಾರೆ.