ಲಾಕ್ಡೌನ್ ತೆರವುಗೊಂಡ ನಂತರ ಜೂನ್ 8ರಂದು ಎಲ್ಲ ದೇವಸ್ಥಾನಗಳ ಪ್ರವೇಶಕ್ಕೂ ಅವಕಾಶ ನೀಡಲಾಗಿದ್ದು, ದೇವಲ ಗಾಣಗಾಪುರಕ್ಕೆ ಮಾತ್ರ ನಿಷೇಧ ಮುಂದುವರಿಸಲಾಗಿತ್ತು. ದತ್ತಾತ್ರೇಯ ಸ್ವಾಮಿಗೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರದ ಭಕ್ತರೇ ಹೆಚ್ಚಾಗಿದ್ದಾರೆ. ಅಲ್ಲಿ ಕೊರೊನಾ ವೈರಾಣು ಉಪಟಳ ವಿಪರೀತವಾದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ಜೂನ್ 22ರವರೆಗೆ ನಿಷೇಧ ಮುಂದುವರಿಸಲಾಗಿತ್ತು.