ಚಿಕ್ಕೋಡಿ ಸಂಸದ, ಶಶಿಕಲಾ ಅವರ ಪತಿ ಅಣ್ಣಾರಾವ್ ಜೊಲ್ಲೆ ಅವರು ‘ಬಸವದರ್ಶನ’ ಗ್ರಂಥ ಬಿಡುಗಡೆ ಮಾಡಿದರು. ಅಕ್ಕ ಅನ್ನಪೂರ್ಣ ತಾಯಿ, ಸರ್ಕಾರಿ ಅಭಿಯೋಜಕಿ ಅನುರಾಧಾ ದೇಸಾಯಿ, ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ, ಮಾಜಿ ಸಚಿವ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ, ಸಿದ್ರಾಮ ಪ್ಯಾಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ, ರಾಜಶೇಖರ ಯಂಕಂಚಿ ಇದ್ದರು.